July 22, 2026
Mumbai News Kannada
ಮುಂಬಯಿ

ಚೆಂಬೂರು ಬಸವೇಶ್ವರ ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ದತ್ತಿ ಉಪನ್ಯಾಸ, ಸಂಸ್ಕಾರದಿಂದಲೇ ಸಂಸ್ಕೃತಿಯ ಪ್ರಗತಿ- ಡಾ. ಭರತ್ ಕುಮಾರ್ ಪೊಲಿಪು







ಮುಂಬಯಿ, ಫೆ. 15 – ಶರಣರ ವಚನಗಳನ್ನು ಮಕ್ಕಳ ಮನದಲ್ಲಿ ಮೂಡಿಸಿ ಅವರ ಬದುಕನ್ನು ಉಜ್ವಲಗೊಳಿಸಲು ಬಾಲ್ಯದಿಂದಲೇ ಸಂಸ್ಕಾರಗೊಳಿಸಬೇಕೆಂದು ಡಾ. ಭರತ್ ಕುಮಾರ್ ಪೊಲಿಪು ಅವರು ನುಡಿದರು. 

  ಬಸವೇಶ್ವರ ಫಿಲಾಸಫಿಕಲ್ ಆ್ಯಂಡ್ ಕಲ್ಬರಲ್ ಸೊಸೈಟಿ ಚೆಂಬೂರು ಇಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಎನ್. ಬಿ. ಸಾವಳಸಂಗರು ಸ್ವಾಗತಗೈದರು. ಹಿರಿಯರಾದ ವಿ. ವಿ. ಬಳಿಗಾರ ಹಾಗೂ ಸಂಸ್ಥೆಯ ಪದಾಧಿಕಾರಿ ಎನ್. ಬಿ. ಸಾವಳಸಂಗ, ಗಿರೀಶ್ ಸಾರವಾಡ ವೀರಭದ್ರಯ್ಯ ಹಮ್ಮಿಗಿಮಠ ದುಂಡೇಶ ಗಲಗಲಿ ಇನ್ನಿತರ ಗಣ್ಯರು ದೀಪ ಪ್ರಜ್ವಲನೆಗೈದರು. ಲಲಿತಾ ಮತ್ತು ಸಂಗಡಿಗರು ಪ್ರಾರ್ಥನೆಗೈದರು.

ವಚನ ಸಂಗೀತಗಾರರಾದ ಗಿರೀಶ್ ಸಾರವಾಡ ಮತ್ತು ವೀರಭದ್ರಯ್ಯ ಹಮ್ಮಿಗಿಮಠ ಇವರಿಂದ ವಚನಸುಧೆ ನಡೆಯಿತು. ಜಗಮಿಸಿದ ಅತಿಥಿಗಳಿಗೆ, ಸಂಗೀತಗಾರರಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್. ಬಿ. ಸಾವಳಸಂಗರವರು ಶಾಲು, ಹೂಗುಚ್ಛ ಮತ್ತು ನೆನಪಿನಕಾಣಿಕೆಯನ್ನಿತ್ತು ಸನ್ಮಾನಿಸಿದರು. ಅತಿಥಿಗಳ ಪರಿಚಯವನ್ನು ಲಲಿತಾ ಅಂಗಡಿಯವರು ಗೈದರು. ಅಮರೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಕರಜಗಿಯವರು ವಂದಿಸಿದರು.



Related posts

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ. ರಜತ ಮಹೋತ್ಸವದ ಕಾರ್ಯ ಧ್ಯಕ್ಷರಾಗಿ  ಕಡಂದಲೆ ಪರಾರಿ ನ್ಯಾ, ಪ್ರಕಾಶ್ ಎಲ್ ಶೆಟ್ಟಿ ಆಯ್ಕೆ,

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್ 35ನೇ ವಾರ್ಷಿಕ ಮಹಾಪೂಜೆ

Mumbai News Desk

ಕರ್ನಾಟಕ ಸಂಘ ಡೊಂಬಿವಲಿಯ ಮಂಜುನಾಥ ಮಹಾವಿದ್ಯಾಲಯದಲ್ಲಿ ಜ್ಞಾನದ ಹೊಸ ಪರ್ವ ಆರಂಭ: ಕಲಾ ಮತ್ತು ವಿಜ್ಞಾನ ಪದವಿಪೂರ್ವ ವಿಭಾಗಗಳಿಗೆ ವಿಧ್ಯುಕ್ತ ಚಾಲನೆ

Mumbai News Desk

ಚಂದ್ರಶೇಖರ್ ಬಾವಂಕುಲೆ ಯವರಿಗೆ ರಥನ್ ಪೂಜಾರಿಯವರಿಂದ ಸನ್ಮಾನ.

Mumbai News Desk

ಟೆಂಡರ್ ಫ್ರೆಶ್ ಐಸ್ಕ್ರೀಂಮ್ ಗೆ ಟೈಮ್ಸ್ ಆಫ್ ಇಂಡಿಯಾ ಪ್ರಶಸ್ತಿ.

Mumbai News Desk

ಮಂಜುನಾಥ ವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಕಾಡೆಮಿ ವರ್ಷದ ಪ್ರಶಸ್ತಿ ಪ್ರಧಾನ

Mumbai News Desk