ಮುಂಬಯಿಯ ಸಾಫಲ್ಯ ಸೇವಾ ಸಂಘದ ತ್ರೈಮಾಸಿಕ ‘ಸಾಫಲ್ಯ’ ವು ಸಣ್ಣ ಕಥೆ ಮತ್ತು ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ.
ಕನ್ನಡದಲ್ಲಿ ಬರೆದ ಸಣ್ಣ ಕಥೆ ಯಾ ಲೇಖನ ಸ್ಪರ್ಧೆಯಲ್ಲಿ ವಿಜೇತರದವರಿಗೆ ಪ್ರಥಮ ರೂ 3000/-, ದ್ವಿತೀಯ ರೂ 2000/- ಮತ್ತು ತೃತೀಯ ರೂ 1000/- ಬಹುಮಾನ ನೀಡಲಾಗುವುದು.
ನಿಯಮಗಳು :
1) ಈ ಸ್ಪರ್ಧೆಗೆ ಕಳುಹಿಸಬೇಕಾದ ಸಣ್ಣ ಕಥೆ ಯಾ ಲೇಖನ ಹಿಂದೆ ಎಂದೂ ಪ್ರಕಟಗೊಂಡಿರಬಾರದು.
2) ಕೈ ಬರಹದಲ್ಲಿ ಎಂಟು ಪುಟಗಳನ್ನು( DTP 4 ಪುಟಗಳು )ಫುಲ್ ಸ್ಕೇಪ್ ಪೇಪರಿನ ಒಂದೆ ಮಗ್ಗುಲಲ್ಲಿ ಸ್ಪುಟವಾಗಿ ಬರೆದಿರಬೇಕು.
3) ಕಾರ್ಬನ್ ಅಥವಾ ಜೆರಾಕ್ಸ್ ಪ್ರತಿಗಳು, ಭಾಷಾಂತರ ಬರಹಗಳು ಸ್ಪರ್ಧೆಗೆ ಅರ್ಹವಾಗಿರುವುದಿಲ್ಲ.
4) ಕಥೆಗಾರರು ಯಾ ಲೇಖಕರು ತಮ್ಮ ಹೆಸರು ವಿಳಾಸ (ಪಿನ್ ಕೋಡ್) ಸಹಿತ ದೂರವಾಣಿ ಅಥವಾ ಮೊಬೈಲ್ ನಂಬರ್ ಅನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಭಾವಚಿತ್ರವನ್ನು ಕ್ರತಿಯಡನೆ ಲಗತ್ತಿಸಿರಬೇಕು.
5) ಕಥೆ ಯಾ ಲೇಖನದ ಪುಟಗಳಲ್ಲಿ ಕಥೆಗಾರರ, ಲೇಖಕರ ಹೆಸರು ಇರಬಾರದು.
6) ರಾಜಕೀಯ ಕ್ಷೇತ್ರವನ್ನು ಹೊರತುಪಡಿಸಿ ಆರ್ಥಿಕ, ಸಾಮಾಜಿಕ , ಸಾಹಿತ್ಯಕ, ಶೈಕ್ಷಣಿಕ, ಔದ್ಯಾಮಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಲೇಖನಗಳಿರಬೇಕು.
7) ವಿಜೇತರಿಗೆ ಚೆಕ್ ಮೂಲಕ ಬಹುಮಾನ ಮತ್ತು ಪ್ರಮಾಣ ಪತ್ರ ಕಳುಹಿಸಲಾಗುವುದು.
8) ಬಹುಮಾನ ಗಳಿಸಿದ ಹಾಗೂ ಮೆಚ್ಚುಗೆ ಪಡೆದ ಕೃತಿಗಳನ್ನು “ಸಾಫ್ಫಲ್ಯ” ತ್ರೈಮಾಸಿಕದ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು.
9) ಸ್ಪರ್ಧೆಗೆ ಬಂದ ಬರಹಗಳಲ್ಲಿ ಆಯ್ದ ಲೇಖನಗಳನ್ನು ಕ್ರಮವಾಗಿ ಪ್ರಕಟಿಸಲಾಗುವುದು.
10) ಸ್ಪರ್ಧೆಗೆ ಬಂದ ಕೃತಿಗಳನ್ನು ಯಾವುದೇ ಕಾರಣಕ್ಕೂ ಹಿಂತಿಸಲಾಗುವುದಿಲ್ಲ, ಬರಹಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 30- 9 -2024.
ಕಳುಹಿಸಬೇಕಾದ ವಿಳಾಸ :
The Editor ,
“Saphalya Kannada Quarterly”
The Saphalya Seva Sangha (Regd),
603, Kesar Kunj, Sai Rath Co-op Hsg Society
Telly Galli, Andheri (E) Mumbai – 400 069.
.




