September 6, 2026
Mumbai News Kannada
ತುಳುನಾಡು

ಗ್ರಾಮದ ಅಭಿವೃದ್ಧಿ ನಮ್ಮಧ್ಯೇಯವಾಗಲಿ : ಕುಸುಮಾ ಚಂದ್ರಶೇಖರ್





ಮೂಲಸೌಕರ್ಯಗಳ ಅಭಿವೃದ್ಧಿ,​ರಸ್ತೆ ಮತ್ತು ಬೀದಿ ದೀಪ,ಶಿಕ್ಷಣ, ಆರೋಗ್ಯ
​ ಚರಂಡಿ ವ್ಯವಸ್ಥೆ, ಕಸ ವಿಲೇವಾರಿ ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ಮಾಣದ ಮೂಲಕ ಗ್ರಾಮವನ್ನು ಸ್ವಚ್ಛವಾಗಿಡಲು ಪಡುಪಣಂಬೂರು ಗ್ರಾಮ ಪಂಚಾಯತ್ ಮಹತ್ತರವಾದ ಯೋಗದಾನ ನೀಡಿದೆ. ಇದೆಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರಲು ಮುಲ್ಕಿ ಮೂಡಬಿದಿರೆ ಕ್ಷೇತ್ರದ ಜನಪ್ರಿಯ ಶಾಸಕ ಉಮನಾಥ ಕೋಟ್ಯಾನ್ ಅವರ ಸಕಾರಾತ್ಮಕ ಧೋರಣೆಯಿಂದ ಸಾಧ್ಯವಾಯಿತು ಎಂದು ಪಡುಪಣಂಬೂರು ಗ್ರಾಮ‌ ಪಂಚಾಯಿತ್ ಅಧ್ಯಕ್ಷೆ ಕುಸುಮಾ ಚಂದ್ರ ಶೇಕರ್ ತಿಳಿಸಿದರು.

ಡಿ.22 ರಂದು ಪೂರ್ವಾಹ್ನ 10ನೇ ತೋಕೂರು ಜಂತ್ರಿ ಮನೆಯ ಸಮೀಪದ ಶಾಸಕರ ನಿಧಿಯಿಂದ ನಿರ್ಮಾಣ ವಾಗುತ್ತಿರುವ ಕಿರು ಸೇತುವೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು

ಪಂಚಾಯಿತ್ ಉಪಾಧ್ಯಕ್ಷ ಹೇಮಾನಾಥ ಅಮೀನ್ ಸ್ವಾಗತಿಸಿದರು. ಸದಸ್ಯರಾದ ಮೋಹನದಾಸ್,ಪ್ರಮೀಳಾ ಶೆಟ್ಟಿ ಅನಿಲ್,ಅಮಿತಾ,ಕಸ್ತೂರಿ ಪಂಜ,ಲೀಲಾ ಬಂಜನ್, ಶ್ಯಾಮಲಾ ಭಟ್, ವಸಂತಿ ವಿಠ್ಠಲ ,ಪಿ.ಸಿ.ಕೋಟ್ಯಾನ್ ಮುಖೇಶ್ ಸುವರ್ಣ,ಲೋಹಿತ್ ಕೋಟ್ಯಾನ್, ವಾಣಿ ಮಹೇಶ್,ಶರತ್ ಭಟ್,ಗೋಪಾಲ್ ಮೂಲ್ಯ, ಮೊದಲಾದವರು ಉಪಸ್ಥಿತರಿದ್ದರು..



Related posts

ನಾಗೇಶ ಎಲ್. ಕುಲಾಲ್ ಕುಳಾಯಿ ಅವರು ಸ್ವರ್ಣ ಕುಂಭ ಸಹಕಾರಿ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆ

Mumbai News Desk

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ಮತ್ತು ನಟಿ ರೂಪ ಐಯ್ಯರ್ : ನವದುರ್ಗಾ ಲೇಖನ ಯಜ್ಞ ಸಂಕಲ್ಪ

Mumbai News Desk

ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅಯ್ಯಪ್ಪ ಸ್ವಾಮಿ ವ್ರತದಾರಿಗಳಿಗೆ ಅನ್ನದಾನ ಸೇವೆ, ವಿಶ್ರಾಂತಿ ವ್ಯವಸ್ಥೆ

Mumbai News Desk

ವಿಜ್ಞಾನದಲ್ಲಿ ಪ್ರಯೋಗಶೀಲತೆ ಅತಿ ಮುಖ್ಯ: ಸುರೇಶ್ ಶೆಟ್ಟಿ ನಾಡಿಯಾಳು ಗುತ್ತು

Mumbai News Desk

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ನೂತನ ಮೊಕ್ತೆಸರರುಗಳು

Mumbai News Desk

ಮೂಲ್ಕಿ ಪುನರೂರು ಶ್ರೀದೇವರ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ

Mumbai News Desk