July 23, 2026
Mumbai News Kannada
ಮುಂಬಯಿ

ಕಲೀನಾ ಸೌತ್ ಸೇವಾ ಸಂಘದ ಸಾರ್ವಜನಿಕ ಗಣೇಶೋತ್ಸವ.








ಚಿತ್ರ, ವರದಿ: ಉಮೇಶ್ ಕೆ. ಅಂಚನ್.

ಮುಂಬಯಿ, ಸೆ. 11:ಸಂತಾಕ್ರೂಸ್ ಪೂರ್ವದ ಕಲೀನಾ ಪೋಲಿಸ್ ಚೌಕಿ ಎದುರುಗಡೆ ಇರುವ ಸೌತ್ ಸೇವಾ ಸಂಘದ ವತಿಯಿಂದ 13ನೇ ವರ್ಷದ ಐದು ದಿನಗಳ ಸಾರ್ವಜನಿಕ ಗಣೇಶೋತ್ಸವ ಸಮಾರಂಭವು ಆರಂಭಗೊಂಡಿದ್ದು 4ನೇ ದಿವಸ ಸೆ. 10ರಂದು ರಘುಚಂದ್ರ ಆಚಾರ್ಯ ಪೊವಾಯಿ ಅವರ ಪೌರಹೋತ್ಯದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, ಗಣೇಶ ಪೂಜೆ ನಡೆಯಿತು. ಸಂಘದ ಉಪಾದ್ಯಕ್ಷ ಗಣೇಶ್ ಶೆಟ್ಟಿ ಉಳೆಪಾಡಿ ದಂಪತಿಗಳು ಪೂಜಾ ಕೖಂಕಾರ್ಯದಲ್ಲಿ ಉಪಸ್ಥಿತರಿದ್ದರು.ತದನಂತರ ಧಾರ್ಮಿಕ ಸಭೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.


ಧಾರ್ಮಿಕ ಸಭೆಯಲ್ಲಿ ಕನ್ನಡ ಜಾನಪದ ಪರಿಷತ್, ಮಹಾರಾಷ್ಟ್ರ ಘಟಕದ ಅದ್ಯಕ್ಷ ಹಾಗೂ ರಾಷ್ಟ್ರೀಯ ಕಿಸಾನ್ ಕಾಂಗ್ರೆಸಿನ ಸಂಯೋಜಕ ಸುರೇಶ್ ಶೆಟ್ಟಿ ಯೆಯ್ಯಾಡಿ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ಸಂಘದ ಅದ್ಯಕ್ಷ ಸುಂದರ ಶೆಟ್ಟಿ ವಾಮದಪದವು ಹಾಗೂ ಪದಾಧಿಕಾರಿಗಳು ಸತ್ಕರಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ಬಾಬು ಬೆಲ್ಚಡ ನಿರೂಪಿಸಿದರು.
ಸಂಘದ ಗೌರವಾದ್ಯಕ್ಷ ಚಿತ್ರೇಶ್ ಶೆಟ್ಟಿ ಪಾಂಗಾಳ, ಉಪಾದ್ಯಕ್ಷ ಮಂಜುನಾಥ್ ಆರ್. ಶೆಟ್ಟಿ , ಕಾರ್ಯದರ್ಶಿ ಸಂದೀಪ್ ಬಂಗೇರ ನಕ್ರೆ, ಜತೆ ಕಾರ್ಯದರ್ಶಿಗಳಾದ ಗಣೇಶ್ ಸುವರ್ಣ, ಶೇಖರ್ ಆರ್. ಸಾಲ್ಯಾನ್, ಕೋಶಾಧಿಕಾರಿ ಚಂದ್ರಹಾಸ್ ಕೋಟ್ಯಾನ್, ಜತೆ ಕೋಶಾಧಿಕಾರಿಗಳಾದ ಮಂಗೇಶ್ ನಾಯಕ್, ಅವಿನಾಶ್ ಅಮೀನ್, ಹಾಗೂ ಸಲಹೆಗಾರರು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.

.

.

.

.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಾರ್ತಿಕ್ ಅರವಿಂದ್ ಪದ್ಮಶಾಲಿ ಗೆ ಶೇ 96 ಅಂಕ.

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಲಕ್ಷ್ ಜೆ.ಶೆಟ್ಟಿಗೆ ಶೇ.94.20 ಅಂಕ

Mumbai News Desk

ಹಿಂದೂ ಧರ್ಮ ಸಂರಕ್ಷಣಾ ಮಹಾ ಸಮಾವೇಶ: ಸೆಪ್ಟೆಂಬರ್ 7ರಂದು ಪೂರ್ವಭಾವಿ ಸಭೆ

Mumbai News Desk

ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ –  ತನ್ನನ್ನು ತಾನು ಅರಿತುಕೊಳ್ಳುವುದೇಅಧ್ಯಾತ್ಮಿಕ :ಒಡಿಯೂರು ಶ್ರೀ 

Mumbai News Desk

ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ,

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ, ನೂತನ ಪದಾಧಿಕಾರಿಗಳ ಆಯ್ಕೆ. ಗೌ.ಅಧ್ಯಕ್ಷರಾಗಿ ಸುರೇಶ್ ಪೂಜಾರಿ, ಅಧ್ಯಕ್ಷರಾಗಿ ಸಿ.ಎ. ಪೂಜಾರಿ ಅಯ್ಕೆ

Mumbai News Desk