27.7 C
Mumbai
July 23, 2026
Mumbai News Kannada
ಪ್ರಕಟಣೆ

ದಹಿಸರ್ ಪೂರ್ವ :ಶ್ರೀ ಜಯಸ್ವಾಮಿ ದಹಿಸರ್ ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ, ಡಿ. 1ರಂದು 18ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ,







ಮುಂಬಯಿ ಉಪನಗರ ದಹಿಸರ್ ಪೂರ್ವದ ಸಮಾಜಸೇವಕ, ಧಾರ್ಮಿಕ ಚಿಂತಕ ಶ್ರೀ ಜಯ ಸ್ವಾಮಿ ದಹಿಸರ್, ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ ಡಿ.1 ರಂದು ರವಿವಾರ 18ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾ ಪೂಜೆಯು ರಾಧಾಕೃಷ್ಣ ಮಂದಿರ ಹಾಲ್, ಸೈಂಟ್ ಥಾಮಸ್ ಸ್ಕೂಲ್ ಬಳಿ, ರಾವಲ್ಪಾಡ, ದಹಿಸರ್ ಪೂರ್ವ ಇಲ್ಲಿ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ, ಅಂಧೇರಿ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ ಗಂಟೆ 5:30 ಕ್ಕೆ ಮಹಾ ಗಣಪತಿ ಹೋಮ, 7:30ಕ್ಕೆ ಪ್ರಾಣಪ್ರತಿಷ್ಠೆ, ಪೂಜೆ, ಅರ್ಚನೆ, 8:00 ರಿಂದ 9:00ರ ತನಕ ನಾರಾಯಣಿಯಂ, ಕೇರಳ ಗ್ರೂಪ್ ದಹಿಸರ್ ಇವರಿಂದ, 10:00 ರಿಂದ 12:30ರ ತನಕ ಭಜನೆ – ಶ್ರೀದುರ್ಗಾಪರಮೇಶ್ವರಿ ಶನೀಶ್ವರ ದೇವಸ್ಥಾನ ರಾವಾಲ್ವಾಡ, ದಹಿಸರ್ ಪೂರ್ವ ಇವರಿಂದ

12:30 ರಿಂದ 1:00ರ ತನಕ ದೀಪಾರಾಧನೆ, ಮಹಾ ಪೂಜೆಯನ್ನು ಶ್ರೀ ಚಂದ್ರಹಾಸ್‌ ಗುರುಸ್ವಾಮಿಯವರು ನಡೆಸಲಿದ್ದಾರೆ. ಬಳಿಕ ತೀರ್ಥಪ್ರಸಾದ
ವಿತರಣೆ ನಡೆಯಲಿದೆ. 1:00ರಿಂದ 3:00ರ ತನಕ ಸಾರ್ವಜನಿಕ ಅನ್ನದಾನ ಸೇವೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರೆಲ್ಲರೂ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಶ್ರೀ ಜಯಸ್ವಾಮಿ ದಹಿಸರ್ ಅತ್ತೂರು, ಗುಂಡ್ಯಡ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ.- 9902581150, 8452054984 ಕ್ಕೆ ಸಂಪರ್ಕಿಸಬಹುದು.



Related posts

ಏ. 12 ರಿಂದ 21 ರ ವರಗೆ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ 62 ನೇ ವಾರ್ಷಿಕ ಮಹೋತ್ಸವ

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ : ಫೆ. 10 ರಂದು 66ನೇ ವಾರ್ಷಿಕೋತ್ಸವ;ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಸಮಾರಂಭ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿಜ.15 ಮತ್ತು 16ರಂದು ಪ್ರಥಮ ವರ್ಧಂತಿ ಉತ್ಸವ.

Mumbai News Desk

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಅ. 26 ರಂದು 24ನೇ ವಾರ್ಷಿಕ ಮಹಾಸಭೆ, ರಜತ ಸಂಭ್ರಮಕ್ಕೆ ಚಾಲನೆ

Mumbai News Desk

Moorura Bovi (Moya) Mahasabha, Mumbai – AGM on 22/9/24.

Mumbai News Desk

ಹಿಂದೂ ಸಂಗಮ ಆಯೋಜನಾ ಸಮಿತಿ ಮೂಲ್ಕಿ : ಜ. 25ರಂದು “ಭವ್ಯ ಹಿಂದೂ ಸಂಗಮ”

Mumbai News Desk