April 23, 2026
Mumbai News Kannada
ಮುಂಬಯಿ

ಚೆಂಬೂರು ಬಸವೇಶ್ವರ ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ದತ್ತಿ ಉಪನ್ಯಾಸ, ಸಂಸ್ಕಾರದಿಂದಲೇ ಸಂಸ್ಕೃತಿಯ ಪ್ರಗತಿ- ಡಾ. ಭರತ್ ಕುಮಾರ್ ಪೊಲಿಪು





ಮುಂಬಯಿ, ಫೆ. 15 – ಶರಣರ ವಚನಗಳನ್ನು ಮಕ್ಕಳ ಮನದಲ್ಲಿ ಮೂಡಿಸಿ ಅವರ ಬದುಕನ್ನು ಉಜ್ವಲಗೊಳಿಸಲು ಬಾಲ್ಯದಿಂದಲೇ ಸಂಸ್ಕಾರಗೊಳಿಸಬೇಕೆಂದು ಡಾ. ಭರತ್ ಕುಮಾರ್ ಪೊಲಿಪು ಅವರು ನುಡಿದರು. 

  ಬಸವೇಶ್ವರ ಫಿಲಾಸಫಿಕಲ್ ಆ್ಯಂಡ್ ಕಲ್ಬರಲ್ ಸೊಸೈಟಿ ಚೆಂಬೂರು ಇಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಎನ್. ಬಿ. ಸಾವಳಸಂಗರು ಸ್ವಾಗತಗೈದರು. ಹಿರಿಯರಾದ ವಿ. ವಿ. ಬಳಿಗಾರ ಹಾಗೂ ಸಂಸ್ಥೆಯ ಪದಾಧಿಕಾರಿ ಎನ್. ಬಿ. ಸಾವಳಸಂಗ, ಗಿರೀಶ್ ಸಾರವಾಡ ವೀರಭದ್ರಯ್ಯ ಹಮ್ಮಿಗಿಮಠ ದುಂಡೇಶ ಗಲಗಲಿ ಇನ್ನಿತರ ಗಣ್ಯರು ದೀಪ ಪ್ರಜ್ವಲನೆಗೈದರು. ಲಲಿತಾ ಮತ್ತು ಸಂಗಡಿಗರು ಪ್ರಾರ್ಥನೆಗೈದರು.

ವಚನ ಸಂಗೀತಗಾರರಾದ ಗಿರೀಶ್ ಸಾರವಾಡ ಮತ್ತು ವೀರಭದ್ರಯ್ಯ ಹಮ್ಮಿಗಿಮಠ ಇವರಿಂದ ವಚನಸುಧೆ ನಡೆಯಿತು. ಜಗಮಿಸಿದ ಅತಿಥಿಗಳಿಗೆ, ಸಂಗೀತಗಾರರಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್. ಬಿ. ಸಾವಳಸಂಗರವರು ಶಾಲು, ಹೂಗುಚ್ಛ ಮತ್ತು ನೆನಪಿನಕಾಣಿಕೆಯನ್ನಿತ್ತು ಸನ್ಮಾನಿಸಿದರು. ಅತಿಥಿಗಳ ಪರಿಚಯವನ್ನು ಲಲಿತಾ ಅಂಗಡಿಯವರು ಗೈದರು. ಅಮರೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಕರಜಗಿಯವರು ವಂದಿಸಿದರು.



Related posts

ಶಹಾಡ್‌ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಪನ್ನ

Mumbai News Desk

*ದಿ. ಜ್ಯೋತಿ ಸುವರ್ಣರಿಗೆ  ಶ್ರದ್ಧಾಂಜಲಿ ಸಭೆ.

Mumbai News Desk

ಮಲಾಡ್ ಕನ್ನಡ ಸಂಘ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ಟೆಂಡರ್ ಫ್ರೆಶ್ ಐಸ್ಕ್ರೀಂಮ್ ಗೆ ಟೈಮ್ಸ್ ಆಫ್ ಇಂಡಿಯಾ ಪ್ರಶಸ್ತಿ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯವತಿಯಿಂದಸಮಾಜದ ಮಹಿಳೆಯರಿಗಾಗಿ ಆಯೋಜಿಸಿದ ಹೂವಿನ ರಂಗೋಲಿ ಸ್ಪರ್ಧೆ :

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಕೆ ಭೋಜರಾಜ್ ರವರಿಗೆ ನುಡಿ ನಮನ ಕಾರ್ಯಕ್ರಮ.

Mumbai News Desk