28.4 C
Mumbai
March 7, 2026
Mumbai News Kannada
ಪ್ರಕಟಣೆ

ಪೆ  17 :ಶ್ರೀಮದ್ಭಾರತ  ಮಂಡಳಿಯ  146 ನೇ ವಾರ್ಷಿಕೋತ್ಸವ





   

   

ಮುಂಬಯಿ ಪೆ  11. ಮುಂಬೈಯ  ಹಿರಿಯ ಧಾರ್ಮಿಕ ಸಂಘಟನೆಯಾದ  ಶ್ರೀ ಮದ್ಭಾರತ  ಮಂಡಳಿಯ  146 ನೇ ವಾರ್ಷಿಕ  ಮಂಗಳೋತ್ಸವ ಮತ್ತು ನಾರಾಯಣ ಕವಿ ವಿರಚಿತ ವಿರಚಿತ ‘ ಉತ್ತರ ರಾಮ ಕಥಾ ‘ ಪುಣ್ಯ ಗ್ರಂಥದ  ಸಮಾಪ್ತಿ ಮಂಗಳೋತ್ಸವ ಶನಿವಾರ ಫೆಬ್ರವರಿ 17 ರಂದು ಸಾಯಂಕಾಲ 5 ಗಂಟೆಗೆ ಪ್ರಾರಂಭವಾಗಿ ಮರುದಿನ ಫೆಬ್ರವರಿ 18 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪರಂಪರೆಯಂತೆ ಸಂಭ್ರಮದಲ್ಲಿ ನಡೆಯಲಿದೆ.2023ರ ಜೂನ್ 10 ರಂದು ಪರಂಪರೆಯಂತೆ ಗ್ರಂಥ ಪಾರಾಯಣ ಪ್ರಾರಂಭವಾಗಿದ್ದು, ಪಾರಾಯಣದ ದೀಕ್ಷೆಯಲ್ಲಿ

ಗ್ರಂಥ ವಾಚಕರಾಗಿ ಶ್ರೀಮತಿ ಶೋಭಾ ವಿ. ಬಂಗೇರ, ಅರ್ಥ ವಿವರಣೆಗೆ ಶ್ರೀಮತಿ ಪುಷ್ಪ ಜಿ. ಬಂಗೇರ, ಅರ್ಚಕ ಭಟ್ಟರಾಗಿ ಅಳಕೆ ಪುರಂದರ ಅಮೀನ್, ಚಾಮರ ಸೇವೆಗೆ ಎಚ್. ಮಹಾಬಲ್ ಮತ್ತು ಮೋಹನ್ ದಾಸ ಓಡಿ ಮೆಂಡನ್, ಜನಮೇಜರಾಯರಾಗಿ ಹರಿಶ್ಚಂದ್ರ ಸಿ. ಕಾಂಚನ್, ಪೂಜಾ ಮೇಲ್ವಿಚಾರಕರಾಗಿ ವಾಸು ಎಸ್. ಉಪ್ಪುರು ಇವರು ಪಾಲ್ಗೊಂಡಿರುವರು.

ಶನಿವಾರಫೆಬ್ರವರಿ 17ರಂದು ಶ್ರೀ ಲಕ್ಷ್ಮಿನಾರಾಯಣ ದೇವರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಮೂರ್ತಿ ಅಲಂಕಾರಕ್ಕೆ ವಿವಿಧ ಸಂಘಟನೆಗಳು ಅರ್ಪಿಸಿದ್ದ ಬಂಗಾರದ  ಸರಗಳನ್ನು ಪ್ರತಿನಿಧಿಗಳಿಂದ  ದೇವರ ಮೂರ್ತಿಗೆ ಹಾಕಿಸುವುದು. ಗ್ರಂಥ ಪಾರಾಯಣ, ಭಜನೆ ಪ್ರಾರಂಭ. ಮರುದಿನ ಬೆಳಿಗ್ಗೆ 8 ಗಂಟೆಗೆ ಉತ್ತರ ಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ ಜರಗಲಿದೆ.

ಇದೇ ಸಂದರ್ಭದಲ್ಲಿ ಗ್ರಂಥ ಪಾರಾಯಣದಲ್ಲಿ ಖ್ಯಾತಿ ಪಡೆದಿರುವ ಶ್ರೀಮತಿ ಪುಷ್ಪ ಗೋಪಾಲ ಬಂಗೇರ ಅವರನ್ನು ಸನ್ಮಾನ ಮಾಡಲಾಗುವುದು. ಬಳಿಕ  ಪ್ರಸನ್ನ ಪೂಜೆ,ಮಹಾ ಮಂಗಳಾರತಿ,ಸಾರ್ವಜನಿಕ ಪ್ರಾರ್ಥನೆ. ಹರಕೆ , ಮಹಾ ಅನ್ನಸಂತರ್ಪಣೆ ಜರಗಲಿದೆ.

ಶ್ರೀ ಮದ್ಭಾರತ ಮಂಡಳಿಯ  , ಶ್ರೀ ಲಕ್ಷ್ಮಿ ನಾರಾಯಣ ಮಂದಿರ, ಎಂ ವಿ ಎಂ ಶೈಕ್ಷಣಿಕ ಸಂಕೀರ್ಣ  ಮಾರ್ಗ, ವೀರಾ ದೇಸಾಯಿ ರಸ್ತೆ, ಅಂಧೇರಿ  ಪಶ್ಚಿಮ ಇಲ್ಲಿ ನಡೆಯುವ ಈ ಉತ್ಸವದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಲಕ್ಷ್ಮಿ ನಾರಾಯಣ ದೇವರ ಹಾಗೂ ಪರಿವಾರ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮಂಡಳಿಯ ಅಧ್ಯಕ್ಷ ಜಗನ್ನಾಥ ಪುತ್ರನ್ ಮತ್ತು ಪ್ರಧಾನ ಕಾರ್ಯದರ್ಶಿ ಲೋಕ ನಾಥ್ ಕಾಂಚನ್ ಅವರು ವಿನಂತಿಸಿದ್ದಾರೆ.



Related posts

ನ.16 ರಂದು ಕರ್ನಾಟಕ ಸಂಘ, ಕಲ್ಯಾಣ ‘ಕರ್ನಾಟಕ ರಾಜ್ಯೋತ್ಸವ’ ಆಚರಣೆ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳ ಡೊಂಬಿವಲಿ : ಅ. 3ರಿಂದ ವಜ್ರ ಮಹೋತ್ಸವ ಆಚರಣೆ

Mumbai News Desk

ನ.21 ರಂದು ಬಿಲ್ಲವರ ಅಸೋಸಿಯೇಷನ್, ಮುಂಬಯಿ – ಕಲ್ವಾ ಸ್ಥಳೀಯ ಕಛೇರಿಯ ರಜತ ಮಹೋತ್ಸವದ ಸಂಭ್ರಮ

Mumbai News Desk

ಮಾರ್ಚ್ 26-27ರಂದು ಕಾಪುವಿನ 3 ಮಾರಿಗುಡಿಯಲ್ಲಿ ‘ಕಾಲವಧಿ ಸುಗ್ಗಿ ಮಾರಿಪೂಜೆ’

Mumbai News Desk

ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಸಹಾಯ:* ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯಿಂದ ಮಾ. 24 ಕ್ಕೆ ಅರ್ಜಿ ವಿತರಣೆ

Mumbai News Desk

ಸೆ.7,8 ರಂದು ಕುಲಾಲ ಸಂಘ ಮುಂಬಯಿ ವತಿಯಿಂದ ಥಾಣೆ ಪಶ್ಚಿಮ ಗೋಡ್ ಬಂದರ್ ನ ಸಂಘದ ನಿವೇಶನದಲ್ಲಿ ಗಣೇಶೋತ್ಸವ ಸಂಭ್ರಮ,

Mumbai News Desk