31.6 C
Mumbai
June 7, 2026
Mumbai News Kannada
ಮುಂಬಯಿ

ಚೆಂಬೂರು ಬಸವೇಶ್ವರ ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ದತ್ತಿ ಉಪನ್ಯಾಸ, ಸಂಸ್ಕಾರದಿಂದಲೇ ಸಂಸ್ಕೃತಿಯ ಪ್ರಗತಿ- ಡಾ. ಭರತ್ ಕುಮಾರ್ ಪೊಲಿಪು





ಮುಂಬಯಿ, ಫೆ. 15 – ಶರಣರ ವಚನಗಳನ್ನು ಮಕ್ಕಳ ಮನದಲ್ಲಿ ಮೂಡಿಸಿ ಅವರ ಬದುಕನ್ನು ಉಜ್ವಲಗೊಳಿಸಲು ಬಾಲ್ಯದಿಂದಲೇ ಸಂಸ್ಕಾರಗೊಳಿಸಬೇಕೆಂದು ಡಾ. ಭರತ್ ಕುಮಾರ್ ಪೊಲಿಪು ಅವರು ನುಡಿದರು. 

  ಬಸವೇಶ್ವರ ಫಿಲಾಸಫಿಕಲ್ ಆ್ಯಂಡ್ ಕಲ್ಬರಲ್ ಸೊಸೈಟಿ ಚೆಂಬೂರು ಇಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಎನ್. ಬಿ. ಸಾವಳಸಂಗರು ಸ್ವಾಗತಗೈದರು. ಹಿರಿಯರಾದ ವಿ. ವಿ. ಬಳಿಗಾರ ಹಾಗೂ ಸಂಸ್ಥೆಯ ಪದಾಧಿಕಾರಿ ಎನ್. ಬಿ. ಸಾವಳಸಂಗ, ಗಿರೀಶ್ ಸಾರವಾಡ ವೀರಭದ್ರಯ್ಯ ಹಮ್ಮಿಗಿಮಠ ದುಂಡೇಶ ಗಲಗಲಿ ಇನ್ನಿತರ ಗಣ್ಯರು ದೀಪ ಪ್ರಜ್ವಲನೆಗೈದರು. ಲಲಿತಾ ಮತ್ತು ಸಂಗಡಿಗರು ಪ್ರಾರ್ಥನೆಗೈದರು.

ವಚನ ಸಂಗೀತಗಾರರಾದ ಗಿರೀಶ್ ಸಾರವಾಡ ಮತ್ತು ವೀರಭದ್ರಯ್ಯ ಹಮ್ಮಿಗಿಮಠ ಇವರಿಂದ ವಚನಸುಧೆ ನಡೆಯಿತು. ಜಗಮಿಸಿದ ಅತಿಥಿಗಳಿಗೆ, ಸಂಗೀತಗಾರರಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್. ಬಿ. ಸಾವಳಸಂಗರವರು ಶಾಲು, ಹೂಗುಚ್ಛ ಮತ್ತು ನೆನಪಿನಕಾಣಿಕೆಯನ್ನಿತ್ತು ಸನ್ಮಾನಿಸಿದರು. ಅತಿಥಿಗಳ ಪರಿಚಯವನ್ನು ಲಲಿತಾ ಅಂಗಡಿಯವರು ಗೈದರು. ಅಮರೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಕರಜಗಿಯವರು ವಂದಿಸಿದರು.



Related posts

ಮುಂಬೈಯ ಪತ್ರಕರ್ತರ ಹೆಸರಲ್ಲಿ ನಡೆಸುತ್ತಿರುವ ಸಂಘಟನೆ ಯಲ್ಲಿ ಗೊಂದಲ.

Mumbai News Desk

ಬಂಟರ ಸಂಘ ಮುಂಬಯಿ,  ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಅಷ್ಟಾದಶ ಸಂಭ್ರಮ

Mumbai News Desk

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ : 79ನೇ ವಾರ್ಷಿಕ ಮಹಾಸಭೆ,

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಗ್ರೀಷ್ಮ ಪ್ರಕಾಶ್ ಕರ್ಕೇರ ಗೆ ಶೇ 82 ಅಂಕ.

Mumbai News Desk

ಚಾರ್ಕೋಪ್ ಕನ್ನಡಿಗರ ಬಳಗದ ರಜತ ಮಹೋತ್ಸದ ಸಂಭ್ರಮ ಉದ್ಘಾಟನೆ

Mumbai News Desk

ಮುಂಬಯಿ: ಅಪ್ಪಾಜಿ ಬೀಡು ಫೌಂಡೇಶನ್‌ನಿಂದ 31ನೇ ವರ್ಷದ ಅಯ್ಯಪ್ಪ ಮಹಾಪೂಜೆ ಸಂಪನ್ನ

Mumbai News Desk