30.5 C
Mumbai
June 8, 2026
Mumbai News Kannada
ಮುಂಬಯಿ

ಮುಂಬಯಿ : ಹೋಟೆಲ್ ಉದ್ಯಮಿಗೆ ಕೊಲೆ ಬೆದರಿಕೆ ಗ್ಯಾಂಗ್ ಸ್ಟರ್ ಡಿ. ಕೆ ರಾವ್ ಬಂಧನ





ಮುಂಬೈಯ ಅಂಧೇರಿ ಮೂಲದ ಹೋಟೆಲ್ ಮಾಲಕನಿಗೆ ಆಸ್ತಿ ಮಾರಾಟ ಮಾಡುವಂತೆ ಕೊಲೆ ಬೆದರಿಕೆ ಹಾಕಿದ್ದ ಗ್ಯಾಂಗ್ಸ್ಟರ್ ರವಿ ಮಲ್ಲೇಶ್ ಬೋರ ಅಲಿಯಾಸ್ ಡಿ ಕೆ ರಾವ್ ಮತ್ತು ಆತನ ಆರು ಮಂದಿ ಸಹಾಯಕರನ್ನು ಮುಂಬೈ ಕ್ರೈಮ್ ಬ್ರಾಂಚ್ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
30ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ಹೋಟೆಲ್ ಅನ್ನು ಹಿರಿಯ ನಾಗರಿಕರೊಬ್ಬರು ನಡೆಸುತ್ತಿದ್ದು, ಅದನ್ನು 2.5 ಕೋಟಿ ರೂಪಾಯಿಗೆ ಮಾರಟ ಮಾಡುವಂತೆ ಡಿ ಕೆ ರಾವ್ ಕಳೆದ ಒಂದು ವರ್ಷದಿಂದ ಬೆದರಿಕೆ ಹಾಕುತಿದ್ದರು.
ಡಿ. ಕೆ ರಾವ್ ಮತ್ತು ಇತರ ಆರು ಜನ ತಮ್ಮ ಹೋಟೆಲ್ ಅನ್ನು ಸ್ವಾಧೀನ ಪಡಿಸಿಕೊಳ್ಳಲು ಸಂಚುರೂಪಿಸಿದ್ದಾರೆ ಎಂದು ಆರೋಪಿಸಿ ಅಪರಾಧ ವಿಭಾಗದ ಸುಲಿಗೆ ನಿಗ್ರಹ ದಳಕ್ಕೆ, ಹೋಟೆಲ್ ಉದ್ಯಮಿ ದೂರು ನೀಡಿದ ಆದಾರದಲ್ಲಿ ಡಿ ಕೆ ರಾವ್ ಮತ್ತು ಅವರ ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಡಿ. ಕೆ ರಾವ್ ಅವರ ವಿರುದ್ಧ 41 ಪ್ರಕರಣಗಳು ದಾಖಲಾಗಿವೆ. ಅವರು ಕುಖ್ಯಾತ ಡಾನ್ ಚೋಟ ರಾಜನ್ ನ ಗ್ಯಾಂಗ್ ನ ಪ್ರಮಖ ಸದಸ್ಯನಾಗಿದ್ದು, ಮುಂಬೈಯ ಧಾರವಿ ನಿವಾಸಿ.
ರಾವ್ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ 6 ಕೊಲೆ, ಐದು ಡಕಾಯಿತಿ, ಮತ್ತು ಇತರ ಸುಲಿಗೆಗೆ ಸಂಬಂಧಿಸಿದ ಪ್ರಕರಣಗಳು ಸೇರಿವೆ. 2022ರ ಅಕ್ಟೋಬರ್ ನಲ್ಲಿ ಸಂಘಟಿತ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನಿಂದ ಡಿ ಕೆ ರಾವ್ ಅವರಿಗೆ ಜಮೀನು ನೀಡಲಾಯಿತು.



Related posts

ಮೊಗವೀರ  ವ್ಯವಸ್ಥಾಪಕ ಮಂಡಳಿಯಲ್ಲಿ  ” ಆಟಿಡ ಒಂಜಿ ಕೂಟ “

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವತಿಯಿಂದ ಕೇರಮ್ ಮತ್ತು ಚೆಸ್ ಸ್ಪರ್ಧೆ.

Mumbai News Desk

ಡೊಂಬಿವಲಿಯಲ್ಲಿ ಮಹಿಳೆಯರ ಹಳದಿ-ಕುಂಕುಮ ಸಂಭ್ರಮ: ಸಾಂಪ್ರದಾಯಿಕ ಉಡುಗೆ, ನೃತ್ಯದ ಮೆರುಗು

Mumbai News Desk

ಮುಂಬೈ ಒತ್ತೆಯಾಳು ಬಿಕ್ಕಟ್ಟಿನ ಹಿಂದಿನ ವ್ಯಕ್ತಿ ರೋಹಿತ್ ಆರ್ಯ ಯಾರು? ಆತನ ಹಿನ್ನೆಲೆ ಏನು?

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಆಶ್ರಯದಲ್ಲಿ ಯಕ್ಷಗಾನ

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗುರುಪೂರ್ಣಿಮೆ ಆಚರಣೆ.

Mumbai News Desk