July 22, 2026
Mumbai News Kannada
ಸುದ್ದಿ

ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ : ಹೊಸ ರಥ ನಿರ್ಮಾಣ, ಅಷ್ಟಮಂಗಳ ಪ್ರಶ್ನೆಗೆ ಶೀಘ್ರ ನಿರ್ಧಾರ







ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ (ಏ. 19)ರಂದು ವರ್ಷವಧಿ ಉತ್ಸವದಂದು ಮಹಾರಥೋತ್ಸವದ ಸಂದರ್ಭದಲ್ಲಿ ರಥದ
ಮೇಲ್ಭಾಗ ಕುಸಿದು ಬಿದ್ದಿದ್ದು ಈ ಬಗ್ಗೆ ಶೀಘ್ರದಲ್ಲಿ ಒಂಬತ್ತು ಮಾಗಣೆಯ ಸಭೆ ಕರಿದು ಮುಂದಿನ ನಿರ್ಣಯ ತೆಗೆದುಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ.
ರಥದ ಮೂಲ ಸ್ವರೂಪದಲ್ಲಿ ಹೊಸ ರಥ ನಿರ್ಮಾಣಕ್ಕೆ ಚಿಂತನೆ ನಡೆಯುತ್ತಿದ್ದು, ಇದಕ್ಕೆ 2 ವರ್ಷ ತಗಲಬಹುದು.
ಹಳೆಯ ರಥ ದುರಸ್ತಿಗೋಳಿಸಲು 30 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರಸರು ಮುಂಬಯಿ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಸುಮಾರು 400 ವರ್ಷ ಹಳೆಯ ಬ್ರಹ್ಮರಥವನ್ನು, ಹಿಂದೆ ಹಲವು ಬಾರಿ ನವೀಕರಣಗೊಳಿಸಲಾಗಿದ್ದು, ಕಳೆದ ರಥೋತ್ಸವ ಸಂಧರ್ಭ ಮುಂಭಾಗದ ಎಡ ಚಕ್ರ ಹೂತು ಹೋಗಿತ್ತು, ಈ ಬಾರಿಯೂ ಅದೇ ಚಕ್ರದ ಒಳಭಾಗದ ಅಕ್ಸಿಲ್ ತುಂಡಾಗಿ ರಥದ ಮೇಲ್ಭಾಗ ಮುರಿದು ಬೀಳಲು ಕಾರಣವಾಯಿತು.
ರಥ ಮುರಿದ ಘಟನೆ ಬಗ್ಗೆ ಶೀಘ್ರದಲ್ಲಿ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ 32 ಗ್ರಾಮಗಳ ಭಕ್ತರ ಸಭೆ ನಡೆಸಿ, ಅಷ್ಟಮಂಗಳ ಪ್ರಶ್ನೆ ಇಡಲು ನಿರ್ಧಾರ ಮಾಡಲಾಗಿದೆ ಎಂದು ದುಗ್ಗಣ್ಣ ಸಾವಂತರಸರು ತಿಳಿಸಿದ್ದಾರೆ.



Related posts

ದೆಹಲಿ ಹೋಟೆಲ್ ಅಗ್ನಿ ದುರಂತ: 21 ಜನ ದುರ್ಮರಣ

Mumbai News Desk

ಮಹಾಕುಂಭ ಮೇಳಕ್ಕೆ ಹರಿದುಬಂದ ಭಕ್ತ ಸಾಗರ: ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ; ಹಲವರ ಸಾವು ಶಂಕೆ, ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ

Mumbai News Desk

ಬೊಯಿಸರ್ ಸೋಮೇಶ್ವರ ಮಂದಿರ :17ನೇ ವರ್ಧಂತ್ಯುತ್ಸವ ಸಂಪನ್ನ  

Mumbai News Desk

2024 ಸಾಲಿನ 12ನೇ ತರಗತಿಯ ಫಲಿತಾಂಶ – ಲಕ್ಷ ಎಸ್ ಶೆಟ್ಟಿಗೆ  85.17 ಅಂಕ

Mumbai News Desk

ಕರ್ನಾಟಕ ಸಂಘ ಪನ್ವೆಲ್ ರಾಜ್ಯೋತ್ಸವ ದಿನಾಚರಣೆ .

Mumbai News Desk

ಜುಲೈ 9 : ಗಣೇಶಪುರಿಯಲ್ಲಿ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿಗಳ ಮೂರ್ತಿ ಪುನರ್ ಪ್ರತಿಷ್ಠಾಪನೋತ್ಸವ: ಭಕ್ತರಿಗೆ ಅಪೂರ್ವ ದರ್ಶನದ ಸೌಭಾಗ್ಯ

Mumbai News Desk