28.4 C
Mumbai
March 7, 2026
Mumbai News Kannada
ಪ್ರಕಟಣೆ

ಶ್ರೀ ಗುರುದೇವ ನಿತ್ಯಾನಂದ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸಾಕಿನಾಕ. ಡಿ.21 ರಿಂದ 24ರ ತನಕ ಪುನರ್ ಪ್ರತಿಷ್ಟೆ..





ಅಂಧೇರಿ ಪಶ್ಚಿಮ ಸಾಕಿನಾಕ ,ಲೋಕಮಾನ್ಯ ತಿಲಕ್ ನಗರದ ಶ್ರೀ ಗುರುದೇವ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಮಂದಿರದ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಡಿ.21 ರಿಂದ ಡಿ.24ರ ತನಕ ವಿದ್ವಾನ್ ಕೃಷ್ಣರಾಜ ತಂತ್ರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.


ಕಾರ್ಯಕ್ರಮದ ವಿವರ :


ಡಿ 21 ಗುರುವಾರ ಸಂಜೆ 5 ಗಂಟೆಯಿಂದ 9 ರ ತನಕ ಪ್ರಿತೋದ್ದಾರ ,ವಾಸ್ತು ಹೋಮ, ಬಲಿ ಬಳಿಕ ಅನ್ನಸಂತರ್ಪಣೆ.


ಡಿ.22 ಕ್ಕೆ ಬೆಳ್ಳಿಗ್ಗೆ 5ರಿಂದ 9 – ಗಣಹೋಮ, ಪ್ರತಿಷ್ಠಾ, ದುರ್ಗಾ ಹೋಮ, ಪ್ರಸನ್ನ ಪೂಜೆ, ನಾಗ ಸೇವೆ, ಮದ್ಯಾಹ್ನ 1.30ರ ಬಳಿಕ ಅನ್ನಸಂತರ್ಪಣೆ. ನಂತರ 3ರಿಂದ ರಾತ್ರಿ 9 ರ ತನಕ ಭಜನೆ, ಬಳಿಕ ಅನ್ನಸಂತರ್ಪಣೆ.


ಡಿ.23ಕ್ಕೆ ಮದ್ಯಾಹ್ನ 12ರಿಂದ ರಾತ್ರಿ 9ಗಂಟೆ ವರೆಗೆ ವಿವಿಧ ಮಂಡಳಿಗಳ ಸದಸ್ಯರಿಂದ ಹರಿನಾಮ ಸಂಕೀರ್ತನೆ.


ಡಿ.24,ಆದಿತ್ಯವಾರ ಸಂಜೆ 5 ಗಂಟೆಯಿಂದ ಉದ್ಘಾಟನಾ ಸಮಾರಂಭ (ಗೌರವ ಅತಿಥಿ ಶಾಸಕ ದಿಲೀಪ್(ಮಾಮ)ಲಾಂಡೆ .
ರಮಾನಾಥ ಕೋಟ್ಯಾನ್ ಮತ್ತು ಪರಿವಾರದ ಪ್ರಯೋಜತ್ವದಲ್ಲಿ ಅನ್ನಸಂತರ್ಪಣೆ.


ಶ್ರೀ ಗುರುದೇವ ನಿತ್ಯಾನಂದ ಬಾಬಾ ಹಾಗೂ ಶ್ರೀ ಚಾಮುಂಡೇಶ್ವರಿ ದೇವಿಯ ಪುನರ್ ಪ್ರತಿಷ್ಠೆಯ ಪ್ರಯುಕ್ತ ನಡೆಯಲಿರುವ 4 ದಿನಗಳ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತ್ತೆ , ಶ್ರೀ ನಿತ್ಯಾನಂದ ಚಾಮುಂಡೇಶ್ವರಿ ಭಕ್ತ ವೃಂದದ ಪರವಾಗಿ ಶ್ರೀಮತಿ ರಾಜೇಶ್ವರಿ ಎಂ ಶೆಟ್ಟಿ ವಿನಂತಿಸಿದ್ದಾರೆ.


ಹೆಚ್ಚಿನ ಮಾಹಿತಿಗೆ : 8976800627 / 8655532067 / 9833966193
ಸಂಪರ್ಕಿಸಿ.



Related posts

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜ. 16ಕ್ಕೆ ವರ್ದಂತಿ ಉತ್ಸವ ಮತ್ತು ಪ್ರಾಣ ಪ್ರತಿಷ್ಠಾ ಮಹೋತ್ಸವ

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಡಿ. 20ರಂದು 53ನೇ ವಾರ್ಷಿಕ ಏಕಹಾ ಭಜನಾ ಮಂಗಳೋತ್ಸವ

Mumbai News Desk

ಮಾ 8. ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಶ್ರೀ ಕ್ಷೇತ್ರ ಶಂಕರಪುರದಲ್ಲಿ ನಾಳೆ (ಮಾ.16) ವಿಶ್ವ ಪ್ರಾಣಿ ಪಕ್ಷಿ ಮೋಕ್ಷ ದಿನಾಚರಣೆ.

Mumbai News Desk

ಜ.20 ಕ್ಕೆ ಉಡುಪಿಯಲ್ಲಿ ಡೈಕಿನ್ ಸೊಲ್ಯೂಷನ್ ಪ್ಲಾಜ ಷೋರೂಮ್ ಶುಭಾರಂಭ

Mumbai News Desk

ವಸಯಿ ಕರ್ನಾಟಕ ಸಂಘ 38ನೇ ವಾರ್ಷಿಕೋತ್ಸವ ಸಂಭ್ರಮ, ನೃತ್ಯ ವೈಭವ, ಸನ್ಮಾನ

Mumbai News Desk