30 C
Mumbai
April 24, 2026
Mumbai News Kannada
ತುಳುನಾಡು

ಹೊಸಬೆಟ್ಟಿನಲ್ಲಿ ಅಹೋರಾತ್ರಿ ತಾಳಮದ್ದಳೆ: ಶಿವ-ಶಕ್ತಿ ಸಮಾಗಮ, ಇಂದ್ರಜಿತು ಕಾಳಗದ ವೈಭವ





ಮಂಗಳೂರು: ಸುರತ್ಕಲ್‌ನ ಶಾರದಾ ಮಾಸದ ಕೂಟದ ಆಶ್ರಯದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಹೊಸಬೆಟ್ಟು ಶಾರದಾ ಮಂದಿರದಲ್ಲಿ ಇತ್ತೀಚೆಗೆ ‘ಗಿರಿಜಾ ಕಲ್ಯಾಣ – ಇಂದ್ರಜಿತು ಕಾಳಗ’ ಅಹೋರಾತ್ರಿ ಯಕ್ಷಗಾನ ತಾಳಮದ್ದಳೆ ಜರುಗಿತು.

​ಫೆಬ್ರವರಿ 14ರ ಶನಿವಾರ ರಾತ್ರಿ ಸಾಂಪ್ರದಾಯಿಕ ಗಣಪತಿ ಸ್ತುತಿಯೊಂದಿಗೆ ಆರಂಭಗೊಂಡ ಈ ಕಲಾ ಸೌರಭವು ಮರುದಿನ ಭಾನುವಾರ ಮುಂಜಾನೆ ಮಂಗಳಾಚರಣೆಯೊಂದಿಗೆ ಸಂಪನ್ನಗೊಂಡಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ವಿಶ್ವೇಶ್ವರ ಬಧವಿದೆ, ರಮಾ ವೆಂಕಟರಾವ್, ವೈ. ರಾಘವೇಂದ್ರ ರಾವ್ ಭಾಗವಹಿಸಿದ್ದರು. ಸಂಘಟಕ ವಿನಯ ಆಚಾರ್ಯ ಹೊಸಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

​ಗಿರಿಜಾ ಕಲ್ಯಾಣ: ಭಕ್ತಿ-ಭಾವದ ಸಮನ್ವಯ

​ಮೊದಲ ಪ್ರಸಂಗವಾದ ‘ಗಿರಿಜಾ ಕಲ್ಯಾಣ’ದಲ್ಲಿ ಭಾಗವತರಾಗಿ ಡಾ. ಸತೀಶ್ ಪುಣಿಂಚಿತ್ತಾಯ, ರಾಜಾರಾಮ ಹೊಳ್ಳ ಕೈರಂಗಳ ಹಾಗೂ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಸಹಕರಿಸಿದರು. ಹಿಮ್ಮೇಳದಲ್ಲಿ ಮಧುಕರ ಭಾಗವತರು, ಚೆಂಡೆ-ಮದ್ದಲೆಯಲ್ಲಿ ಸಂಪತ್ ಬಾಬು, ಹರಿಶ್ಚಂದ್ರ ನಾಯಗ ಮಾಡೂರು, ಲಕ್ಷ್ಮೀಶ ಉಪಾಧ್ಯಾಯ, ಹರೀಶ್ ಹೆಬ್ಬಾರ್ ಮತ್ತು ಚಂದ್ರಶೇಖರ ಕಾರಂತ್ ಸಾಥ್ ನೀಡಿದರು.

ಅರ್ಥಧಾರಿಗಳ ವಿವರ: * ದೇವೇಂದ್ರ: ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ

  • ಈಶ್ವರ: ಪಶುಪತಿ ಶಾಸ್ತ್ರಿ ಶಿರಂಕಲ್ಲು
  • ಗಿರಿಜೆ: ವೇಣುಗೋಪಾಲ್ ಭಟ್ ಶೇಣಿ
  • ಮನ್ಮಥ: ವಿನಯಾಚಾರ್ ಹೊಸಬೆಟ್ಟು ಮತ್ತು ಸದಾಶಿವ ಆಳ್ವ ತಲಪಾಡಿ
  • ಪರ್ವತ ರಾಜ: ಕಲಾವತಿ
  • ತಾರಕಾಸುರ: ವಿನೋದ್ ಕುಮಾರ್ ಪೆರ್ಲ ಮತ್ತು ನಳಿನಿ ಮೋಹನ್
  • ರತಿ: ಗಾಯತ್ರಿ ಬಿ.ಎಸ್.
  • ನಾರದ: ರಾಧಾಕೃಷ್ಣ ಭಟ್ ಕುಳಾಯಿ
  • ವಿಷ್ಣು: ಸಾವಿತ್ರಿ ಶಾಸ್ತ್ರಿ
  • ಷಣ್ಮುಖ: ಶ್ರೀಧರ್ ಎಸ್.ಪಿ.

​ಇಂದ್ರಜಿತು ಕಾಳಗ: ರಣರೋಚಕ ಸಂವಾದ

​ನಂತರ ನಡೆದ ‘ಇಂದ್ರಜಿತು ಕಾಳಗ’ ಪ್ರಸಂಗವು ಪ್ರೇಕ್ಷಕರ ಗಮನ ಸೆಳೆಯಿತು. ಈ ಭಾಗಕ್ಕೆ ಗಣೇಶ್ ಕುಮಾರ್ ಹೆಬ್ರಿ, ಶಶಿಧರ್ ರಾವ್ ಚಿತ್ರಾಪು ಮತ್ತು ಮಾಧವ ಮಯ್ಯ ಸುರತ್ಕಲ್ ಭಾಗವತಿಕೆ ನಡೆಸಿಕೊಟ್ಟರು. ಚೆಂಡೆ-ಮದ್ದಲೆಯಲ್ಲಿ ರಾಘವೇಂದ್ರ ಹೆಜಮಾಡಿ, ರಾಕೇಶ್ ಹೊಸಬೆಟ್ಟು, ರಾಮ ಹೊಳ್ಳ ಸುರತ್ಕಲ್ ಹಾಗೂ ವೇದವ್ಯಾಸ ರಾವ್ ಸಹಕರಿಸಿದರು.

ಪಾತ್ರವರ್ಗ:

  • ಇಂದ್ರಜಿತು: ರಾಧಾಕೃಷ್ಣ ಕಲ್ಚಾರ್
  • ಹನುಮಂತ: ಗಣೇಶ್ ಶೆಟ್ಟಿ ಕನ್ನಡಿಕಟ್ಟೆ
  • ರಾಮ: ದಿನೇಶ್ ಶರ್ಮ
  • ಮಾಯಾಸೀತೆ: ಕೆ. ಕಲಾವತಿ
  • ವಿಭೀಷಣ: ವಿನಯ ಆಚಾರ್ಯ ಹೊಸಬೆಟ್ಟು
  • ಲಕ್ಷ್ಮಣ: ಗೋಪಾಲಕೃಷ್ಣ ಅನಂತಾಡಿ

​ಜಿಲ್ಲೆಯ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ನಡೆದ ಈ ಅಹೋರಾತ್ರಿ ತಾಳಮದ್ದಳೆಯು ಕಲಾಭಿಮಾನಿಗಳಿಗೆ ವಿಶಿಷ್ಟ ಅನುಭವ ನೀಡಿತು.



Related posts

ಮೂಲ್ಕಿ: ಪೂಂಜಾ ಚಾರಿಟೇಬಲ್ ಟ್ರಸ್ಟ್‌ನಿಂದ ಅಸಹಾಯಕರಿಗೆ ಚಿಕಿತ್ಸೆಗೆ ನೆರವು

Mumbai News Desk

ಹೆಜಮಾಡಿ : ಅದ್ದೂರಿಯಾಗಿ ಜರುಗಿದ ‘ಸ್ತ್ರೀ ಸ್ಫೂರ್ತಿ-2026’ ಕಾರ್ಯಕ್ರಮ

Mumbai News Desk

ವಿಶ್ವ ಗಾಣಿಗರ ಚಾವಡಿ ಮಂಗಳೂರು – ಉಚಿತ ವೈದ್ಯಕೀಯ ಶಿಬಿರ

Mumbai News Desk

ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಕ್ಷೇತ್ರ ಪ್ರದಕ್ಷಿಣೆಯ 23ನೇ ದಿನ : ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನ ದರುಶನ

Mumbai News Desk

ಪೊಲಿಪು ಕಾಂಚನ್ ಮೂಲಸ್ಥಾನ – ನಾಗರ ಪಂಚಮಿ ಆಚರಣೆ, ವಾರ್ಷಿಕ ಮಹಾಸಭೆ,ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ

Mumbai News Desk

ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ಜುಲೈ. 28ಕ್ಕೆ ಆಟಿದ ಮದಿಪು

Mumbai News Desk