July 23, 2026
Mumbai News Kannada
ಸುದ್ದಿ

ಡಹಾಣು ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ವಾರ್ಷಿಕ ಜಾತ್ರೆ ಆರಂಭ







      ದೇಶದ 61 ಶಕ್ತಿಪೀಠಗಳಲ್ಲಿ ಒಂದಾಗಿದ್ದು ಮಹಾರಾಷ್ಟ್ರ ಹಾಗೂ ಗುಜರಾತ್ ನ ಅಸಂಖ್ಯ ಭಾವಿಕರ ಶೃದ್ಧಾಸ್ಥಾನವಾಗಿರುವ ಡಹಾಣೂವಿನ ಶ್ರೀ ಮಹಾಲಕ್ಶ್ಮೀ ಮಂದಿರದಲ್ಲಿನ ವಾರ್ಷಿಕ ಜಾತ್ರೆಯು ಇದೇ ಎಪ್ರಿಲ್ 23 ರ ಹನುಮಾನ್ ಜಯಂತಿಯಂದು ಆರಂಭವಾಗಿದೆ. 

      ಮುಂಬೈ ಅಹಮದಾಬಾದ್ ರಾಜಮಾರ್ಗದಲ್ಲಿನ ಚಾರೋಟಿಯ ಡಹಾಣೂ ನಾಸಿಕ್ ಕೂಡುರಸ್ತೆಯಲ್ಲಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿನ  ವಿವಲ್ ವೇಡೆ ಯಲ್ಲಿ ಹೈವೇ ಬದಿಯಲ್ಲಿಯೇ ಇರುವ ಈ ಪ್ರಸಿದ್ಧ ಮಂದಿರದಲ್ಲಿ ಚೈತ್ರ ಪೂರ್ಣಿಮೆಯಂದು ಆರಂಭವಾಗಿ ಕೃಷ್ಣ ಪಕ್ಷದ ಅಷ್ಟಮಿಯ ತನಕ ಸುಮಾರು 15 ರಿಂದ 20 ದಿನ  ಜರಗುವ  ಈ ಜಾತ್ರೆಗೆ ದೂರದ ಊರುಗಳಿಂದ ಅಸಂಖ್ಯ ಭಕ್ತಾದಿಗಳು ಆಗಮಿಸುತ್ತಾರೆ.

 

ಸ್ಥಳೀಯ ಆದಿವಾಸಿಗಳಾದ ‘ವಾರಲಿ ‘ ಯವರ ಕುಲದೇವಿ ( ರಾಣಿ ಆಯೀ) ಎಂದೇ ನಂಬಿಕೊಂಡು ಪೂಜಿಸಲ್ಪಡುವ ಈ ಮಂದಿರದ ಆಡಳಿತ ಹಾಗೂ ಪೂಜಾ ವಿಧಿವಿಧಾನಗಳನ್ನು ಇಲ್ಲಿನ ಸಾತವೀ ಕುಟುಂಬಸ್ಥರು ನಡೆಸಿಕೊಂಡು ಬರುತ್ತಾರೆ. 

   ಒಂದು ಗ್ರಾಮದ ಜಾತ್ರೆಯ ಪರಿಪೂರ್ಣ ಸ್ವರೂಪವುಳ್ಳ   ಈ ಜಾತ್ರೆಯಲ್ಲಿ ಭಾಗವಹಿಸಿ ಆನಂದಿಸಲು ಸ್ಥಳೀಯರು ಹಾಗೂ ಪರವೂರಿನ ಅಸಂಖ್ಯ  ಭಕ್ತರು ಬರುತ್ತಾರೆ.

  ಕೆಳಗೆ ಭವ್ಯ ದೇವೀ ಮಂದಿರವಿದ್ದು ಪೂರ್ಣಿಮೆಯಂದು ಜರಗುವ ಹೋಮದಲ್ಲಿ ಭಾಗವಹಿಸಲು   ಹಾಗೂ  ಅನತಿ ದೂರದಲ್ಲಿರುವ ಬೆಟ್ಟದ ಶಿಖರದ  1400 ಅಡಿ ಎತ್ತರದ ( ಮುಸಳ್ಯಾ ಡೋಂಗರ್) ಮೇಲೆ ರಾತ್ರಿಯಲ್ಲಿ     ಜರಗುವ ಧ್ವಜಾರೋಹಣವನ್ನು ವೀಕ್ಢಿಸಲು ಸಾವಿರಾರು ಜನರು ಆಗಮಿಸುತ್ತಾರೆ.

ಮಾಧ್ಯಮ ವರದಿ

ಪಿ.ಆರ್.ರವಿಶಂಕರ್ ಡಹಾಣೂರೋಡ್

8483980035



Related posts

ಮುಂಬಯಿ ಕನ್ನಡ ಸಂಘ: ಅರ್ಚನಾ ಪೂಜಾರಿಯವರಿಗೆ ಸನ್ಮಾನ

Mumbai News Desk

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಡಾ.ರವಿರಾಜ್ ಸುವರ್ಣ ನೇಮಕ.

Mumbai News Desk

ಭಾರತದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ ವಿಕ್ರಮ್-1 ಉಡಾವಣೆ ಯಶಸ್ವಿ: ಇತಿಹಾಸ ಬರೆದ ಸ್ಕೈರೂಟ್ ಏರೋಸ್ಪೇಸ್

Mumbai News Desk

ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ, ಕುತ್ಯಾರು  ಶತ ಸಂವತ್ಸರೋತ್ಸವ

Mumbai News Desk

ತೀಯಾ ಫ್ಯಾಮಿಲಿ (ತೀಯಾ ಸಮಾಜ) ಯು.ಎ.ಇ. ಅಧ್ಯಕ್ಷರಾಗಿ ಜಸ್ಮಿತಾ ವಿವೇಕಾನಂದ್

Mumbai News Desk

ಆರ್ಥಿಕ ಕ್ರಾಂತಿಯ ಹರಿಕಾರ, ಸಮಾಜ ಸೇವಕ ವರದ ಉಳ್ಳಾಲ್ ಅಸ್ತಂಗತ : ಮುಂಬೈನಲ್ಲಿ ಇಂದು ಅಂತ್ಯಕ್ರಿಯೆ

Mumbai News Desk