30 C
Mumbai
April 24, 2026
Mumbai News Kannada
ಸುದ್ದಿ

ಯುವ ಭರತನಾಟ್ಯ ಪ್ರತಿಭೆ ವಿದುಷಿ ಸಿಂಚನ ಎಸ್ ಕುಲಾಲ್ : ಲಿಯೋ ಕ್ಲಬ್ ಮಂಗಳಾದೇವಿ ವತಿಯಿಂದ ಸನ್ಮಾನ





ಮಂಗಳೂರು: ಭರತನಾಟ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಯುವ ಪ್ರತಿಭೆ ಸಿಂಚನ ಎಸ್ ಕುಲಾಲ್ ಅವರನ್ನು ದಿನಾಂಕ 29/1/2025 ನೇ ಬುಧವಾರ ಲಯನ್ಸ್ ಹಾಗೂ ಲಿಯೋ ಕ್ಲಬ್ ನ ಕಾರ್ಯಕ್ರಮದಲ್ಲಿ ಲಿಯೋ ಕ್ಲಬ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ನೃತ್ಯ ಕಲೆಯಲ್ಲಿ ಅವರ ನಿಸ್ಸೀಮ ಶ್ರಮ, ನೃತ್ಯಾಭ್ಯಾಸದ ಮೂಲಕ ಸಾಧಿಸಿರುವ ವಿಶಿಷ್ಟ ಸ್ಥಾನ, ಹಾಗೂ “ವಿದುಷಿ” ಬಿರುದಿಗೆ ಪಾತ್ರರಾಗಿರುವುದಕ್ಕಾಗಿ ಈ ಗೌರವ ನೀಡಲಾಯಿತು.

ಸಾಧನೆಯ ಪಯಣ

ಸದಾಶಿವ ಕುಲಾಲ್ ಹಾಗೂ ಚಂದ್ರಪ್ರಭ ಎಸ್ ಕುಲಾಲ್ ಇವರ ಸುಪುತ್ರಿಯಾಗಿರುವ ವಿದುಷಿ ಸಿಂಚನ ಎಸ್ ಕುಲಾಲ್ ಇವರು ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರ ಶಿಷ್ಯೆಯಾಗಿದ್ದು, ಭರತನಾಟ್ಯದ ತಂತ್ರ, ಲಾಸ್ಯ ಹಾಗೂ ನೃತ್ಯಾಭಿನಯದಲ್ಲಿ ಅಪಾರ ನೈಪುಣ್ಯತೆ ಪ್ರದರ್ಶಿಸಿದ್ದಾರೆ. ಅನೇಕ ಭರತನಾಟ್ಯ ಸಪ್ತಾಹಗಳು, ಕಲಾ ಉತ್ಸವಗಳು, ಹಾಗೂ ರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ , ಭರತನಾಟ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ.

ನೃತ್ಯಾಭ್ಯಾಸದಲ್ಲಿ ಪ್ರತಿದಿನವೂ ಹೊಸ ತಂತ್ರಗಳನ್ನು ಅರಿತು, ಗುರುಗಳಿಂದ ಮಾರ್ಗದರ್ಶನ ಪಡೆಯುತ್ತ, ಶ್ರದ್ಧೆಯಿಂದ ಕಲಿಯುವ ಅವರು, ಭರತನಾಟ್ಯವನ್ನು ಕೇವಲ ಕಲೆಯಾಗಿ ಮಾತ್ರವಲ್ಲ, ಆಧ್ಯಾತ್ಮಿಕ ಅನುಭವವಾಗಿ ಸ್ವೀಕರಿಸಿದ್ದಾರೆ.

ಸನ್ಮಾನ ಸಮಾರಂಭ

ಈ ಸನ್ಮಾನ ಸಮಾರಂಭದಲ್ಲಿ ಲಿಯೋ ಕ್ಲಬ್‌ನ ಅಧ್ಯಕ್ಷರಾದ ಅಭಿಲಾಶ ಆನಂದ್, ಕೋಶಾಧಿಕಾರಿಯಾದ ಶ್ರೀನಿಧಿ ಶೆಟ್ಟಿ, ಖಜಾಂಜಿಯಾದ ಸಮೀಕ್ಷಾ ಹರೀಶ್, ಗಣ್ಯರು, ಹಾಗೂ ಸಂಘದ ಪ್ರಮುಖ ಸದಸ್ಯರು ಉಪಸ್ಥಿತರಿದ್ದು, ಸಿಂಚನ ಅವರ ಸಾಧನೆಯನ್ನು ಪ್ರಶಂಸಿಸಿದರು. ನೃತ್ಯಮಯ ಜೀವನಕ್ಕಾಗಿ ಅವರು ನಡೆಸಿದ ಅಪಾರ ಪರಿಶ್ರಮವನ್ನು ಗುರುತಿಸಿ, ಅವರ ಭವಿಷ್ಯದ ಕಲಾ ಯಾನಕ್ಕೆ ಶುಭ ಹಾರೈಸಿದರು.

ಈ ಸನ್ಮಾನವು ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದ್ದು, ಸಿಂಚನ ಅವರ ನೃತ್ಯಯಾನ ಯಶಸ್ವಿಯಾಗಲೆಂದು ಎಲ್ಲರೂ ಹಾರೈಸಿದರು.

  • ಲಿಯೋ ಕ್ಲಬ್, ಮಂಗಳೂರು


Related posts

ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮುಂಬಯಿ ನಗರಕ್ಕೆ – ಭಕ್ತಿ ಪೂರ್ವಕ ಸ್ವಾಗತ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ. ಸಮಾಜ ಕಲ್ಯಾಣ ಯೋಜನೆಯಡಿ ಮಂಜೂರಾದ ಸಹಾಯಧನ ವಿತರಣೆ.

Mumbai News Desk

ರಂಗ ಸುದರ್ಶನ (ರಿ) ಸಸಿಹಿತ್ಲು ಇವರಿಂದ, ದೈವ ನಡೆ -ಚಿಂತನ ಮಂಥನ, ರಂಗ ಸ್ನೇಹ ಸಂಗಮ – ಡಾ.ಸುರೇಂದ್ರ ಕುಮಾರ್ ಹೆಗ್ಡೆ “ರಂಗ ಭೀಷ್ಮ” ಬಿರುದು ಪ್ರಧಾನ

Mumbai News Desk

ಹಿರಿಯ ರಂಗ ಕಲಾವಿದ ಸುಂದರ ಮೂಡಬಿದ್ರಿ ಕುಲಾಲ ಸಮಾಜದ ಗೌರವ. 

Mumbai News Desk

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಗೆ ಸ್ಪಂದನೆ : ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಆರಂಭ

Mumbai News Desk

ಜೆ. ಬಿ. ನಗರ : ಸುನಂದಾ ಕೇಶವ ಶ್ರೀಯಾನ್ ನಿಧನ

Mumbai News Desk