September 6, 2026
Mumbai News Kannada
ಮುಂಬಯಿ

ಕಲೀನಾ ಸೌತ್ ಸೇವಾ ಸಂಘದ ಸಾರ್ವಜನಿಕ ಗಣೇಶೋತ್ಸವ.






ಚಿತ್ರ, ವರದಿ: ಉಮೇಶ್ ಕೆ. ಅಂಚನ್.

ಮುಂಬಯಿ, ಸೆ. 11:ಸಂತಾಕ್ರೂಸ್ ಪೂರ್ವದ ಕಲೀನಾ ಪೋಲಿಸ್ ಚೌಕಿ ಎದುರುಗಡೆ ಇರುವ ಸೌತ್ ಸೇವಾ ಸಂಘದ ವತಿಯಿಂದ 13ನೇ ವರ್ಷದ ಐದು ದಿನಗಳ ಸಾರ್ವಜನಿಕ ಗಣೇಶೋತ್ಸವ ಸಮಾರಂಭವು ಆರಂಭಗೊಂಡಿದ್ದು 4ನೇ ದಿವಸ ಸೆ. 10ರಂದು ರಘುಚಂದ್ರ ಆಚಾರ್ಯ ಪೊವಾಯಿ ಅವರ ಪೌರಹೋತ್ಯದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, ಗಣೇಶ ಪೂಜೆ ನಡೆಯಿತು. ಸಂಘದ ಉಪಾದ್ಯಕ್ಷ ಗಣೇಶ್ ಶೆಟ್ಟಿ ಉಳೆಪಾಡಿ ದಂಪತಿಗಳು ಪೂಜಾ ಕೖಂಕಾರ್ಯದಲ್ಲಿ ಉಪಸ್ಥಿತರಿದ್ದರು.ತದನಂತರ ಧಾರ್ಮಿಕ ಸಭೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.


ಧಾರ್ಮಿಕ ಸಭೆಯಲ್ಲಿ ಕನ್ನಡ ಜಾನಪದ ಪರಿಷತ್, ಮಹಾರಾಷ್ಟ್ರ ಘಟಕದ ಅದ್ಯಕ್ಷ ಹಾಗೂ ರಾಷ್ಟ್ರೀಯ ಕಿಸಾನ್ ಕಾಂಗ್ರೆಸಿನ ಸಂಯೋಜಕ ಸುರೇಶ್ ಶೆಟ್ಟಿ ಯೆಯ್ಯಾಡಿ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ಸಂಘದ ಅದ್ಯಕ್ಷ ಸುಂದರ ಶೆಟ್ಟಿ ವಾಮದಪದವು ಹಾಗೂ ಪದಾಧಿಕಾರಿಗಳು ಸತ್ಕರಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ಬಾಬು ಬೆಲ್ಚಡ ನಿರೂಪಿಸಿದರು.
ಸಂಘದ ಗೌರವಾದ್ಯಕ್ಷ ಚಿತ್ರೇಶ್ ಶೆಟ್ಟಿ ಪಾಂಗಾಳ, ಉಪಾದ್ಯಕ್ಷ ಮಂಜುನಾಥ್ ಆರ್. ಶೆಟ್ಟಿ , ಕಾರ್ಯದರ್ಶಿ ಸಂದೀಪ್ ಬಂಗೇರ ನಕ್ರೆ, ಜತೆ ಕಾರ್ಯದರ್ಶಿಗಳಾದ ಗಣೇಶ್ ಸುವರ್ಣ, ಶೇಖರ್ ಆರ್. ಸಾಲ್ಯಾನ್, ಕೋಶಾಧಿಕಾರಿ ಚಂದ್ರಹಾಸ್ ಕೋಟ್ಯಾನ್, ಜತೆ ಕೋಶಾಧಿಕಾರಿಗಳಾದ ಮಂಗೇಶ್ ನಾಯಕ್, ಅವಿನಾಶ್ ಅಮೀನ್, ಹಾಗೂ ಸಲಹೆಗಾರರು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.

.

.

.

.



Related posts

ಕುಮಾರ ಕ್ಷತ್ರಿಯ ಸಂಘ ಮುಂಬಯಿ, 59ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ

Mumbai News Desk

ಮುಂಬೈ: ಬಿರಿಯಾನಿ ಮತ್ತು ಕಲ್ಲಂಗಡಿ ಸೇವಿಸಿದ ನಂತರ ಒಂದೇ ಕುಟುಂಬದ ನಾಲ್ವರ ಸಾವು

Mumbai News Desk

ಶ್ರೀ ರಾಜನ್ ದೈವ ಶ್ರೀ ಧೂಮವತಿ ದೈವಸ್ಥಾನ ಬಳ್ಕುಂಜೆ : ಅಭಿವೃದ್ಧಿ ಸಮಿತಿ ಮುಂಬಯಿ 15 ನೇ ವಾರ್ಷಿಕ ಮಹಾಸಭೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಬಿಂದಿಯಾ ಉದಯ ಮೂಲ್ಯ ಗೆ ಶೇ 94.80 ಅಂಕ.

Mumbai News Desk

ನವರಾತ್ರಿ ವೈಭವ: ‘ಓಂ ಶಕ್ತಿ ಮಹಿಳಾ ಸಂಸ್ಥಾ’ದ ಗರ್ಬಾ ನೃತ್ಯೋತ್ಸವ – ಸೇವಾ ಪಥಕ್ಕೆ ದುರ್ಗೆಯ ಆಶೀರ್ವಾದ

Mumbai News Desk

ದಹಿಸರ್ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನದಲ್ಲಿ 40ನೇ ವಾರ್ಷಿಕ ಮಹಾಪೂಜಾ ಮಹೋತ್ಸವ (ಬಲಿ ಉತ್ಸವ, ಸಾಧಕರಿಗೆ ಸನ್ಮಾನ, ಯಕ್ಷಗಾನ ಪ್ರದರ್ಶನ)

Mumbai News Desk