30.5 C
Mumbai
June 8, 2026
Mumbai News Kannada
ಪ್ರಕಟಣೆ

ಶ್ರೀ ಶನೀಶ್ವರ ಮಹತೋಭಾರ ದೇವಸ್ಥಾನ ಮಲಾಡ್ ಪೂರ್ವ ಕುರಾರ್ ವಿಲೇಜ್. ಶನಿ ಕಥೆ ಪ್ರವಚನ ಮತ್ತು  ಗ್ರಂಥ ವಾಚನ ಶಿಕ್ಷಣ ತರಬೇತಿ – 





ಶ್ರೀ ಶನೀಶ್ವರ ಮಹತೋಭಾರ ದೇವಸ್ಥಾನ, ಕುರಾರ್ ವಿಲೇಜ್ ನಲ್ಲಿ ಶನಿ ಕಥೆ ಪ್ರವಚನ ಮತ್ತು ಶನಿ ಗ್ರಂಥ ವಾಚನ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜೂ.22 ಶನಿವಾರ, ಸಂಜೆ 6 ಗಂಟೆಗೆ ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ಹಾಗು ಸಲೆಹೆಗಾರರು ಮತ್ತು ಹಿರಿಯ ಶನಿ ಕಥಾ ಪ್ರವಚನಕಾರರಾದ ನಾರಾಯಣ್ ಶೆಟ್ಟಿ ಅವರ ಮುಖೆನ ಜರಗಲಿದೆ.

ಮುಂಬೈ ಮಹಾನಗರದಲ್ಲಿ ಸಮರ್ಥ ಅರ್ಥ ಹೇಳುವ ಶನಿ ಕಥಾ ಪ್ರವಚನಕಾರರ ಸಮಸ್ಸೆ ಈಗಾಗಲೇ ಎದ್ದು ಕಾಣುತ್ತಿದೆ, ಒಂದು ತಲೆಮಾರು ಕಳೆದ ನಂತರ ಮುಂದೆ ಶನಿ ಕಥೆ ಹೇಳುವ ಯುವ ಪ್ರತಿಭೆ ಈಗಾಗಲೇ ತಯಾರು ಮಾಡಬೇಕಿದೆ ಎನ್ನುವ ಕಾಳಜಿಯನ್ನು ಅರ್ಥೈಸಿಕೊಂಡ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯರು, ಯುವ ಪೀಳಿಗೆಗೆ ಶನಿ ಕಥೆ ಹೇಳುವ ರೀತಿ, ವಿಷಯ ಸಾಮ್ರಾಜ್ಯ, ಕಥೆಯಲ್ಲಿ ಅಡಕವಾದ ಒಳಅರ್ಥ ಮತ್ತು ಭಾವಾರ್ಥ, ಆದ್ಯಾತ್ಮಿಕ ಚೌಕಟ್ಟು, ಹಾಗು ಭಕ್ತಿ ಮಾರ್ಗ ಪ್ರಚೋದನೆ ಮತ್ತು ಗ್ರಂಥ ಪಠನೆಯ ರೀತಿ, ಪ್ರಾರಂಭ ಹಾಗು ಮುಕ್ತಾಯದ ಚೌಕಟ್ಟು, ಅಧ್ಯಾಯ ಮುಕ್ತಾಯದ ರೀತಿ ನೀತಿ ಯನ್ನು ಪ್ರತೀ ಭಾನುವಾರ ಸಂಜೆ 6 ರಿಂದ 8 ರ ತನಕ ದೇವಸ್ಥಾನದಲ್ಲಿ ಶ್ ಶ್ರೀನಿವಾಸ ಸಾಫಲ್ಯರು ಮತ್ತು ನಾರಾಯಣ್ ಶೆಟ್ಟಿ ಯವರು ಉಚಿತವಾಗಿ ತರಬೇತಿ ನೀಡಲಿದ್ದಾರೆ.

ಆಸಕ್ತಿಯುಳ್ಳ ಮಕ್ಕಳು, ಮಹಿಳೆಯರು ಮತ್ತು ಯುವಕರು, ಮಹನೀಯರು ಈ ತರಬೇತಿ ಯಲ್ಲಿ ಭಾಗವಹಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪೂಜಾ ಸಮಿತಿಯ ಉಪಾದ್ಯಕ್ಶರಾದ ರಮೇಶ್ ಆಚಾರ್ಯ ಇವರನ್ನು ಸಂಪರ್ಕಿಸಬಹುದು -೯೮೯೨೪೧೩೨೦೪. (9892413204)



Related posts

ಶ್ರೀ ಚಕ್ರಪೀಠ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ

Mumbai News Desk

ಶ್ರೀ ಬಾಲಾಜಿ ಸನ್ನಿಧಿ ಪಲಿಮಾರ್ ಮಠ ಜ. 26ರಂದು ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ

Mumbai News Desk

ಜೀವದಾನಿ ಯಕ್ಷ ಕಲಾ ವೇದಿಕೆ ವಸೈ ತಾಲೂಕಾ* ಡಿ 27. ರಂದು 7 ನೇ ವರ್ಷದ ವಾರ್ಷಿಕೋತ್ಸವ.

Mumbai News Desk

ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 64ನೇ ವಾರ್ಷಿಕೋತ್ಸವ: ಏ. 12ರಿಂದ ಧಾರ್ಮಿಕ ಸಂಭ್ರಮ

Mumbai News Desk

ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನ: ಫೆ. 21ಕ್ಕೆ ಭಜನಾ ಮಂಗಳೋತ್ಸವ; ಫೆ. 28ಕ್ಕೆ ಧರ್ಮ ದೈವದ ನೇಮೋತ್ಸವ

Mumbai News Desk

   ನ. 19 ;   ಕುಲಾಲ ಸಂಘ ಮುಂಬಯಿ  93ನೇ ವಾರ್ಷಿಕ ಮಹಾಸಭೆ.

Mumbai News Desk