July 23, 2026
Mumbai News Kannada
ಮುಂಬಯಿ

ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ ಬದ್ಲಾಪುರದ ಮೋಯಾ ನಗರಿಯಲ್ಲಿ ಗಣ-ಹೋಮ, ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ







ಮುಂಬಯಿ : ಮೋಯಾ ಸಮುದಾಯದ ಹಿರಿಯ ಸಂಘಟನೆ ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ (ವೈ.ಎಂ.ಬಿ.ಎ.) ಮುಂಬಯಿ ಯ ವತಿಯಿಂದ ಬದ್ಲಾಪುರದಲ್ಲಿರುವ ಸಮಾಜದ ವಿಶಾಲವಾದ ನಿವೇಷಣ ’ಮೋಯಾ ನಗರಿ’ಯಲ್ಲಿ ಗಣ-ಹೋಮ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಯು ಮೇ ೨೬ ರಂದು ನಡೆಯಿತು.

ವೈ.ಎಂ.ಬಿ.ಎ. ಹಳೆಯ ಕಾಟೇಜ್ ನ ನಾಗ ದೇವಸ್ಥಾನ ಮತ್ತು ಶಿವ ಮಂದಿರದಲ್ಲಿ ಮೇ 26 ರಂದು ಬೆಳಿಗ್ಗೆ 7 ರಿಂದ 8 ರವರೆಗೆ ಪೂಜೆ ಬಳಿಕ ಡೊಂಬಿವಿಲಿಯ ರಘುಪತಿ ಭಟ್ ಮತ್ತು ಬಳಗದವರಿಂದ ಗಣಹೋಮ ನಡೆಯಿತು. ಅನಂತಚಂದ್ರ ಸಾಗರ್ ಮತ್ತು ಶ್ರೀಮತಿ ಸಂಧ್ಯಾ ಎ. ಸಾಗರ್ ಭಾಗವಹಿಸಿದ್ದರು. ಯಶವಂತ ಎ.ಕೆ. , ಶ್ರೀಮತಿ ಲಕ್ಷ್ಮಿ ವೈ.ಕೆ. ಮತ್ತಿತರರ ಉಪಸ್ಥಿತಿಯೊಂದಿಗೆ ಬೆಳಿಗ್ಗೆ 11ರಿಂದ ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ ಆರಂಭಗೊಂಡು ಮಧ್ಯಾಹ್ನ 1 ಗಂಟೆಗೆ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಮತ್ತು ಅನ್ನ ಪ್ರಸಾದದೊಂದಿಗೆ ಧಾರ್ಮಿಕ ಕಾರ್ಯಕ್ರಮ ಮುಕ್ತಾಯವಾಯಿತು.

ಉಪಸ್ಥಿತರಿದ್ದ ಎಲ್ಲಾ ಸದಸದಸ್ಯರು ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ ನ ಸದಸ್ಯರುಗಳ ಒಗ್ಗಟ್ಟಿನೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಪ್ರಾರ್ಥಿಸಿದರು. ಮೇ ೨೫ ರಂದು ವೈ.ಎಂ.ಬಿ.ಎ. ಯ ಕ್ರೀಯಾಶೀಲ ಸದಸ್ಯರುಗಳಾದ ಆನಂದ್ ಸಿ. ಐಲ್, ಚಂದ್ರಶೇಖರ್ ಜಿ. ಐಲ್, ಸಂದೀಪ್ ಬಿ. ಐಲ್, ಭಾಸ್ಕರ್ ಕೆ. ಉಚ್ಚಿಲ್ ಮತ್ತು ತಾರಾನಾಥ್ ಎ. ಉಚ್ಚಿಲ್ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಸಹಕರಿಸಿದರು. ಅಂದು ಸಂಜೆ 7ರಿಂದ 10ರವರೆಗೆ ಅಲ್ಲಿ ಭಜನೆಯನ್ನೂ ಮಾಡಿರುವರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಪದಾಧಿಕಾರಿಗಳು ಯುವ ಪೀಳಿಗೆಯೊಂದಿಗೆ ಮುಂದಿನ ಯೋಜನೆ ಕುರಿತು ಸಂವಾದ ನಡೆಸಿದ್ದು ರಚಿತ್ ಎಸ್. ಐಲ್, ವೀಕ್ಷಿತ್ ವಿ. ಉದ್ಯಾವರ, ಜಶಿತ್ ಉದ್ಯಾವರ್, ಪ್ರೀತ್ ಯು. ಐಲ್, ನಮನ್ ಕೆ. ಉದ್ಯಾವರ್, ಏಕಾಂಶ ಅಡ್ಕ, ಕು. ಸಾಕ್ಷಿ ಉದ್ಯಾವರ್ , ಕು. ಪ್ರಾಚಿ ಉದ್ಯಾವರ್, ಹಿರಿಯ ಸದಸ್ಯರಾದ ದೇವೇಂದ್ರ ಜಿ. ಅಯೂರ್, ತಾರಾನಾಥ್ ಎ. ಉಚ್ಚಿಲ್, ದಿನಕರ್ ಟಿ. ಉಚ್ಚಿಲ್ ಮೊದಲಾದವರು ಸೂಕ್ತ ಸಲಹೆ ಸೂಚನೆಗಳನ್ನಿತ್ತರು. ಶ್ರೀಮತಿ ಯಶೋದಾ ಬಟ್ಟಪ್ಪಾಡಿ, ರವಿ ವಿಠಲ್ , ಕೃಪಾಕರ ಕುಂಬ್ಳೆ, ಚಂದ್ರ ವಾಮಂಜೂರ್, ಶೈಲೇಶ್ ಉದ್ಯಾವರ್, ಕೋಶಾಧಿಕಾರಿಗಳಾದ ಸುಭಾಷ್ ಚಂದ್ರ ಉಚ್ಚಿಲ್ , ಸುರೇಶ್ ವಾಮಂಜೂರು ಮೊದಲಾದವರು ಇತರರೊಡನೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಕಿಶೋರ್ ಎಸ್ ಉದ್ಯಾವರ ಧನ್ಯವಾದ ಸಮರ್ಪಿಸಿದರು.



Related posts

ವಸಾಯಿ ಕರ್ನಾಟಕ ಸಂಘ: ಅಧ್ಯಕ್ಷರಾಗಿ ಕರ್ನೂರು ಶಂಕರ್ ಆಳ್ವ, ಗೌರವಾಧ್ಯಕ್ಷರಾಗಿ ವಿಶ್ವನಾಥ್ ಪಿ. ಶೆಟ್ಟಿ ಆಯ್ಕೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನಿಧೀಶ ಧನಂಜಯ ಪೂಜಾರಿಗೆ ಶೇ 89.20 ಅಂಕ.

Mumbai News Desk

ವಿದ್ಯಾ ವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಹಾಗೂ ಸಮ್ಮಾನ ಕಾರ್ಯಕ್ರಮ

Mumbai News Desk

ಶ್ರೀ ಮಹಾವಿಷ್ಣು ದೇವಸ್ಥಾನ ಡೊಂಬಿವಲಿ : 47ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk

ಮುಂಬಯಿಯ ಪ್ರಥಮ ಭೂಗತ ಮೆಟ್ರೋ 3ರ ಮೊದಲ ಹಂತ ಶೀಘ್ರವೇ ಕಾರ್ಯರಂಭ

Mumbai News Desk

ಹರಟೆ ಸಾಹಿತಿ ದಿ. ಚಂದ್ರಶೇಖರ ರಾವ್ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭ

Mumbai News Desk