August 8, 2026
Mumbai News Kannada
ಪ್ರಕಟಣೆ

ಕರ್ನಾಟಕ ಸಂಘ ಡೊಂಬಿವಲಿ: ಅಕ್ಟೋಬರ್ 27ರಂದು 57 ನೇ ವಾರ್ಷಿಕ ಮಹಾಸಭೆ.   





               

  ಮುಂಬಯಿ ಹಾಗೂ ಉಪನಗರಗಳಲ್ಲಿಯ ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಎಂಬ ಹೆಗ್ಗಳಿಕೆ ಗೆ ಪಾತ್ರವಾದ ಕರ್ನಾಟಕ ಡೊಂಬಿವಲಿಯ 57ನೇಯ ವಾರ್ಷಿಕ ಮಹಾ ಸಭೆ ಅಕ್ಟೋಬರ್ 27ರಂದು  ರವಿವಾರ ಸಂಜೆ 4-30ಕ್ಕೆ ಡೊಂಬಿವಲಿ ಪೂರ್ವದ ಗೋಪಾಲ್ ನಗರ ಪರಿಸರದ ಮಂಜುನಾಥ್ ವಿಧ್ಯಾಲಯದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಸುಕುಮಾರ ಎನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಮಹಾ ಸಭೆಯ ನಿಗದಿತ ಸಮಯದಲ್ಲಿ ಸಭೆಗೆ ಅವಶ್ಯಕ ಸದಸ್ಯರ ಸಂಖ್ಯೆ ಕಡಿಮೆ ಇದ್ದರೆ ಅರ್ಧ ಗಂಟೆಯ ವರೆಗೆ ಸಭೆಯನ್ನು ಮುಂದೂಡಿ ನಂತರ ಅದೆ ಸ್ಥಳದಲ್ಲಿ ಮಹಾಸಭೆ ನಡೆಯಲಿದ್ದು, ಲೇಖ್ಖ ಪತ್ರ ಪರಿಶೋಧಕರ ಹೇಳಿಕೆಯ ಕುರಿತು ಸದಸ್ಯರಿಗೆ ಯಾವದೇ ಅನುಮಾನ , ಪ್ರಶ್ನೆ, ಸಲಹೆ ಸೂಚನೆಗಳು ಇದ್ದರೆ  ವಾರ್ಷಿಕ ಮಹಾಸಭೆಯ ಕನಿಷ್ಟ ಮೂರು ದಿನಗಳ ಮುಂಚಿತವಾಗಿ ಸಂಘದ ಗೌ.ಕಾರ್ಯದರ್ಶಿ ಅಥವಾ ಸಂಘದ ಮುಖ್ಯಾಲಯದಲ್ಲಿ ಸಾಯಂಕಾಲ 6ರಿಂದ ರಾತ್ರಿ 8ರ ವರೆಗೆ ಲಿಖಿತ ರೂಪದಲ್ಲಿ ತಿಳಿಸಬಹದಾಗಿದೆ ಅಲ್ಲದೆ ಸಂಘದ ವಾರ್ಷಿಕ ಮಹಾ ಸಭೆಗೆ ಬರುವಾಗ ಪ್ರತಿಯೋಬ್ಬ ಸದಸ್ಯರು 2023-2024 ನೇ ಸಾಲಿನ ವಾರ್ಷಿಕ ವರದಿಯನ್ನು ತರಬೇಕೆಂದು ಸಂಘದ ಗೌ ಕಾರ್ಯದರ್ಶಿ ಪ್ರೋ ಅಜೀತ ಉಮರಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.                                             

   ಮಹಾಸಭೆಯ 2023-2024 ನೇಯ ಸಾಲಿನ   ವಾರ್ಷಿಕ ವರದಿಯನ್ನು ಈಗಾಗಲೇ ಸರ್ವ ಸದಸ್ಯರಿಗೆ ಕೋರಿಯರ್ ಮುಖಾಂತರ ಕಳುಹಿಸಲಾಗಿದ್ದು,ಒಂದು ವೇಳೆ ತಲುಪದೆ ಇದ್ದಲ್ಲಿ ವಸಂತ  ಚೆಂಬರ್ಸ   ,ಎರಡನೇಯ ಮಹಡಿ ಘನಶ್ಯಾಮ ಗುಪ್ತೆ ಡೊಂಬಿವಲಿ  ಪಶ್ಚಿಮದ ಸಂಘದ ಮುಖ್ಯಾಲಯದಲ್ಲಿ ಮಧ್ಯಾಹ್ನ 1ರಿಂದ ರಾತ್ರಿ 8ರವರೆಗೆ ಸಂಪರ್ಕಿಸಿ ಪಡೆಯಬಹುದಾಗಿದೆ.                                               

  ಈ ಮಹತ್ವದ ವಾರ್ಷಿಕ ಮಹಾ ಸಭೆಗೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ತಿತರಿದ್ದು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ವಾರ್ಷಿಕ ಮಹಾ ಸಭೆಯನ್ನು ಯಶಸ್ವಿ ಗೋಳಿಸಬೇಕೆಂದು ಸಂಘದ ಕಾರ್ಯಾಧ್ಯಕ್ಷ ಡಾ ಇಂದ್ರಾಳಿ ದಿವಾಕರ ಶೆಟ್ಟಿ,ಗೌ.ಪ್ರಧಾನ ಕಾರ್ಯದರ್ಶಿ ಪ್ರೋ ಅಜೀತ ಉಮರಾಣಿ ಹಾಗೂ ಕೋಶಾಧಿಕಾರಿ ತಾರಾನಾಥ ಎಸ್ ಅಮೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 



Related posts

ಭಜನಾ ಮಂಡಳಿಗಳ ಒಕ್ಕೂಟ ಸಂಸ್ಥೆ ಮುಂಬಯಿ : 5ನೇ ವಾರ್ಷಿಕ ಭಜನೋತ್ಸವ ಮತ್ತು ರಾಜ್ಯ ಮಟ್ಟದ ಭಜನಾ ಸ್ಪರ್ಧೆ

Mumbai News Desk

ವಿದ್ಯಾವಿಹಾರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಜುಲೈ 11ರಂದು ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.

Mumbai News Desk

ಮಾ. 15 : ತುಳು ವೆಲ್ಫೇರ್ ಅಸೋಸಿಯೇಶನ್ ಡೊಂಬಿವಲಿ ಇದರ ಆಶ್ರಯದಲ್ಲಿ ಸೋಮನಾಥ ಎಸ್. ಕರ್ಕೇರರ “ಪೆರ್ಗ” ತುಳು ಹನಿಗವನ ಸಂಕಲನ ಬಿಡುಗಡೆ ಮತ್ತು ಕವಿಗೋಷ್ಠಿ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ ೨೦೨೫-೨೬ ರ ಸಾಫಲ್ಯ ಭಾಗ್ಯ ಹಾಗು ವಿದ್ಯಾರ್ಥಿಗಳಿಗೆ ಸಹಾಯ ನಿಧಿಗೆ ಅರ್ಜಿ ಸ್ವೀಕಾರ.

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ (ಸಾವರ್ಕರ್ ನಗರ್ -ಥಾಣೆ)ಅ. 23ರಂದು ದೇವರ ನೂತನ ಪೀಠ ಮಂಟಪ ಹಾಗೂ ದ್ವಾರ ಪ್ರತಿಷ್ಠಾಪನೆ.

Mumbai News Desk

ಡಿ.15 ರಿಂದ 21 ರ ವರಗೆ ಸಿರಿಕಲಾಮೇಳ (ಅ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ “ಮುಂಬಯಿ ಯಕ್ಷ ಸಪ್ತಾಹ 2023”

Mumbai News Desk