September 6, 2026
Mumbai News Kannada
ಸುದ್ದಿ

ಯಕ್ಷಗಾನದ ಮಧುರ ದ್ವನಿ, ಕರಾವಳಿ ಕೋಗಿಲೆ ಸುಬ್ರಮಣ್ಯ ಧಾರೇಶ್ವರ್ ಇನ್ನಿಲ್ಲ






ಬಡಗುತಿಟ್ಟಿನ ಶೇಷ್ಠ ಭಾಗವತ, ಯಕ್ಷ ರಂಗದ ತಜ್ಞ ಭಾಗವತರೆಂದು ಗುರುತಿಸಲ್ಪಟ್ಟ ಸುಭ್ರಮಣ್ಯ ಧಾರೇಶ್ವರ್ ಇಂದು (ಏ.25)ಬೆಳ್ಳಿಗೆ ಬೆಂಗಳೂರಿನಲ್ಲಿ ನಿಧನ ಹೊಂದಿದರು, ಅವರಿಗೆ 67 ವರ್ಷ ಪ್ರಾಯವಾಗಿತ್ತು.
ಅವರು ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಕಾರ್ತಿಕ್, ಪುತ್ರಿ, ಹಾಗೂ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿರುವರು.

ಕೋಟ ಅಮೃತೇಶ್ವರಿ, ಶ್ರೀ ಪೆರ್ಡೂರು ಮೇಳದಲ್ಲಿ ಅವರು ಭಾಗವತರಾಗಿ, ಹೊಸ ರಾಗಗಳನ್ನು ಯಕ್ಷರಂಗದಲ್ಲಿ ಯಶಸ್ವಿಯಾಗಿ ಬಳಸಿರುವರು. ಅವರು ಸುಮಾರು 400ಕ್ಕೂ ಅಧಿಕ ಯಕ್ಷಗಾನದ ಅಡಿಯೋ ಕ್ಯಾಸೆಟ್ ಗೆ ದ್ವನಿಯಗಿದ್ದಾರೆ. ಪೆರ್ಡೂರು ಮೇಳದಲ್ಲಿ 26 ವರ್ಷ 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ಅವರು ನಿರ್ದೇಶಿಸಿದ್ದು, ಎಲ್ಲಾ ಪ್ರಸಂಗಗಳೂ ಸೂಪರ್ ಹಿಟ್ ಆಗಿವೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಅವರ ನಿಧನ ಯಕ್ಷರಂಗಕ್ಕೆ ತುಂಬಲಾರದ ನಷ್ಟ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ ಕುಂದಾಪುರ ತಾಲೂಕಿನ ನಾಗೂರಿನ ಅವರ ಸ್ವಗ್ರಹದಲ್ಲಿ ನಡೆಯಲಿದೆ.



Related posts

ಭಾಯಂದರ್ (ಪೂ) ಕ್ರೌನ್ ಬಿಸಿನೆಸ್ ಹೋಟೆಲ್ ಉದ್ಘಾಟನೆ.

Mumbai News Desk

ಶ್ರದ್ಧಾಂಜಲಿ: ದಿನೇಶ್ ಆನಂದ್ ಹೆಗ್ಡೆ ಅವರ ನಿಧನ

Mumbai News Desk

ಕಾರ್ಕಳ : ಬಿಜೆಪಿಯ ಹಿರಿಯ ಮುಖಂಡ, ಖ್ಯಾತ ನ್ಯಾಯವಾದಿ ಎಂ. ಕೆ. ವಿಜಯ್ ಕುಮಾರ್ ನಿಧನ

Mumbai News Desk

ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಶ್ರೀ ದೇವೀ ಜಪಪಾರಾಯಣ ಸಂಪನ್ನ

Mumbai News Desk

ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮನಾಥ್ ಹೆಗ್ಡೆ ನಿಧನ.

Mumbai News Desk

ಬಜೆ ಮೊಗವೀರ ಸುವರ್ಣ ಆದಿ ಮೂಲಸ್ಥಾನ, ಮುಂಬಾಯಿ ಶಾಖೆಯ 100ನೇ ಮಹಾಸಭೆ

Mumbai News Desk