July 23, 2026
Mumbai News Kannada
ಸುದ್ದಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮುಲ್ಕಿ  ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ತೋನ್ಸೆ ಶಶಿರೇಖಾ ಆನಂದ  ಶೆಟ್ಟಿ ಓಪನ್ ಏರ್ ಗಾರ್ಡನ್” ಹೆಸರಿನಲ್ಲಿ ತೆರೆದ ವೇದಿಕೆ  ನಿರ್ಮಾಣ







      ಮುಂಬಯಿ ಜ12. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹತ್ವಕಾಂಕ್ಷಿ ಯೋಜನೆಯಾದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ  ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿಶಿತಾರ್ಥ,ಮೆಹೆಂದಿ,ಮದುವೆ, ಔತನಕೂಟ, ಹುಟ್ಟುಹಬ್ಬ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಶ್ರೀಮತಿ ತೋನ್ಸೆ ಶಶಿರೇಖಾ ಆನಂದ  ಶೆಟ್ಟಿ ಓಪನ್ ಏರ್ ಗಾರ್ಡನ್. ಎಂಬ ಹೆಸರಿನಲ್ಲಿ ತೆರೆದ ವೇದಿಕೆ ನಿರ್ಮಾಣ

  ಈ. ಓಪನ್ ಏರ್ ಗಾರ್ಡನ್  ಸಂಪೂರ್ಣ ಪ್ರಾಯೋಜಕತೆಯನ್ನು  ಒಕ್ಕೂಟದ ವಿಶೇಷ ಮಹಾ-ನಿರ್ದೇಶಕರಾದ ಮುಂಬೈಯ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಸಿ. ಎಂ. ಡಿ. ತೋನ್ಸೆ ಆನಂದ್ ಎಂ. ಶೆಟ್ಟಿಯವರ ಮತ್ತು ಶಶಿರೇಖಾ ಆನಂದ ಎಂ.ಶೆಟ್ಟಿಯವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರವಾಗಿ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿಯವರು, ವಿಶೇಷ ಮಹಾ ನಿರ್ದೇಶಕರಾದ  ಪ್ರವೀಣ್ ಬೋಜ ಶೆಟ್ಟಿ ಹಾಗೂ ಕೋಶಾಧಿಕಾರಿಯಾದ  ಉಳ್ತೂರು ಮೋಹನದಾಸ ಶೆಟ್ಟಿಯವರು ಜೊತೆ ಸೇರಿ ಗೌರವ ಪೂರ್ವಕವಾಗಿ  ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. 

    ಓಪನ್ ಏರ್ ಗಾರ್ಡನ್ ಯೋಜನೆಯ ಪೂರ್ತಿ ಜವಾಬ್ದಾರಿಯನ್ನು ಮತ್ತು ಅದರ ಕೆಲಸ ಕಾರ್ಯಗಳನ್ನು ತನ್ನ ಯೋಚನೆಯ ಪ್ರಕಾರದಂತೆ ಮಾಡಿ ಈ ವರ್ಷ 2024 ಡಿಸೆಂಬರ್ ಕೊನೆಯಲ್ಲಿ   ಒಕ್ಕೂಟಕ್ಕೆ ಒಪ್ಪಿಸುತ್ತೇನೆ ಎಂದು  ತೋನ್ಸೆ   ಆನಂದ ಶೆಟ್ಟಿಯವರು   ಭರವಸೆಯ ಮಾತನ್ನು ನೀಡಿದ್ದಾರೆ.

ಈ  ಯೋಜನೆಗೆ ಸಹಕಾರ ನೀಡಿದ   ತೋನ್ಸೆ ಶಶಿರೇಖಾ ಆನಂದ ಎಂ. ಶೆಟ್ಟಿಯವರಿಗೆ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ . ಉಪಾಧ್ಯಕ್ಷರುಕರ್ನಿರೆ ವಿಶ್ವನಾಥ ಶೆಟ್ಟಿ.ಗೌ.ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ .ಜೊತೆ -ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ ಮತ್ತು ಮಹಾ ನಿರ್ದೇಶಕರು, ನಿರ್ದೇಶಕರು, ಮಹಾ-ಪೋಷಕರು, ಪೋಷಕರು, ದಾನಿಗಳು,ಕಾರ್ಯಕಾರಿ ಸಮಿತಿ ಸದಸ್ಯರು ಸರ್ವ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ



Related posts

ಬೀದಿ ನಾಯಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ವಿತರಣೆಗೆ ಸುಪ್ರೀಂ ಕೋರ್ಟ್ ನಿಷೇಧ

Mumbai News Desk

ಮೈತ್ರಿ ಮಲ್ಲಿಗೆ ಮಿಸ್ಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿ, 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಪರ್ಧಿಗಳಿದ್ದ ಕಣದಲ್ಲಿ ರಾಜ್ಯಕ್ಕೆ ಪ್ರಶಸ್ತಿ ಗೆದ್ದು ಕೊಟ್ಟ ಏಕೈಕ ಸಾಧಕಿ

Mumbai News Desk

ಸಮಾಜ ಸೇವಕ ,ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ. ಅಧ್ಯಕ್ಷ ಹರೀಶ್  ಮೂಲ್ಯ ದಂಪತಿಯ ವೈವಾಹಿಕ ಜೀವನದ ಬೆಳ್ಳಿ ಹಬ್ಬ ಸಂಭ್ರಮಾಚರಣೆ 

Mumbai News Desk

ಯಕ್ಷಗಾನ ರಂಗದ ಅಮರ ಗಂಧರ್ವ ಕಾಳಿಂಗ ನಾವಡರ ಪುಣ್ಯಸ್ಮರಣೆ: ಕರಾವಳಿಯ ಕೋಗಿಲೆಗೆ ನುಡಿನಮನ

Mumbai News Desk

ಹೈದರಾಬಾದ್ ಹೊರವಲಯದಲ್ಲಿ ರೈಲ್ವೆ ಹಳಿ ಮೇಲೆ ಕಿಯಾ ಸೋನೆಟ್ ಕಾರನ್ನು 8 ಕಿಲೋಮೀಟರ್ ಓಡಿಸಿದ ಮಹಿಳೆ, ರೈಲು ಸಂಚಾರ ಸ್ಥಗಿತ.

Mumbai News Desk

ದ್ವಾರಕಾಮಯಿ ಮಠ ಶ್ರೀ ಕ್ಷೇತ್ರ ಶಂಕರಪುರದ ವತಿಯಿಂದ ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರಿಗೆ ನುಡಿ -ನಮನ

Mumbai News Desk