September 6, 2026
Mumbai News Kannada
ಸುದ್ದಿ

ಮುಂಬೈ : ಜೈಹಿಂದ್ ಸ್ಪೋರ್ಟ್ಸ್ ಕ್ಲಬ್ ಸಂಸ್ಥಾಪಕ ಸದಸ್ಯ ನಾರಾಯಣ ಉಚ್ಚಿಲ್ ನಿಧನ






ಜೈಹಿಂದ್ ಸ್ಪೋರ್ಟ್ಸ್ ಕ್ಲಬ್‌ನ (JSC) ಸಂಸ್ಥಾಪಕ ಸದಸ್ಯರು ಹಾಗೂ ಕ್ಲಬ್‌ನ ಪ್ರಥಮ ಕೋಶಾಧಿಕಾರಿಗಳಾದ ಶ್ರೀ ನಾರಾಯಣ್ ಕೆ. ಉಚ್ಚಿಲ್ (100) ಅವರು ಇಂದು ನಿಧನರಾಗಿದ್ದಾರೆ. ಕ್ರೀಡಾ ವಲಯದಲ್ಲಿ “ಸಾಯ್ಬೆರು” ಎಂದೇ ಅತ್ಯಂತ ಜನಪ್ರಿಯರಾಗಿದ್ದ ಇವರು, ಸಮುದಾಯದ ಪ್ರಸಿದ್ಧ ಕ್ರೀಡಾ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದರು.

1945ರಲ್ಲಿ ಜೈಹಿಂದ್ ಸ್ಪೋರ್ಟ್ಸ್ ಕ್ಲಬ್ ಅನ್ನು ಅಸ್ತಿತ್ವಕ್ಕೆ ತಂದ ಆಶಯದ ತಂಡದಲ್ಲಿ ಉಚ್ಚಿಲ್ ಅವರು ಪ್ರಮುಖರು. ಅವರ ಅಂದಿನ ದೂರದೃಷ್ಟಿ ಮತ್ತು ಸಮರ್ಪಣಾ ಮನೋಭಾವವೇ ಇಂದು ಕ್ಲಬ್ ಬೃಹತ್ತಾಗಿ ಬೆಳೆದು ನಿಲ್ಲಲು ಗಟ್ಟಿ ಅಡಿಪಾಯವಾಗಿದೆ. ಫುಟ್ಬಾಲ್ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಅವರು, ಹಲವು ಪಂದ್ಯಾವಳಿಗಳಲ್ಲಿ ಜೈಹಿಂದ್ ತಂಡವನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದರು.

ಕ್ಲಬ್‌ನ ಏಳಿಗೆಗಾಗಿ ಮತ್ತು ಸಮುದಾಯದ ಅಭಿವೃದ್ಧಿಗಾಗಿ ಅವರು ಹಮ್ಮಿಕೊಂಡಿದ್ದ ಹಲವಾರು ಯೋಜನೆಗಳು ಸ್ಮರಣೀಯ. ಕ್ರೀಡೆಯ ಮೇಲಿನ ಅವರ ಅಪಾರ ಪ್ರೀತಿ ಮತ್ತು ನಾಯಕತ್ವದ ಗುಣವು ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಸದಾ ಸ್ಫೂರ್ತಿಯಾಗಿರಲಿದೆ.

ಜೈಹಿಂದ್ ಸ್ಪೋರ್ಟ್ಸ್ ಕ್ಲಬ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. “ನಮ್ಮ ಸಂಸ್ಥಾಪಕ ಸದಸ್ಯರ ಅಗಲಿಕೆ ಕ್ಲಬ್‌ಗೆ ಮತ್ತು ಇಡೀ ಸಮುದಾಯಕ್ಕೆ ತುಂಬಲಾರದ ನಷ್ಟ. ಅವರ ಸೇವೆ ಮತ್ತು ಕ್ರೀಡಾ ಸಾಧನೆಯನ್ನು ನಾವು ಸದಾ ಗೌರವದಿಂದ ಸ್ಮರಿಸುತ್ತೇವೆ,” ಎಂದು ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.
ಮೃತರು ಪುತ್ರಿಯರು, ಪುತ್ರ,, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಜೈಹಿಂದ್ ಸ್ಪೋರ್ಟ್ಸ್ ಕ್ಲಬ್‌ನ ಎಲ್ಲಾ ಸದಸ್ಯರು ಪ್ರಾರ್ಥಿಸಿದ್ದಾರೆ.



Related posts

ಧರ್ಮಸ್ಥಳ : ಸಾಮೂಹಿಕ ಅಂತ್ಯಕ್ರಿಯೆಗಳ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ವೀರೇಂದ್ರ ಹೆಗ್ಗಡೆ, ಕ್ಷೇತ್ರದ ಆರೋಪಗಳು ಆಧಾರರಹಿತ, ಎಸ್‌ಐಟಿಗೆ ಸ್ವಾಗತ: ವೀರೇಂದ್ರ ಹೆಗ್ಗಡೆ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (11/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಡಾ.ಈಶ್ವರ ಅಲೆವೂರು ಅವರಿಗೆ  ಕೆ.ವಿ.ಆರ್ ಠಾಗೋರ್ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ

Mumbai News Desk

ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಶ್ರೀರಕ್ಷೆಯೇ, ಸಾಧನೆಗೆ ಪ್ರೇರಣೆ : ದೇವಿಪ್ರಸಾದ್ ಶೆಟ್ಟಿ ಬೆಳಪು.

Mumbai News Desk

ಪೊವಾಯಿ: ರಾಘು ವಿ ಶೆಟ್ಟಿ ನಿಧನ

Mumbai News Desk

ಮಲಾಡ್ ಪೂರ್ವ:ವಿನುತಾ ರಾವ್ (ರೇಖಾ) ನಿಧನ.

Mumbai News Desk