32 C
Mumbai
April 24, 2026
Mumbai News Kannada
ಸುದ್ದಿ

ಡಹಾಣೂವಿನ ಬೀದಿಗಳಲ್ಲಿ ಗಣರಾಯನ ದರ್ಬಾರು.





ಚಿತ್ರ ಹಾಗೂ ಸುದ್ದಿ : ಪಿ.ಆರ್.ರವಿಶಂಕರ್

ಡಹಾಣೂ : ತಾ.09.09.2024. ಕಳೆದ ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಡಹಾಣೂವಿನ ಪ್ರತಿಷ್ಟಿತ ರಾಜಾಪುರ ಸಾರಸ್ವತ ಸಮಾಜ ಸೇವಾ ಮಂಡಳದ 26ನೆಯ ವರ್ಷದ ಮಂಗಲಮೂರ್ತಿ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ವಿಜೃಂಭಣೆಯಿಂದ ಜರಗಿ ಸಂಪನ್ನಗೊಂಡಿತು. ಧಾರ್ಮಿಕ ವಿಧಿವಿಧಾನಗಳನ್ನು  ವೈದಿಕ ಶ್ರೀ ವಸಂತ್ ಭಟ್ ಜರಗಿಸಿದರು.  ಸಂಪೂರ್ಣ ವ್ಯವಸ್ಥಾಪನೆಯಲ್ಲಿ ಯುವವೃಂದದ ಸದಸ್ಯರು ಸಹಕರಿಸಿದರು.

          ಪ್ಲಾಸ್ಟಿಕ್ ಮುಕ್ತ ಆಚರಣೆಗೆ ಮಹತ್ವ ನೀಡಿದ  ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಂಗಳೂರು ಮಲ್ಲಿಗೆಯೂ ಸೇರಿದಂತೆ ವೈವಿಧ್ಯಮಯ ಹೂಗಳ ಅಲಂಕಾರ ಮತ್ತು ಮಂಗಲಮೂರ್ತಿಯ ಶೋಭಾಯಾತ್ರೆಯಲ್ಲಿ ಗೋಮಾಂತಕದ ಮೂಲ ಮಠದ ಮಾದರಿಯಲ್ಲಿನ ವಿಶೇಷ ಪಲ್ಲಕ್ಕಿಯು ರಾಜಬೀದಿಯ ಇಕ್ಕೆಲಗಳಲ್ಲಿ ಜಮಾಯಿಸಿದ ನಗರವಾಸಿಗಳ  ಗಮನ ಸೆಳೆಯಿತು. 

            ಸ್ಥಳೀಯ ಭಕ್ತಾದಿಗಳು ಮತ್ತು  ವಿವಿಧ  ಸಂಸ್ಥೆಗಳ ಪದಾಧಿಕಾರಿಗಳೂ   ಸೇರಿದಂತೆ ತುಳುವ ಕನ್ನಡಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಶೋಭಾಯಾತ್ರೆಯ ಬಳಿಕ ಡಹಾಣೂ ಉತ್ತರದಲ್ಲಿನ ಕಂಕ್ರಾಡಿ ನದಿಯಲ್ಲಿ ಶ್ರೀಗಣೇಶ ಮೂರ್ತಿಯ ಜಲಸ್ಥಂಭನ ಕಾರ್ಯಕ್ರಮ ಜರಗಿತು.

 ಡಹಾಣೂ ವಲಯದ ಜಾಹೀರಾತಿಗಾಗಿ ಸಂಪರ್ಕಿಸಿ : ಪಿ.ಆರ್.ರವಿಶಂಕರ್ 8483980035



Related posts

ಶೆರೋನ್ ಶೆಟ್ಟಿ ಐಕಳರವರ ಮಹಾಕುಂಭಾಶ್ವಮೇಧ ಕೃತಿ ಬಿಡುಗಡೆ ಸಮಾರಂಭ

Mumbai News Desk

ಮಹಾರಾಷ್ಟ್ರ ರಾಜ್ಯಪಾಲರು ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ

Mumbai News Desk

ಶಾರ್ಜಾ ಕರ್ನಾಟಕ ಸಂಘದ 23 ನೇ ವರ್ಷದ ವಾರ್ಷಿಕೋತ್ಸವ, 70ನೇ ಕನ್ನಡ ರಾಜ್ಯೋತ್ಸವ ಮತ್ತು ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ

Mumbai News Desk

ಬಿಗ್ ಬಾಸ್ ಕನ್ನಡ 12: ರನ್ನರ್ ಅಪ್ ಆಗಿ ಹೊರಹೊಮ್ಮಿದ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ

Mumbai News Desk

ಭಾರತ್ ಬ್ಯಾಂಕ್‌ಗೆ NAFCUB ಮತ್ತು ಬ್ಯಾಂಕಿಂಗ್ ಫ್ರಾಂಟಿಯರ್ಸ್ ವತಿಯಿಂದ ಶ್ರೇಷ್ಠ ಸೈಬರ್‌ ಸೆಕ್ಯೂರಿಟಿ ಪ್ರಶಸ್ತಿ ಹಾಗೂ ಶ್ರೇಷ್ಠ ಅಪಾಯ ನಿರ್ವಹಣಾ ಪ್ರಶಸ್ತಿ

Mumbai News Desk

ಮುಂಬೈ : ಪ್ರವೀಣ್ ಭಟ್ ಅವರಿಗೆ ಪಿತೃ ವಿಯೋಗ

Mumbai News Desk