September 6, 2026
Mumbai News Kannada
ಮಹಾರಾಷ್ಟ್ರ

ಮಹಾರಾಷ್ಟ್ರ : ಹೊಸ ಸರಕಾರ ರಚನೆಗೆ ಮುಂದುವರಿದ ಕುತೂಹಲ, ದಿಢೀರ್ ಸ್ವಗ್ರಾಮಕ್ಕೆ ಹೊರಟ ಏಕನಾಥ್ ಶಿಂಧೆ






ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿ ಒಂದು ವಾರ ಕಳೆಯುತ್ತಾ ಬಂದರೂ, ಇನ್ನೂ ಹೊಸ ಹೊಸ ಸರ್ಕಾರ ರಚನೆ ಕಗ್ಗಂಟಾಗಿ ಉಳಿದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನೇ ಅಂತಿಮಗೊಳಿಸಲಾಗಿದೆ ಎನ್ನಲಾಗುತ್ತಿದ್ದರೂ, ಈ ಕುರಿತು ಬಿಜೆಪಿ ನೇತೃತ್ವದ ಮೈತ್ರಿಕೂಟ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ, ಈ ನಡುವೆ ಖಾತೆ ಹಂಚಿಕೆ ಕುರಿತು ನಡೆಯಬೇಕಿದ್ದ ಸಭೆ ರದ್ದಾಗಿರುವುದು ಬಾರಿ ಕುತೂಹಲ ಮೂಡಿಸಿದೆ . ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸತಾರಾ ಜಿಲ್ಲೆಯಲ್ಲಿರುವ ತಮ್ಮ ಗ್ರಾಮಕ್ಕೆ ಅನಿರೀಕ್ಷಿತವಾಗಿ ತೆರಳಿರುವುದು ಸಭೆ ರದ್ದಾಗಲು ಕಾರಣ.
ದಿಲ್ಲಿಗೆ ತೆರಳಿದ ಮಹಾಯುತಿಯ ಮೂವರು ಪ್ರಮುಖ ನಾಯಕರಾದ ದೇವೇಂದ್ರ ಪಡ್ನವೀಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಗುರುವಾರ ಸಂಜೆ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಜೊತೆ ಸಭೆ ನಡೆಸಿದ್ದರು, ಬಳಿಕ ಮೂವರು ಮುಂಬೈಗೆ ಮರಳಿದ್ದರು. ಈ ಸಭೆ ಬಳಿಕ ಪಡ್ನವೀಸ್ ಅವರೇ ಸಿಎಂ ಅಭ್ಯರ್ಥಿ ಎಂದು ಬಹುತೇಕ ನಿಶ್ಚಿತವಾಗಿದೆ,
ಮುಂಬೈಯಲ್ಲಿ ನಡೆಯಬೇಕಿದ್ದ ಮಹಾಯುತಿ ಮೈತ್ರಿಕೂಟದ ಸಭೆ ರದ್ದಾಗಿದೆ. ಅಲ್ಲದೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಪಕ್ಷದ ಸಭೆಯನ್ನೂ ರದ್ದುಗೊಳಿಸಲಾಗಿದೆ. ಆದರೆ ಶಿಂಧೆ ಅವರ ದಿಡೀರ್ ಕಾರ್ಯಕ್ರಮದ ಹಿಂದಿನ ವಿವರ ಬಹಿರಂಗವಾಗಿಲ್ಲ. ಸರಕಾರ ರಚನೆಯ ಮಾತುಕತೆಗಳ ವಿಚಾರದಲ್ಲಿ ಶಿಂಧೆ ಅಸಮಾಧಾನಗೊಂಡಿದ್ದಾರೆಯೇ ಎಂಬ ಊಹಾಪೋಹಗಳಿಗೂ ಇದು ಕಾರಣವಾಗಿದೆ.



Related posts

ನಾಸಿಕ್ ಬಂಟರ ಸಂಘದ 20ನೇ ವಾರ್ಷಿಕೋತ್ಸವ: ಸಾಂಸ್ಕೃತಿಕ ವೈವಿಧ್ಯದ ಸಂಭ್ರಮ

Mumbai News Desk

ಮಹಾರಾಷ್ಟ್ರ ಮಂಡಳಿಯ ಎಚ್ಎಸ್ ಸಿ(HSC), ಎಸ್ ಎಸ್ ಸಿ (SSC),2026ರ ಪರೀಕ್ಷೆಯ ವೇಳಾ ಪಟ್ಟಿ ಬಿಡುಗಡೆ

Mumbai News Desk

ಓಲ್ಡ್ ಮಾಂಕ್, ರಾಯಲ್ ಚಾಲೆಂಜ್, ಆಂಟಿಕ್ವಿಟಿ, ಬ್ಯಾಗ್‌ಪೈಪರ್ ಹಾಗೂ ಓಲ್ಡ್ ಕ್ಯಾಸ್ಕ್‌ಗೆ FSSAI ಶಾಕ್: ರಮ್-ವಿಸ್ಕಿ ಅಂದುಕೊಂಡು ಕುಡಿದಿದ್ದಕ್ಕೆ ಬಿತ್ತು ಬ್ಯಾನ್ ಮಾರ್ಕ್!!!!,

Mumbai News Desk

ಬೊಯಿಸರ್   ಶ್ರೀ ಸೋಮೇಶ್ವರ ಮಂದಿರದಲ್ಲಿ 15ನೇ ವಾರ್ಷಿಕ ಮಹಾಪೂಜೆ, ಸಂಪನ್ನ,

Mumbai News Desk

ಕರ್ನಾಟಕ ಮಹಾಮಂಡಲ ಮೀರಾ ಭಾಯಂದರ್ ನ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ , ಹರಸಿನ ಕುಂಕುಮ ಕಾರ್ಯಕ್ರಮ 

Mumbai News Desk

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ ನೇತಾರ ಮನೋಹರ್ ಜೋಷಿ ವಿಧಿವಶ

Mumbai News Desk