32 C
Mumbai
March 7, 2026
Mumbai News Kannada
ಸುದ್ದಿ

ಅಂಚೆ ಜನ ಸಂಪರ್ಕ ಅಭಿಯಾನ: ಕಂಬದ ಕೋಣೆ- ಕಾಲ್ತೊಡು





ಕಂಬದಕೋಣೆ,ಕಾಲ್ತೊಡು : ದಿನಾಂಕ 23 ಆಗಸ್ಟ್ 2024 ರ ಶುಕ್ರವಾರ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ವತಿಯಿಂದ ಕಾಲ್ತೋಡು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಡಾಕ್ ಸೇವಾ; ಜನ್ ಸೇವಾ-ಅಂಚೆ ಜನ ಸಂಪರ್ಕ ಅಭಿಯಾನವನ್ನು ಕಾಲ್ತೊಡು ಅಂಬೇಡ್ಕರ್‍-ಭವನದಲ್ಲಿ ಆಯೋಜಿಸಲಾಗಿತ್ತು. ಅಭಿಯಾನವನ್ನು ಜ್ಯೊತಿ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದ ಪಂಚಾಯತ್ ಅಧ್ಯಕ್ಷ ಅಣ್ಣಪ್ಫ ಶೆಟ್ಟಿ ಬಟ್ನಾಡಿ ಇಂತಹ ಕುಗ್ರಾಮದಲ್ಲೂ ಕೂಡ ಅಂಚೆ ಅಭಿಯಾನವನ್ನು ಆಯೋಜಿಸಿದಕ್ಕಾಗಿ ಅಂಚೆ ಇಲಾಖೆಯನ್ನು ಶ್ಲಾಘಿಸಿದರು. ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ವಿವಿಧ ಅಂಚೆ ಸೇವೆಗಳ ಮಾಹಿತಿ ನೀಡಿದರು. ಅಂಚೆ ಅಧೀಕ್ಷಕ ರಮೇಶ್ ಪ್ರಭು, ಮತ್ತೊರ್ವ ಸಹಾಯಕ ಅಂಚೆ ಅಧೀಕ್ಷಕರಾದ ದಯಾನಂದ ದೇವಾಡಿಗ, ಪಿ.ಡಿ.ಓ. ದಿವಾಕರ ಶಾನುಭೋಗ ಮತ್ತು ಹೇರೂರು ಪಂಚಾಯತ್ ಸದಸ್ಯ ಸೂಲಿಯಣ್ಣ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಆನಂದ್ ಬಿಲ್ಲವ ಕಾರ್ಯಕ್ರಮವನ್ನು ನಿರ್ವಹಿಸಿದರು. ನೂರಾರು ಗ್ರಾಮಸ್ತರು ಆಧಾರ್ ಹೊಸ ನೊಂದಣಿ/ಪರಿಷ್ಕರಣೆ ಹಾಗು ವಿವಿಧ ಅಂಚೆ ಸೌಲಭ್ಯಗಳ ಮಾಹಿತಿಯ ಪ್ರಯೋಜನವನ್ನು ಪಡೆದರು.



Related posts

ಉಡುಪಿ : ಮಂದಾರ್ತಿ ಮೇಳದ ಕಲಾವಿದ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ನಿಧನ

Mumbai News Desk

ವಿಜಯಾ ಕಾಲೇಜು ಮೂಲ್ಕಿ ಗ್ಲೋಬಲ್ ಹಳೆ ವಿದ್ಯಾರ್ಥಿಗಳ ಅಸೋಸಿಯೇಶನ್, ಸಾಧಕರಿಗೆ ಸನ್ಮಾನ,

Mumbai News Desk

ಎ.21,ಅನಿರುದ್ಧ ಅಕೇಡಮೀ ಆಫ್ ಡಿಸಾಸ್ಟರ್ ಮೆನೇಜ್ಮೆಂಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ.

Mumbai News Desk

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ; ಭಾರಿ ಮಳೆ, ಹಲವೆಡೆ ಭೂಕುಸಿತ,

Mumbai News Desk

​ತಿರುವನಂತಪುರದಲ್ಲಿ ಜ್ಞಾನದೀಪ ‘ಗುರುದರ್ಶನ’ ಕೃತಿ ಬಿಡುಗಡೆ: ಗಡಿನಾಡಲ್ಲಿ ಕನ್ನಡ ಸಾಹಿತ್ಯದ ಬೆಳಕು!

Mumbai News Desk

ಅಹಮದಾಬಾದ್ : 242 ಪ್ರಯಾಣಿಕರನ್ನು ಹೊತ್ತು ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ AI -171 (Air India)ವಿಮಾನ ಪತನ, ಹಲವರ ಸಾವು ಶಂಕೆ

Mumbai News Desk