30.5 C
Mumbai
June 8, 2026
Mumbai News Kannada
ಮುಂಬಯಿ

‘ಡೊಂಬಿವಲಿಯ ಓಂಕಾರ ಕೇಂಬ್ರಿಜ್ ಇಂಟರ್ ನ್ಯಾಸನಲ್ ಶಾಲೆಗೆ ವಿಜ್ಞಾನ ಸ್ಪರ್ಧೆಯಲ್ಲಿ ಪಶ್ಚಿಮ ಭಾರತದಲ್ಲಿ OCIS ಮೊದಲ ಸ್ಥಾನ’





ಡೊಂಬಿವಲಿ: ಡೊಂಬಿವಲಿಯ ಪೂರ್ವದಲ್ಲಿ ಹೆಮ್ಮೆಯ ಶೈಕ್ಷಣಿಕ ಸಾಧನೆಯನ್ನು ಆಚರಿಸಲಾಯಿತು. ಡೊಂಬಿವಲಿಯ ಪೂರ್ವದಲ್ಲಿರುವ ಓಂಕಾರ್ ಕೇಂಬ್ರಿಜ್ ಇಂಟರ್‌
ನ್ಯಾಷನಲ್ ಶಾಲೆ (OCIS) ಕೇಂಬ್ರಿಜ್ ಇಂಟರ್‌ ನ್ಯಾಷನಲ್ ಎಜುಕೇಶನ್ ಆಯೋಜಿಸಿದ “ಪ್ಲಾನೆಟ್ ಅಂಡರ್ ದ ಮೈಕ್ರೋಸ್ಕೋಪ್” ಎಂಬ ಕೇಂಬ್ರಿಜ್ ಲೋವರ್ ಸೆಕೆಂಡರಿ ವಿಜ್ಞಾನ ಸ್ಪರ್ಧೆಯಲ್ಲಿ ಪಶ್ಚಿಮ ಪ್ರದೇಶದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು ಶಾಲೆಗೆ ಹೆಮ್ಮೆ ಪಡೆದಿದೆ.ಈ ಶಾಲೆಯ ವತಿಯಿಂದ ಪ್ರತಿಷ್ಟಿತ ಪ್ರತಿಭಾ ಸ್ಪರ್ಧೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

7ನೇ ತರಗತಿಯ ತಂಡವಾದ ತನೂಷ್ ದಳವಿ, ಸಾನ್ವಿ ಕದಮ್, ರಿಯನ್ ಕುಲಕರ್ಣಿ, ಆರೂಷಿ ಶೆಟ್ಟಿ ಮತ್ತು ಇಶಾನ್ ಹೊಸ್ಕೋಟಿ – “ಸಸ್ಟೇನಬಿಲಿಟಿ ಮೇಲೆ ಕೇಂದ್ರೀಕರಿಸಿ ಮಣ್ಣಿನ ಸೂಕ್ಷ್ಮಜೀವಿಗಳನ್ನು ಬಳಸಿ ಎಣ್ಣೆಯನ್ನು ವಿಭಜಿಸುವ ಕುರಿತು ಅಧ್ಯಯನ” ಮಾಡಿದ ತಮ್ಮ ಯೋಜನೆಗಾಗಿ ಪ್ರಶಂಸೆಗೆ ಪಾತ್ರರಾದರು.ವೈಜ್ಞಾನಿಕ ವಿಚಾರವು ಪರಿಸರದ ಜಾಗರಣೆ ಮತ್ತು ವಾಸ್ತವಿಕ ಜೀವನದ ಸಮಸ್ಯೆಯ ನೆಲೆಯಲ್ಲಿ ನಿತ್ಯ ಸಮಾಧಾನದ ತಿಳುವಳಿಕೆಯನ್ನು ಸ್ಪಷ್ಟವಾಗಿ ಪರಿಪೂರ್ಣವಾಗಿ ಮೂಡಿ ಬಂದಿರುವುದು ಕಂಡು ಬಂದಿತು.

ಶಿಕ್ಷಕಿ ಮಿಸ್ ಸ್ವಾತಿ ಪಾಂಡೆ ಅವರ ಮಾರ್ಗದರ್ಶನದಲ್ಲಿ, ಪ್ರಾಂಶುಪಾಲರಾದ ಡಾ. ಅನುಜಾ ನಾಯಕ್, ಉಪ ಪ್ರಾಂಶುಪಾಲರಾದ ಮಿಸ್ ರೇನು ಪಿಳ್ಳೈ ಮತ್ತು ಡಾ. ನೆಹಾ ನೋಹ್ವರ್ ಅವರ ನೆರವು ಹಾಗೂ ಪೋಷಕರ ಬಲವಾದ ಸಹಕಾರದೊಂದಿಗೆ ಈ ಸಾಧನೆ ಸಾಧ್ಯವಾಯಿತು. ಫೆಬ್ರವರಿ 4ರಂದು ನಡೆದ ಆನ್‌ಲೈನ್ ಅಭಿನಂದನಾ ಸಮಾರಂಭದಲ್ಲಿ ಡಾ. ಡೇವಿಡ್ ಮಾರ್ಟಿಂಡಿಲ್, ಶ್ರೀ ವಿನಯ್ ಶರ್ಮಾ ಮತ್ತು ಶ್ರೀ ಅರುಣ್ ರಾಜಮಣಿ ಭಾಗವಹಿಸಿ ಈ ಯಶಸ್ಸನ್ನು ಗೌರವಿಸಿದರು.

ವಿಜ್ಞಾನ ಸ್ಪರ್ಧೆಯ ಯಶಸ್ವಿ ಕಾಣಲು ಓಂಕಾರ ಇಂಟರ್ ನ್ಯಾಷನಲ್ ಶಾಲೆಯ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಇದರಲ್ಲಿ ಕೇಂಬ್ರಿಜ್ ಪಠ್ಯಕ್ರಮದ ಮಾಧ್ಯಮದ ಮುಖೇನ ಆಲೋಚನಾತ್ಮಕ ಚಿಂತನೆ ಮತ್ತು ಹೊಸ ಶೋಧ ಆಧಾರದ ಮೇಲೆ ಶಿಕ್ಷಣದ ಅಭಿವೃದ್ಧಿಯ ಮೇಲೆ ಶಕ್ತಿ ಕಂಡು ಕೊಂಡಾಯಿತು. ಇದರಿಂದ ವಿದ್ಯಾರ್ಥಿಗಳ ಉತ್ತಮ ನಾಗರೀಕ ಮತ್ತು ಭವಿಷ್ಯ ರೂಪಿಸುವಲ್ಲಿ ಇಂತಹ ವಿಜ್ಞಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು.



Related posts

ಸಾಯಿನಾಥ ಮಿತ್ರ ಮಂಡಳಿಯಿಂದ ಹೊರೆ ಕಾಣಿಕೆ ಮೆರವಣಿಗೆ

Mumbai News Desk

ಬಂಟರ ಸಂಘ ಮುಂಬಯಿ ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಆಯೋಜಿಸಿದ ಆರೋಗ್ಯ ಉಪನ್ಯಾಸ.

Mumbai News Desk

ಎಸ್ ಎಸ್ ಸಿ ಯಲ್ಲಿ ಅನನ್ಯಾ ಹರೀಶ್ ಪೂಜಾರಿ ಶೇ 97.80 ಅಂಕ

Mumbai News Desk

ಗೋರೆಗಾಂವ್ : ಸುಂದರಿ ಎಸ್ ಪಡುಬಿದ್ರಿ ನಿಧನ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನೀಲ್ ರಾಜೇಶ್ ಶೆಟ್ಟಿ ಶೇ 91.20 ಅಂಕ.

Mumbai News Desk

ಮೀರಾರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ವಿಜೃಂಭಣೆ ಯಿಂದ ಸಂಪನ್ನ

Mumbai News Desk