July 23, 2026
Mumbai News Kannada
ಪ್ರಕಟಣೆ

ಮುಂಬಯಿ ಕನ್ನಡ ಸಂಘ : ಜ.18 ರಂದು ಶ್ರೀ ಪುರಂದರದಾಸರ ಆರಾಧನೆ







 

ನಿರಂತರ ಕನ್ನಡದ ಸೇವೆಯಲ್ಲಿ  90 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವ ಮಾಟುಂಗಾ ಪೂರ್ವದ ಮುಂಬಯಿ ಕನ್ನಡ ಸಂಘದ ವತಿಯಿಂದ
ರವಿವಾರ ಜನವರಿ 18 ರಂದು ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವವನ್ನು ನಡೆಸಲು ಯೋಜಿಸಲಾಗಿದೆ.  ಅಂದು ಸಂಜೆ ಗಂಟೆ 5-30ಕ್ಕೆ
ಮಾಟುಂಗಾದ ಮೈಸೂರು ಅಸೋಸಿಯೇಷನ್‌ನ ಕಿರು ಸಭಾಗೃಹದಲ್ಲಿ ಜರಗಲಿರುವ ಈ ಸಮಾರಂಭಕ್ಕೆ ಕನ್ನಡ ಕಲಾಕೇಂದ್ರ, ಮುಂಬಯಿ ಇದರ ಅಧ್ಯಕ್ಷ ಹಾಗೂ ಉದ್ಯಮಿ ಟಿ.ಆರ್‌.ಮಧುಸೂದನ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅಂದಿನ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬಯಿ ಕನ್ನಡ ಸಂಘದ ಅಧ್ಯಕ್ಷರಾದ ಗುರುರಾಜ ಎಸ್‌.ನಾಯಕ್‌ ವಹಿಸಲಿದ್ದಾರೆ.
ಬಳಿಕ ಶೀ ರಾಮ ಭಜನಾ ಮಂಡಳ, ಪುಣೆ ಇದರ ಸದಸ್ಯರು ಶ್ರೀ ಪುರಂದರದಾಸರ ಕೀರ್ತನೆಗಳನ್ನು ಸಾದರಪಡಿಸಲಿದ್ದಾರೆ.  ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಶ್ರೀ ರಾಮ ಭಜನಾ ಮಂಡಳವು ಕಳೆದ 18 ತಿಂಗಳಲ್ಲಿ ಪುಣೆಯಾದ್ಯಂತ ಸುಮಾರು 40 ಕಡೆ ತಮ್ಮ ಭಜನಾ ಕಾರ್ಯಕ್ರಮಗಳನ್ನು ನಡೆಸಿ ಅಪಾರ ಜನ ಮನ್ನಣೆಗಳಿಸಿದೆ.  ಈ ತಂಡವು ಪ್ರಥಮ ಬಾರಿಗೆ ಮುಂಬಯಿಯಲ್ಲಿ ತಮ್ಮ ಭಜನಾ ಸೇವೆಯನ್ನು ನೀಡುತ್ತಿದ್ದು ಶ್ರೀ ದತ್ತಾತ್ರೇಯ ರಾವ್‌ ಅವರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಮ ಭಜನಾ ಮಂಡಳದಲ್ಲಿ ಅನುಪಮಾ ಶಣೈ, ಅರ್ಚನಾ ಪೈ, ದತ್ತಾತ್ರೇಯ ರಾವ್‌, ಗೀತಾ ಪ್ರಭು, ಗಿರೀಶ್ಚಂದ್ರ ಪೈ, ಕಮಾಕ್ಷಿ ಕಿಣಿ, ಮಿನಾಕ್ಷಿ ರಾವ್‌, ಪ್ರಭಾ ಕಿಣಿ, ರೇಖಾ ಶಾನುಭಾಗ್‌, ಶ್ವೇತಾ ಶಾನುಭಾಗ್‌, ಸ್ಮಿತಾ ಬಾಳಿಗಾ, ಸುಧಾ ಪ್ರಭು, ವೈಶಾಲಿ ಕಾಮತ್‌, ವಂದನಾ ನಾಯಕ್‌, ವಿಜಯಲಕ್ಷ್ಮೀ ಕಾಮತ್‌, ಯೋಗಿತಾ ಕಾಮತ್‌ ಮುಂತಾದವರು ದಾಸರ ಕೀರ್ತನೆಗಳನ್ನು ಸಾದರಪಡಿಸಲಿದ್ದಾರೆ.

ಈ ಸಮಾರಂಭದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮುಂಬಯಿ ಕನ್ನಡ ಸಂಘದ ಗೌರವ ಪ್ರಧಾನ ಕಾಯದರ್ಶಿ ಸೋಮನಾಥ ಎಸ್‌. ಕರ್ಕೇರರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.               



Related posts

ಮೀರಾರೋಡ್, ಜ: 11: ಬಂಟ್ಸ್ ಫೋರಂ ಮೀರಾ-ಬಾಯಂಧರ್ ಇದರ ಮಹಿಳಾ ಸಮಿತಿಯ ವಾರ್ಷಿಕ ಭಜನಾಮಂಗಳೋತ್ಸವ ಕಾರ್ಯಕ್ರಮ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ್ -ಥಾಣೆ: ಅಕ್ಟೋಬರ್ 17ರಂದು ಮಾಸಿಕ ಸಂಕ್ರಮಣ ಪೂಜೆ

Mumbai News Desk

ಜ.13ಕ್ಕೆ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 63ನೇ ವಾರ್ಷಿಕ ದಿನಾಚರಣೆ

Mumbai News Desk

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ : ಆಗಸ್ಟ್ 2ಕ್ಕೆ ಆಟಿದ ಬೂತಾರಾದನೆ, ಸಾಕ್ಷ ಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿ

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾಗೇಟ್ ಶಹಾಡ್ : ಎ. 12ರಿಂದ ಎ. 21ರ ತನಕ 63ನೇ ವಾರ್ಷಿಕೋತ್ಸವ, 10ನೇ ಪ್ರತಿಷ್ಠ ವರ್ಧಂತಿ ಉತ್ಸವ.

Mumbai News Desk

ಕುಲಾಲ ಸಂಘ ಮುಂಬಯಿ – ಸೆ. 22ರಂದು ನವಿ ಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ,

Mumbai News Desk