32 C
Mumbai
April 23, 2026
Mumbai News Kannada
ಮಹಾರಾಷ್ಟ್ರಸುದ್ದಿ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ ನೇತಾರ ಮನೋಹರ್ ಜೋಷಿ ವಿಧಿವಶ





ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ, ಲೋಕಸಭೆಯ ಮಾಜಿ ಸ್ಪೀಕರ್, ಶಿವ ಸೇನಾ ನಾಯಕ ಮನೋಹರ್ ಜೋಶಿ ಅವರು ಇಂದು ಬೆಳ್ಳಿಗ್ಗೆ (ಫೆ.23) ನಿಧನರಾಗಿದ್ದಾರೆ.
86 ವರ್ಷದ ಜೋಶಿ ಅವರು ಅಸೌಖ್ಯದ ನಿಮ್ಮಿತ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕೆತ್ಸೆಗೆ ಸ್ಪಂದಿಸದ ಜೋಶಿ ಅವರು ಇಂದು ಬೆಳ್ಳಿಗೆ 5 ಗಂಟೆಗೆ ಇಹಲೋಕ ತ್ಯಜಿಸಿದರು, ಎಂದು ಅವರ ಕುಟುಂಬಸ್ತರು ತಿಳಿಸಿದ್ದಾರೆ.
ಶಿಕ್ಷಕರಾಗಿ ತನ್ನ ವೃತ್ತಿ ಜೀವನ ಆರಂಭಿಸಿದ ಮನೋಹರ್ ಜೋಶಿ ಶಿವಸೇನೆಗೆ ಸೇರ್ಪಡೆಯಾಗಿ ರಾಜಕೀಯ ರಂಗ ಪ್ರವೇಶಿಸಿದ್ದರು. ಬಳಿಕ ಮುಖ್ಯಮಂತ್ರಿ ಆಗಿ 1995 ರಿಂದ 1999ರ ತನಕ ಸೇವೆ ಸಲ್ಲಿಸಿದ್ದರು.
2002 ರಿಂದ 2004ರ ತನಕ ಲೋಕಸಭಾ ಸ್ಪೀಕರ್ ಆಗಿ ಅವರು ಕಾರ್ಯ ನಿರ್ವಹಿಸಿದ್ದರು.ಶಿವಸೇನೆಯ ಸುಪ್ರೀಮೋ ದಿ. ಬಾಳಸಾಹೇಬ್ ಠಾಕ್ರೆ ಅವರ ಆಪ್ತರಾಗಿ ಮನೋಹರ್ ಜೋಶಿ ಗುರುತಿಸಿ ಕೊಂಡಿದ್ದರು.
ಅವರ ಅಂತ್ಯ ಕ್ರಿಯೆ ಇಂದು ಮಧ್ಯಾಹ್ನ 3 ಗಂಟೆಗೆ ಮುಂಬೈ ನ ಶಿವಾಜಿ ಪಾರ್ಕ್ ನ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಸ್ತರು ತಿಳಿಸಿದ್ದಾರೆ.



Related posts

ಹಾಸ್ಯ ನಟ ರಾಕೇಶ್‌ ಪೂಜಾರಿ ಮನೆಗೆ ಕೊನೆಗೂ ರಿಷಬ್‌ ಶೆಟ್ಟಿ ದಂಪತಿ ಭೇಟಿ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ.ಮಹಾ ನಿರ್ದೇಶಕರಾಗಿ  ಉದ್ಯಮಿ, ಮೀರಾ ಭಯಂಧರ್ ನ್ ಮಾಜಿ ನಗರ ಸೇವಕ ಅರವಿಂದ್ ಆನಂದ್ ಶೆಟ್ಟಿ ಆಯ್ಕೆ,

Mumbai News Desk

ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿಯಲ್ಲಿ 14ನೇ ರ‍್ಯಾಂಕ್‌ ಗಳಿಸಿದ ರಶ್ಮಿತಾ ರಾಜು ಕುಲಾಲ್ ಅವರ ಉನ್ನತ ವ್ಯಾಸಂಗಕ್ಕೆ ಕುಲಾಲ ಪ್ರತಿಷ್ಠಾನದಿಂದ 25 ಸಾವಿರದ ನೆರವು.

Mumbai News Desk

ಐ. ಸಿ. ಎಸ್. ಇ -10ನೇ ತರಗತಿಯ ಫಲಿತಾಂಶ -2024

Mumbai News Desk

ರಂಗನಟ, ದೂರದರ್ಶನ ಕಲಾವಿದ ರಮೇಶ ಶಿವಪುರ ಅವರಿಗೆ ಮಾತೃ ವಿಯೋಗ

Mumbai News Desk

ಬಿಗ್ ಬಾಸ್ ಕನ್ನಡ 12: ರನ್ನರ್ ಅಪ್ ಆಗಿ ಹೊರಹೊಮ್ಮಿದ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ

Mumbai News Desk