April 23, 2026
Mumbai News Kannada
ಪ್ರಕಟಣೆ

ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನ: ಫೆ. 21ಕ್ಕೆ ಭಜನಾ ಮಂಗಳೋತ್ಸವ; ಫೆ. 28ಕ್ಕೆ ಧರ್ಮ ದೈವದ ನೇಮೋತ್ಸವ





ಹೆಜಮಾಡಿ: ಇಲ್ಲಿನ ಪ್ರಸಿದ್ಧ ನಡಿಕುದ್ರು ಶ್ರೀ ಧರ್ಮದೈವ ಜಾರಂದಾಯ ದೈವಸ್ಥಾನದಲ್ಲಿ, ಶ್ರೀ ಜಾರಂದಾಯ ಸೇವಾ ಯುವಕ ವೃಂದದ 48ನೇ ವಾರ್ಷಿಕ ಭಜನಾ ಮಂಗಳೋತ್ಸವ ಮತ್ತು ಧರ್ಮ ದೈವದ ನೇಮೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ.
ಫೆಬ್ರವರಿ 21, ಶನಿವಾರದಂದು ದೈವಸ್ಥಾನದ ಆವರಣದಲ್ಲಿ ಭಜನಾ ಮಂಗಳೋತ್ಸವದ ಅಂಗವಾಗಿ ಬೆಳಿಗ್ಗೆ ಪಂಚಕಜ್ಜಾಯ ಸೇವೆಯಾದ ಬಳಿಕ ಸೂರ್ಯಸ್ತದಿಂದ ಮರುದಿನ ಸೂರ್ಯೋದಯದವರೆಗೆ ವಿವಿಧ ಭಜನಾ ಮಂಡಳಿಯರಿಂದ ಭಜನಾ ಕಾರ್ಯಕ್ರಮ ಜರಗಲಿರುವುದು.ಮರುದಿನ ಬೆಳಿಗ್ಗೆ ಮಂಗಲೋತ್ಸವದ ಪ್ರಸಾದ ವಿತರಣೆಯಾಗಲಿದೆ.

28.02.26ರ ಕಾರ್ಯಕ್ರಮಗಳು :

ಬೆಳಿಗ್ಗೆ 7ಕ್ಕೆ – ನವಕಲಶಾಭಿಷೇಕ
8 ಗಂಟೆಗೆ – ನಾಗದೇವರಿಗೆ ಹಾಲು ಅಭಿಷೇಕ
ಗಂಟೆ 11ಕ್ಕೆ – ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಹಾಗೂ ಡಾ. ರೇಷ್ಮಾ ರಾಜೇಶ್ ಸನಿಲ್ ನಡಿಕುದ್ರು ಹಾಗೂ ಡಾ. ಪೂರ್ವಿ ಪ್ರವೀಣ್ ನಡಿಕುದ್ರು ಇವರಿಗೆ ಸನ್ಮಾನ ಕಾರ್ಯಕ್ರಮ
ಮಧ್ಯಾಹ್ನ ಗಂಟೆ 12ಕ್ಕೆ – ಪುಷ್ಪಲತಾ ನರಸಪ್ಪ ಸಾಲಿಯನ್ ಮುಂಬೈ ಹಾಗೂ ಲೀಲಾವತಿ ಜಗನ್ನಾಥ್ ವಿ ಕೋಟ್ಯಾನ್ ಮುಂಬೈ ಇವರ ವತಿಯಿಂದ ಮಹಾ ಅನ್ನಸಂತರ್ಪಣೆ ರಾತ್ರಿ 7ಕ್ಕೆ – ಭಂಡಾರ ಇಳಿಯುವುದು
ರಾತ್ರಿ 8ಕ್ಕೆ – ಜಾರಂದಾಯ ದರ್ಶನ ಪಾತ್ರಿ ಹೆಜಮಾಡಿ ದಿ. ಚೆನ್ನಪ್ಪ ಪೂಜಾರಿ ಮತ್ತು ಇವರ ಧರ್ಮಪತ್ನಿ ದಿ.ಪದ್ಮಾವತಿ ಇವರ ಸ್ಮರಣಾರ್ಥ ಮಕ್ಕಳ ವತಿಯಿಂದ ಅನ್ನ ಸಂತರ್ಪಣೆ ರಾತ್ರಿ 9ಕ್ಕೆ – ಮೈಸಂದ್ರಾಯ ನೇಮ
ರಾತ್ರಿ 10ಕ್ಕೆ – ಧರ್ಮದೈವ ಜಾರಂದಾಯ ಬಂಟ ಪರಿವಾರ ದೈವಗಳ ಗಡುವಾಡು ನೇಮೋತ್ಸವ.

ಕ್ಷೇತ್ರದ ಪ್ರಧಾನ ದೈವವಾದ ಶ್ರೀ ಜಾರಂದಾಯ ದೈವದ ನೇಮೋತ್ಸವವು ಪರಂಪರೆಯಂತೆ ವಿಜೃಂಭಣೆಯಿಂದ ನಡೆಯಲಿದೆ. ತುಳುನಾಡಿನ ದೈವಾರಾಧನೆಯ ಈ ಭವ್ಯ ಆಚರಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಶ್ರೀ ಜಾರಂದಾಯ ಸೇವಾ ಸಮಿತಿ ನಡಿಕುದ್ರು ಇದರ ವತಿಯಿಂದ ನಡೆಯುವ ಈ ಕಾರ್ಯಕ್ರಮಗಳಿಗೆ ಊರ-ಪರವೂರ ಸಮಸ್ತ ಭಕ್ತಾದಿಗಳು ಆಗಮಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಅರ್ಚಕರಾದ ಗಂಗೆ ಬೈದೆತಿ ನಟ್ಟಿ ಸಾನದ ಮನೆ, ನಡಿಕುದ್ರು ಗ್ರಾಮದ ಗುರಿಕಾರರು ಮತ್ತು 10 ಸಮಸ್ತರು, ಶ್ರೀ ಜಾರಂದಾಯ ಸೇವಾ ಸಮಿತಿ ನಡಿಕುದ್ರು ಮತ್ತು ಮುಂಬೈ, ಶ್ರೀ ಜಾರಂದಾಯ ಸೇವಾ ಯುವಕ ವೃಂದ ಮತ್ತು ಮಹಿಳಾ ವೃಂದ ನಡಿಕುದ್ರು ವಿನಂತಿಸಿದ್ದಾರೆ.



Related posts

ಬಿಲ್ಲವರ ಅಸೋಸಿಯೇಷನ್ ಮುಂಬಯಿ: ಎ. 18ರಂದು 2025ನೇ ಸಾಲಿನ ‘ಶ್ರೀ ಗುರುನಾರಾಯಣ ಪ್ರಶಸ್ತಿ’ ಶ್ರೀ ಗುರುನಾರಾಯಣ ಯಕ್ಷಗಾನ ಕಲಾ ಪ್ರಶಸ್ತಿ ಪ್ರದಾನ ಸಮಾರಂಭ

Mumbai News Desk

ಮುಂಬೈ: ಯಕ್ಷಗಾನದ ಕಂಪನ್ನು ಪಸರಿಸುತ್ತಿರುವ ‘ಯಕ್ಷಪ್ರಿಯ ಬಳಗ’; ಫೆ. 14ರಂದು ಯಕ್ಷನವಮಿ ಸಂಭ್ರಮ

Mumbai News Desk

ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 64ನೇ ವಾರ್ಷಿಕೋತ್ಸವ: ಏ. 12ರಿಂದ ಧಾರ್ಮಿಕ ಸಂಭ್ರಮ

Mumbai News Desk

ಬಿ.. ಎಸ್ ಕೆ.ಬಿ. ಎಸೋಸಿಯೇಶನ್, ಗೋಕುಲ – ಶತಮಾನೋತ್ಸವ ಸಂಭ್ರಮಾಚರಣೆಗೆ ಸರ್ವಸಿದ್ಧತೆ

Mumbai News Desk

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 

Mumbai News Desk

ಭಾಯಂದರ್: ಏಪ್ರಿಲ್ 12 ರಂದು ಶ್ರೀ ಮೂಕಾಂಬಿಕಾ ಶಾಂತದುರ್ಗಾ ದೇವಸ್ಥಾನದ ವಾರ್ಷಿಕ ಮಹಾಪೂಜೆ

Mumbai News Desk