August 8, 2026
Mumbai News Kannada
ಪ್ರಕಟಣೆ

ಮುಂಬೈನಲ್ಲಿ ಆಗಸ್ಟ್ 9ಕ್ಕೆ ಕದಿಕೆ ಮೊಗವೀರ ಮಹಿಳಾ ಸಭಾದ ಆಯೋಜನೆಯಲ್ಲಿ ‘ಆಟಿಡ್ ಒಂಜಿ ದಿನ’ ಸಂಭ್ರಮ:





ಕದಿಕೆ ಮೊಗವೀರ ಸಭಾ ಮುಂಬೈ (ರಿ.) ಹಾಗೂ ಕದಿಕೆ ಮೊಗವೀರ ಮಹಿಳಾ ಸಭಾ ಮುಂಬೈ ಇವುಗಳ ಜಂಟಿ ಆಶ್ರಯದಲ್ಲಿ ತುಳುನಾಡಿನ ಸಾಂಪ್ರದಾಯಿಕ ವೈಭವ, ಸಂಸ್ಕೃತಿ ಮತ್ತು ವಿಶಿಷ್ಟ ಖಾದ್ಯಗಳ ಸಂಭ್ರಮದ “ಆಟಿಡ್ ಒಂಜಿ ದಿನ” ಕಾರ್ಯಕ್ರಮವು ಇದೇ ಆಗಸ್ಟ್ 9, 2026ರ ರವಿವಾರದಂದು ಸಂಜೆ 4:00 ಗಂಟೆಯಿಂದ ಮುಂಬೈನ ಅಂಧೇರಿ (ಪಶ್ಚಿಮ) ಎಂವಿಎಂ ಕ್ಯಾಂಪಸ್ ಮಾರ್ಗದಲ್ಲಿರುವ ಮೊಗವೀರ ಭವನದ 2ನೇ ಮಹಡಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.


ಈ ವೈಭವೋಪೇತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಕವಿತಾ ವೇದಪ್ರಕಾಶ್ ಶ್ರೀಯಾನ್ ಹಾಗೂ ಶ್ರೀ ವೇದಪ್ರಕಾಶ್ ಶ್ರೀಯಾನ್ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಕದಿಕೆ ಮೊಗವೀರ ಮಹಾಸಭಾ ಸಸಿಹಿತ್ಲು , (ದಕ್ಷಿಣ ಕನ್ನಡ) ಇದರ ಅಧ್ಯಕ್ಷರಾದ ಗಿರೀಶ್ ಶ್ರೀಯಾನ್ ಮತ್ತು ಕದಿಕೆ ಮೊಗವೀರ ಮಹಿಳಾ ಸಭಾ ಸಸಿಹಿತ್ಲು (ದಕ್ಷಿಣ ಕನ್ನಡ) , ಇದರ ಅಧ್ಯಕ್ಷರಾದ ಶ್ರೀಮತಿ ಸವಿತಾ ಯು. ಸಸಿಹಿತ್ಲು ಉಪಸ್ಥಿತರಿರಲಿದ್ದಾರೆ.
ಕದಿಕೆ ಮೊಗವೀರ ಸಭಾ ಮುಂಬೈನ ಅಧ್ಯಕ್ಷರಾದ ಶ್ರೀ ದೇವ್‌ರಾಜ್ ಕುಂದರ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸುನಿಲ್ ಪುತ್ರನ್, ಗೌರವ ಕೋಶಾಧಿಕಾರಿ ಶ್ರೀಮತಿ ನೀತಾ ಕರ್ಕೇರ ಹಾಗೂ ಕದಿಕೆ ಮೊಗವೀರ ಮಹಿಳಾ ಸಭಾ ಮುಂಬೈನ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ (ಮಮತಾ) ನಿರುಲ್ಕರ್, ಗೌರವ ಕಾರ್ಯದರ್ಶಿ ಶ್ರೀಮತಿ ಅಮಿತಾ ಶ್ರೀಯಾನ್ ಮತ್ತು ಗೌರವ ಕೋಶಾಧಿಕಾರಿ ಶ್ರೀಮತಿ ಹರಿಣ ಅಮಿನ್ ಅವರು ಸರ್ವರನ್ನೂ ಹಾರ್ದಿಕವಾಗಿ ಆಹ್ವಾನಿಸಿದ್ದಾರೆ. ಸಮಾರಂಭದ ಕೊನೆಯಲ್ಲಿ ಸೌಹಾರ್ದಯುತ ರಾತ್ರಿಯ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.



Related posts

ನಟನಾ ನೃತ್ಯ ಅಕಾಡೆಮಿ, ಪವಾಯಿ: ಡಿ. 14 ರಂದು ಬಂಟರ ಭವನದಲ್ಲಿ ನಾಲ್ಕು ವಿದ್ಯಾರ್ಥಿನಿಯರ ಭರತನಾಟ್ಯ ಆರಂಗೇಟ್ರಮ್

Mumbai News Desk

ಡೊಂಬಿವಲಿಯಲ್ಲಿ ಇಂದು( ಜುಲೈ 15) ಅದ್ದೂರಿ ಬಡಗು ಯಕ್ಷ ಸಂಭ್ರಮ: ‘ಶ್ರೀ ಕಾಜಳ್ಳಿ ಕ್ಷೇತ್ರ ಮಹಾತ್ಮೆ’ ಪ್ರದರ್ಶನ, ಸಾಧಕರಿಗೆ ಸನ್ಮಾನ

Mumbai News Desk

ಜ.24 ; ಬಂಟ್ಸ್ ಫೋರಮ್ ಸದಸ್ಯರಿಂದ ‘ಪನರೆ ಪೋವೊಡ್ಚಿ’ ಮತ್ತು ‘ಸಂಸಾರದ SOME ಸಾರ’ ತುಳು ನಾಟಕ ಪ್ರದರ್ಶನ.

Mumbai News Desk

SARVAJANIKA SHRI GANESHOTSAVA 2024 IN AJMAN ON 8TH SEPTEMBER BY MARGADEEPA

Mumbai News Desk

ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದ ರಿ. 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಮಹಾ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ಅಕ್ಟೋಬರ್ 27ರಂದು 57 ನೇ ವಾರ್ಷಿಕ ಮಹಾಸಭೆ.   

Mumbai News Desk