September 6, 2026
Mumbai News Kannada
ತುಳುನಾಡು

ಕೆ ಎನ್ ಚಂದ್ರಶೇಖರ್ ಅವರ ಬೀಸು ಬಲೆಗೆ ಭಾರಿ ಗಾತ್ರದ ತೊರಕೆ ಮೀನು (STING RAY FISH)





ಮುಂಬೈಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಸಮಾಜ ಸೇವೆಯಲ್ಲಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡ ಕೆ ಎನ್ ಚಂದ್ರಶೇಖರ್ ಅವರು ತನ್ನ ಹುಟ್ಟುರಾದ ಪಡುಬಿದ್ರಿ ನಡಿಪಟ್ಣ ದಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. ಸದಾ ಚುರುಕಾಗಿ ಕ್ರಿಯಾಶೀಲರಾಗಿರುವ ಅವರು ತನ್ನ ಸಮಾಜದ ಮುಖ್ಯ ಕುಲಕಸಬು ಮೀನುಗಾರಿಕೆಯಲ್ಲೂ ತೊಡಗಿಕೊಂಡಿರುವರು .
ಮಳೆಗಾಲದ ಸಮುದ್ರ ತುಸು ಜೋರಾಗಿ ಇದ್ದರೂ, ಮೊನ್ನೆ (ಅ. 14) ಚಂದ್ರಶೇಖರ್ ಅವರ ಬೀಸು ಬಲೆಗೆ ದೊಡ್ಡ ಗಾತ್ರದ ತೊರಕೆ ಮೀನು (Sting Ray Fish )ಬಿದ್ದಿರುತ್ತದೆ. ಇಂತಹ ದೊಡ್ಡ ಗಾತ್ರದ ಮೀನು ಪರ್ಸಿನ್ ಅಥವಾ ಆಳ ಸಮುದ್ರದ ಬೋಟುಗಳಿಗೆ ಸಿಗುವುದಿದೆ, ಬೀಸು ಬಲೆಗೆ ದೊಡ್ಡ ಮೀನುಗಳು ಸಿಗುವುದು ಅಪರೂಪ, ಅಂದ ಹಾಗೆ ಚಂದ್ರಶೇಖರ್ ಅವರ ಬೀಸು ಬಲೆಗೆ ಬಿದ್ದ ತೊರೆಕೆ ಮೀನಿನ ಬರೋಬ್ಬರಿ ತೂಕ 11 ಕೆಜಿ. ಇಷ್ಟು ದೊಡ್ಡ ಗಾತ್ರದ ಮೀನು ನಾಡ ಬೀಸು ಬಲೆಗೆ ಬಿದ್ದದ್ದು ಒಂದು ದಾಖಲೆ ಎಂದು ಸ್ಥಳೀಯ ಮೀನುಗಾರರ ಅನಿಸಿಕೆ.
ಮುಂಬೈಯಲ್ಲಿ ಸಮಾಜ ಪರ ಸಂಘಟನೆಗಳಿಗೆ ಕೊಡುಗೈ ದಾನಿಯಾಗಿ ಸಹಕಾರ ನೀಡುತ್ತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಚಂದ್ರಶೇಖರ್ ಅಧ್ಯಾತ್ಮಿಕ ಒಲವುಳ್ಳವರು ಇದೀಗ ಹುಟ್ಟೂರಿನಲ್ಲಿ ಸದಾ ಕ್ರಿಯಾಶೀಲರಾಗಿ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ.



Related posts

ಕಾಪುವಿನ ಶ್ರೀ ಬಬ್ಬರ್ಯ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಿದ ಕಾಲದಿ ನೇಮೋತ್ಸವ

Mumbai News Desk

ಮೊಗವೀರ ಮಹಾಸಭಾ ಹೆಜಮಾಡಿ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ಹರೀಶ್ ಕೋಟ್ಯಾನ್ ಆಯ್ಕೆ

Mumbai News Desk

ಉಡುಪಿ : ಪರ್ಯಾಯ ಆಚರಣೆಯ ಅಂಗವಾಗಿ ನಡೆದ ಧಾನ್ಯ ಮುಹೂರ್ತ

Mumbai News Desk

ಕೋಡಿಕಲ್‌ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್‌ನ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿಗಾರ್ ಆಯ್ಕೆ

Mumbai News Desk

Grand Thayankett Mahotsav, celebrated at Uppala Thurthi, Mahamalaraya Temple

Mumbai News Desk

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು : ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ, ಅ. 29ರ ತನಕ ಸ್ವರ್ಣ ಸಮರ್ಪಣೆಗೆ ಭಕ್ತರಿಗೆ ಅವಕಾಶ

Mumbai News Desk