
“ಸಮಾಜ ಸೇವೆಗೆ ಮೊದಲು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ”: ಸೂರ್ಯಕಾಂತ್ ಜಯ ಸುವರ್ಣ
ಮುಂಬಯಿ: ಶ್ರೀ ಸದ್ಗುರು ನಿತ್ಯಾನಂದ ಆಶ್ರಮ, ಸಹಕಾರವಾಡಿ, ಗೊರೇಗಾಂವ್ ಪೂರ್ವ ಇದರ ವತಿಯಿಂದ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ಹಾಗೂ ಜಯ ಸಿ. ಸುವರ್ಣ ಅಭಿಮಾನಿಗಳ ಬಳಗದ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾರ್ಚ್ 22 ರಂದು ಆಯೋಜಿಸಲಾಯಿತು.
ಈ ಶಿಬಿರವನ್ನು ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರು ಉದ್ಘಾಟಿಸಿ ಮಾತನಾಡಿ, “ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಮೊದಲ ಆದ್ಯತೆಯಾಗಬೇಕು, ಆ ಬಳಿಕ ಸಮಾಜ ಸೇವೆ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಂದಿನ ಆಹಾರ ಪದ್ಧತಿಗಳು ಆರೋಗ್ಯವನ್ನು ಹದಗೆಡಿಸುತ್ತಿವೆ, ಆದ್ದರಿಂದ ಜಾಗರೂಕತೆಯಿಂದ ಆಹಾರ ಸೇವಿಸಬೇಕು. ಶರೀರದಲ್ಲಿ ಯಾವುದೇ ರೀತಿಯ ಅನಾರೋಗ್ಯ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ನಿತ್ಯಾನಂದ ಆಶ್ರಮದಲ್ಲಿ ವರ್ಷಪೂರ್ತಿ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವುದು ಅಭಿನಂದನೀಯ,” ಎಂದರು.

ಈ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ನಿರ್ದೇಶಕರು ಹಾಗೂ ಆಶ್ರಮದ ಗೌರವಾಧ್ಯಕ್ಷರಾದ ಮೋಹನ್ ಜಿ. ಪೂಜಾರಿ, ಅಧ್ಯಕ್ಷರಾದ ರಘು ಮೂಲ್ಯ ಉಪಸ್ಥಿತರಿದ್ದರು.
ನಿತ್ಯಾನಂದ ಆಶ್ರಮದ ತಂಡದಿಂದ ಕಾರ್ಯದರ್ಶಿ ಸಂತೋಷ್ ಸಾಲಿಯನ್, ಜೊತೆ ಕಾರ್ಯದರ್ಶಿ ಶಶಿಕಲಾ ಎಸ್. ಕೋಟ್ಯಾನ್, ಉಪಾಧ್ಯಕ್ಷರಾದ ಬಾಲಕೃಷ್ಣ ಬಂಗೇರ ಮತ್ತು ಶ್ರೀಧರ್ ಮೂಲ್ಯ, ಖಜಾಂಚಿ ಬಬಿತಾ ಜೆ. ಕೋಟ್ಯಾನ್, ನಾಗೇಶ್ ಕುಲಾಲ್, ಸುಮತಿ ಎನ್. ಪೂಜಾರಿ, ಅಶೋಕ್ ಪೂಜಾರಿ, ರೇವತಿ ಸಾಲಿಯನ್, ಸತೀಶ್ ಪೂಜಾರಿ, ನಾರಾಯಣ ಪೂಜಾರಿ ಹಾಗೂ ದಯಾನಂದ ಅಮೀನ್ ಮೊದಲಾದವರು ಸಹಕರಿಸಿದರು.
ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮುಂಬೈ ಪರವಾಗಿ ಗೌರವ ಕಾರ್ಯದರ್ಶಿ ಕೇಶವ ಪೂಜಾರಿ ಭಾಗವಹಿಸಿದ್ದರು. ಗೊರೇಗಾಂವ್ ಬಿಲ್ಲವಾಸ್ ಘಟಕದಿಂದ ಗೌರವಾಧ್ಯಕ್ಷರಾದ ಸಚೀಂದ್ರ ಕೋಟ್ಯಾನ್, ಅಧ್ಯಕ್ಷರಾದ ಯಶವಂತ್ ಪೂಜಾರಿ, ಉಪಾಧ್ಯಕ್ಷರಾದ ರಮೇಶ್ ಸುವರ್ಣ, ಖಜಾಂಚಿ ಮೋಹನ್ ಬಿ. ಅಮೀನ್, ಕಾರ್ಯದರ್ಶಿ ಶಶಿಧರ್ ಆರ್. ಬಂಗೇರ, ಜೊತೆ ಕಾರ್ಯದರ್ಶಿ ಜನಾರ್ಧನ ಡಿ. ಕೋಟ್ಯಾನ್ ಹಾಗೂ ನವೀನ್ ಓ. ಪೂಜಾರಿ, ಸತೀಶ್ ಕೋಟ್ಯಾನ್, ಮಧುಕರ್ ಕೋಟ್ಯಾನ್ ಮತ್ತು ಹರೀಶ್ ಪೂಜಾರಿ ಉಪಸ್ಥಿತರಿದ್ದರು. ಗೊರೇಗಾಂವ್ ಕರ್ನಾಟಕ ಸಂಘದಿಂದ ಸುಧಾಕರ್ ಯೆಲ್ಲೂರು ಕೂಡ ಭಾಗವಹಿಸಿದ್ದರು.
ಶ್ರೀ ಸತ್ಯ ಸಾಯಿ ಬಾಬಾ ಟ್ರಸ್ಟ್ ವತಿಯಿಂದ ಸಚೀಂದ್ರ ಪೂಜಾರಿ, ಸುಚಲತಾ ಪೂಜಾರಿ, ನೀಲ್ ಕಟಾರಿಯಾ, ಸ್ನೇಹಾ ಶಿಘೆ, ಪಾಲ್, ಅಶೋಕ್ ದೀಕ್ಷಿತ್ ಹಾಗೂ ಇತರ ಯುವ ಸೇವಾ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ವೈದ್ಯಕೀಯ ತಂಡದಲ್ಲಿ ಡಾ. ಅಪೇಕ್ಷಾ ಸುಂದರ್ ಸುವರ್ಣ, ಡಾ. ತನ್ವಿ ಖೋಸ್ಲಾ ಮತ್ತು ಡಾ. ಶ್ರೀಧರನ್ ಆರೋಗ್ಯ ತಪಾಸಣೆ ನಡೆಸಿದರು. ಲೈಫ್ಲೈನ್ ಆಸ್ಪತ್ರೆ (ಗೊರೇಗಾಂವ್ ಪಶ್ಚಿಮ)ಯ ಡಾ. ಅನಿರುದ್ಧ ಅಂಬೇಕರ್ ಆರೋಗ್ಯ ಜಾಗೃತಿ ಕುರಿತು ಮಾರ್ಗದರ್ಶನ ನೀಡಿ, ಉಚಿತ ಹಾಗೂ ಅನುದಾನಿತ ಚಿಕಿತ್ಸೆಗಳ ಕುರಿತು ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಅಂಗವಾಗಿ ಆಹಾರ ಕಿಟ್ಗಳನ್ನು ಶ್ರೀ ಸತ್ಯ ಸಾಯಿ ಬಾಬಾ ಟ್ರಸ್ಟ್ ವತಿಯಿಂದ ವಿತರಿಸಲಾಯಿತು. ಸ್ಥಳೀಯ ನಿವಾಸಿಗಳು ಹಾಗೂ ಸ್ವಯಂಸೇವಕರ ಸಕ್ರಿಯ ಭಾಗವಹಿಸುವಿಕೆಯಿಂದ ಈ ಶಿಬಿರವು ಯಶಸ್ವಿಯಾಗಿ ನೂರಕ್ಕೂ ಹೆಚ್ಚು ಫಲಾಪೇಕ್ಷಿಗಳ ಸಮುದಾಯ ಸೇವಾ ಕಾರ್ಯಕ್ರಮವಾಗಿ ಪರಿಣಮಿಸಿತು ಎಂದು ಆಶ್ರಮದ ಅಧ್ಯಕ್ಷರಾದ ರಘು ಮೂಲ್ಯ ವ್ಯಕ್ತಪಡಿಸಿದರು.




