30.9 C
Mumbai
June 8, 2026
Mumbai News Kannada
ಸುದ್ದಿ

ಡಹಾಣು ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ವಾರ್ಷಿಕ ಜಾತ್ರೆ ಆರಂಭ





      ದೇಶದ 61 ಶಕ್ತಿಪೀಠಗಳಲ್ಲಿ ಒಂದಾಗಿದ್ದು ಮಹಾರಾಷ್ಟ್ರ ಹಾಗೂ ಗುಜರಾತ್ ನ ಅಸಂಖ್ಯ ಭಾವಿಕರ ಶೃದ್ಧಾಸ್ಥಾನವಾಗಿರುವ ಡಹಾಣೂವಿನ ಶ್ರೀ ಮಹಾಲಕ್ಶ್ಮೀ ಮಂದಿರದಲ್ಲಿನ ವಾರ್ಷಿಕ ಜಾತ್ರೆಯು ಇದೇ ಎಪ್ರಿಲ್ 23 ರ ಹನುಮಾನ್ ಜಯಂತಿಯಂದು ಆರಂಭವಾಗಿದೆ. 

      ಮುಂಬೈ ಅಹಮದಾಬಾದ್ ರಾಜಮಾರ್ಗದಲ್ಲಿನ ಚಾರೋಟಿಯ ಡಹಾಣೂ ನಾಸಿಕ್ ಕೂಡುರಸ್ತೆಯಲ್ಲಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿನ  ವಿವಲ್ ವೇಡೆ ಯಲ್ಲಿ ಹೈವೇ ಬದಿಯಲ್ಲಿಯೇ ಇರುವ ಈ ಪ್ರಸಿದ್ಧ ಮಂದಿರದಲ್ಲಿ ಚೈತ್ರ ಪೂರ್ಣಿಮೆಯಂದು ಆರಂಭವಾಗಿ ಕೃಷ್ಣ ಪಕ್ಷದ ಅಷ್ಟಮಿಯ ತನಕ ಸುಮಾರು 15 ರಿಂದ 20 ದಿನ  ಜರಗುವ  ಈ ಜಾತ್ರೆಗೆ ದೂರದ ಊರುಗಳಿಂದ ಅಸಂಖ್ಯ ಭಕ್ತಾದಿಗಳು ಆಗಮಿಸುತ್ತಾರೆ.

 

ಸ್ಥಳೀಯ ಆದಿವಾಸಿಗಳಾದ ‘ವಾರಲಿ ‘ ಯವರ ಕುಲದೇವಿ ( ರಾಣಿ ಆಯೀ) ಎಂದೇ ನಂಬಿಕೊಂಡು ಪೂಜಿಸಲ್ಪಡುವ ಈ ಮಂದಿರದ ಆಡಳಿತ ಹಾಗೂ ಪೂಜಾ ವಿಧಿವಿಧಾನಗಳನ್ನು ಇಲ್ಲಿನ ಸಾತವೀ ಕುಟುಂಬಸ್ಥರು ನಡೆಸಿಕೊಂಡು ಬರುತ್ತಾರೆ. 

   ಒಂದು ಗ್ರಾಮದ ಜಾತ್ರೆಯ ಪರಿಪೂರ್ಣ ಸ್ವರೂಪವುಳ್ಳ   ಈ ಜಾತ್ರೆಯಲ್ಲಿ ಭಾಗವಹಿಸಿ ಆನಂದಿಸಲು ಸ್ಥಳೀಯರು ಹಾಗೂ ಪರವೂರಿನ ಅಸಂಖ್ಯ  ಭಕ್ತರು ಬರುತ್ತಾರೆ.

  ಕೆಳಗೆ ಭವ್ಯ ದೇವೀ ಮಂದಿರವಿದ್ದು ಪೂರ್ಣಿಮೆಯಂದು ಜರಗುವ ಹೋಮದಲ್ಲಿ ಭಾಗವಹಿಸಲು   ಹಾಗೂ  ಅನತಿ ದೂರದಲ್ಲಿರುವ ಬೆಟ್ಟದ ಶಿಖರದ  1400 ಅಡಿ ಎತ್ತರದ ( ಮುಸಳ್ಯಾ ಡೋಂಗರ್) ಮೇಲೆ ರಾತ್ರಿಯಲ್ಲಿ     ಜರಗುವ ಧ್ವಜಾರೋಹಣವನ್ನು ವೀಕ್ಢಿಸಲು ಸಾವಿರಾರು ಜನರು ಆಗಮಿಸುತ್ತಾರೆ.

ಮಾಧ್ಯಮ ವರದಿ

ಪಿ.ಆರ್.ರವಿಶಂಕರ್ ಡಹಾಣೂರೋಡ್

8483980035



Related posts

ಕೆಜಿಎಫ್, ಓಂ ಚಿತ್ರದ ಖ್ಯಾತ ನಟ ಹರೀಶ್ ರೈ ಥೈರಾಯ್ಡ್ ಕ್ಯಾನ್ಸರ್ ನಿಂದ ನಿಧನ.

Mumbai News Desk

ಬೋಂಬೆ ಬಂಟ್ಸ್ ಅಸೋಷಿಯೇಶನ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಡಿ ಕೆ ಶೆಟ್ಟಿ ಆಯ್ಕೆ

Mumbai News Desk

ಜೂನ್ 1 ರಂದು ಅಡ್ಯಾರ್ ಗಾರ್ಡನ್ ನಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025 ರಾಷ್ಟ್ರೀಯ ಕಲಾ ಸಮ್ಮೇಳನ

Mumbai News Desk

ಅರಬ್ಬಿ ಸಮುದ್ರದ ಅಲೆಗಳನ್ನು ಗೆದ್ದ ಮುಂಬೈ ಹುಡುಗಿ: 5 ಕಿ.ಮೀ ಈಜಿ ದಾಖಲೆ ಬರೆದ ದಿಶಿತಾ ಚಂದ್ರಶೇಖರ್ ಪೂಜಾರಿ

Mumbai News Desk

ಕುಲಾಲ ಸಂಘ ಮುಂಬೈ  ಅಧ್ಯಕ್ಷರಾಗಿ ಮರು ಆಯ್ಕೆಗೊಂಡ   ರಘು ಮೂಲ್ಯ ಪಾದೆಬೆಟ್ಟು ಅವರಿಗೆ ಮಂಗಳೂರುನಲ್ಲಿ  ಗೌರವ,

Mumbai News Desk

ಮಂಗಳೂರಿನಲ್ಲಿ ಉದ್ಯಮಿ, ಶ್ರೀಮಂತರಿಗೆ 200 ಕೋಟಿಗೂ ಅಧಿಕ ವಂಚಿಸಿದ ಜಪ್ಪಿನಮೊಗರು ನಿವಾಸಿ ರೋಹನ್ ಸಲ್ಡಾನ ಅರೆಸ್ಟ್

Mumbai News Desk