30 C
Mumbai
April 24, 2026
Mumbai News Kannada
ಪ್ರಕಟಣೆ

ಗೌಡರ ಉನ್ನತೀಕರಣ ಸಂಸ್ಥೆ ಮಹಾರಾಷ್ಟ್ರ : ಆಗಸ್ಟ್ 15ರಂದು 9ನೇ ವಾರ್ಷಿಕೋತ್ಸವ





ಗೌಡರ ಉನ್ನತೀಕರಣ ಸಂಸ್ಥೆ ದಿನಾಂಕ 20/01/2016 ರಂದು ಮೋಹನ್ ಕುಮಾರ್ ಜೆ ಗೌಡರ ನೇತೃತ್ವದಲ್ಲಿ ಸ್ಥಾಪನೆಗೊಂಡಿತು. ಸರಿಸುಮಾರು ಎರಡೂ ಸಾವಿರಕ್ಕೂ ಹೆಚ್ಚು ಸದಸತ್ವವನ್ನು ಹೊಂದಿರುವ ಗೌಡರ ಉನ್ನತೀಕರಣ ಸಂಘವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ, ಹಾಗೂ ಬಡ ಕಾರ್ಮಿಕ ಹಾಗೂ ಸಣ್ಣ ಉದ್ಯಮಿ ವರ್ಗಕ್ಕೂ ಸಹಕರಿಸುತ್ತಾ ಸಾಮಾಜಿಕ ಕಾರ್ಯಕ್ರಮಗಳಿಂದ ತನ್ನ ಅಸ್ಮಿತೆಯನ್ನು ರೂಪಿಸಿಕೊಂಡಿದೆ.
ಇದೀಗ ಇದೇ ಬರುವ ಶುಕ್ರವಾರ, ಆಗಸ್ಟ್.15 ರಂದು ತನ್ನ 9ನೇ ವಾರ್ಷಿಕೋತ್ಸವವನ್ನು ಸಂಭ್ರಮಿಸಲಿದೆ.

ಸಿಡ್ಕೋ ಎಕ್ಷೀಬಿಷನ್ ಸೆಂಟರ್ ವಾಶಿ ನವಿ ಮುಂಬಯಿ (ವಾಶಿ ರೈಲ್ವೇ ಸ್ಟೇಷನ್ ಹತ್ತಿರ) ಇಲ್ಲಿ ವಿಜೃಂಭರಣೆಯಿಂದ ವಾರ್ಷಿಕೋತ್ಸವದ ಆಚರಿಸಲಿದೆ.

ಈ ಭವ್ಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಹಾರಾಷ್ಟ್ರ ಸರ್ಕಾರದ ಅರಣ್ಯ ಖಾತೆ ಸಚಿವ ಶ್ರೀ ಗಣೇಶ್ ನಾಯ್ಕ್ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ ಡಾ. ಕೆ.ಸಿ ನಾರಾಯಣ ಗೌಡ ಹಾಗೂ ಶ್ರಾವಣ ಬೆಳಗೋಳ ಕ್ಷೇತ್ರದ ಶಾಸಕ ಡಾ. ಸಿ.ಎನ್ ಬಾಲಕೃಷ್ಣ ಆಗಮಿಸಲಿದ್ದಾರೆ.

ಸಂಘದ ಅಧ್ಯಕ್ಷ ಶ್ರೀ ಮೋಹನ್ ಕುಮಾರ್ ಗೌಡ ಇವರ ಅಧ್ಯಕ್ಷತೆಯಲ್ಲಿ ಜರಗುವ ಸಭಾ ಕಾರ್ಯಕ್ರಮದಲ್ಲ್ಲಿ
ಗಣ್ಯ ಅಥಿತಿಗಳಾಗಿ ಶ್ರೀ ಕೆ.ಎಂ ರಾಮು ಸ್ವಾಮೀಜಿ (ಗುರು ಸ್ವಾಮಿಗಳು, ಶ್ರೀ ಶನೀಶ್ವರ ದೇವಲಯ ಚೆಂಬೂರು, ರವಿ ಎಸ್.ದೇವಾಡಿಗ ( ಅಧ್ಯಕ್ಷರು, ದೇವಡಿಗ ಸಂಘ ಮುಂಬಯಿ), ಬಾಲಕೃಷ್ಣ ಬಿ.ಶೆಟ್ಟಿ ಮಾರಳಿ ಕೆಳಮನೆ (ಮಾಲಕರು, ಹೋಟೆಲ್ ರಿತ್ವಿಕ್ ರೆಸೆಡೆನ್ಸಿ ಮತ್ತು ಸಾಮಜಿಕ ಕಾರ್ಯಕರ್ತರು) ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಮಹಾರಾಷ್ಟ್ರ ಘಟಕ ಇದರ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಶಿವ ಮೂಡಿಗೆರೆ (ಉಪಾಧ್ಯಕ್ಷರು ಚಿತ್ರಪಟ್ ಕಮಘರ್ ಅಗಾಡಿ ಭಾರತೀಯ ಜನತಾ ಪಕ್ಷ ಮಹಾರಾಷ್ಟ್ರ ಪ್ರದೇಶ) ಹಾಗೂ ಶ್ರೀ ಬಾಲಾಜಿ ಟ್ರಾನ್ಸ್ ಪೋರ್ಟ್ ನ ನಿರ್ದೇಶಕ ಅಭಿಜಿತ್ ಆರ್. ಗೌಡರು ಆಗಮಿಸಲಿದ್ದಾರೆ.

ಈ ಕಾರ್ಯಕ್ರಮದ ನಿಮಿತ್ತ ಮಧ್ಯಾಹ್ನ 1. 00 ಗಂಟೆಯಿಂದ 2.00 ಗಂಟೆ ವರೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ (ಶನಿಮಂದಿರ ಕಾಂಜೂರ್ ಮಾರ್ಗ) ಇವರ ಮುಂದಾಳುತ್ವದಲ್ಲಿ
ವರಮಹಾಲಕ್ಷ್ಮಿ ಪೂಜೆ ನಡೆಸಲಾಗುತ್ತಿದೆ.
ಹಾಗೂ 2. 00 ಗಂಟೆ ಯಿಂದ ಮಹಿಳಾ ಮಂಡಳಿಯಿಂದ ಅರಿಸಿನ ಕುಂಕುಮ ಕಾರ್ಯಕ್ರಮ ನೆಡೆಯಲಿದೆ. ತದನಂತರ 3. 00 ಗಂಟೆಯಿಂದ 5.00 ಗಂಟೆಯ ವರೆಗೆ ಸಂಘದ ಮಹಿಳಾ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆಡೆಯಲಿದೆ. ಸಂಜೆ 5.00 ಗಂಟೆರಿಂದ 6:30ರ ವರೆಗೆ ಸನ್ಮಾನ ಸಮಾರಂಭ ಹಾಗೂ ಸಭಾ ಕಾರ್ಯಕ್ರಮ ನೆರೆವೇರಲಿದೆ. ನಂತರ 6:30ರಿಂದ 8.00 ಗಂಟೆ ವರೆಗೆ ಸತೀಶ್ ಎರ್ಮಾಳ್ ರಚಿಸಿ ಅನಿಲ್ ಕುಮಾರ್ ಹೆಗ್ಗಡೆ ಅನುವಾದಿಸಿ ಬಾಬಾ ಪ್ರಸಾದ್ ಅರಸ ನಿರ್ದೇಶಿತ ಕನ್ನಡ ಸಾಮಾಜಿಕ ನಾಟಕ
“ಯಾರಿಗೂ ಹೇಳ್ಬೇಡಿ” ಪ್ರದರ್ಶನಗೊಳ್ಳಲಿದೆ. ತದನಂತರ ರಾತ್ರಿ 8. 00 ಗಂಟೆಯಿಂದ ಪ್ರೀತಿ ಭೋಜನವನ್ನು ಏರ್ಪಡಿಸಲಾಗಿದೆ.

ಈ ಸಂಪೂರ್ಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ತಾವೆಲ್ಲರೂ ಸಹ ಕುಟುಂಬ, ಬಂಧುಮಿತ್ರರೊಡನೆ ಆಗಮಿಸಿ ಕಾರ್ಯಕ್ರಮವನ್ನು ಚೆಂದಗಾಣಿಸಿ ಕೊಡುವುದರ ಮೂಲಕ ಶ್ರೀ ವರಮಹಾಲಕ್ಷ್ಮಿ ದೇವಿಯ ಪ್ರಸಾದವನ್ನು ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಮುಂಬಯಿ, ಥಾಣೆ, ನವಿ ಮುಂಬಯಿ ಜಿಲ್ಲೆಯ ಕನ್ನಡಿಗರೆಲ್ಲರಿಗೂ ಸಾದಾರದಿಂದ ಗೌಡರ ಉನ್ನತೀಕರಣ ಸಂಸ್ಥೇ (ರಿ.) ಮಹಾರಾಷ್ಟ್ರ ಇದರ ತಮ್ಮಣ್ಣ ಕಾಳೇಗೌಡ (ಉಪಾಧ್ಯಕ್ಷರು), ಜಯರಾಮ ಮಹಾಲಿಂಗೇಗೌಡ (ಉಪಾಧ್ಯಕ್ಷರು(, ರವೀಂದ್ರ ನಂಜಪ್ಪ ಗೌಡ (ಪ್ರ.ಕಾರ್ಯದರ್ಶಿ) ತೇಜಕುಮಾರ್ ಎಲ್ ಗೌಡ (ಕೋಶಧಿಕಾರಿ), ಉಮೇಶ್ ಪುಟ್ಟಸ್ವಾಮಿ ಗೌಡ (ಜೊತೆ ಕಾರ್ಯದರ್ಶಿ), ರವಿ ಜೆ. ಗೌಡ (ಜೊತೆ ಕೋಶಧಿಕಾರಿ) ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ. ಸಾಂಸ್ಕೃತಿಕ ಮತ್ತು ಆರೋಗ್ಯ ವಿಭಾಗ, ಶೈಕ್ಷಣಿಕ ಹಾಗೂ ಕ್ರೀಡಾ ವಿಭಾಗ ಸೇರಿದಂತೆ ಸಲಹಾ ಸಮಿತಿ ಹಾಗೂ ಸರ್ವ ಸದಸ್ಯರು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



Related posts

ಶ್ರೀ ಜಗದಂಬಾ ಮಂದಿರ ಡೊಂಬಿವಲಿ, ಫೆ. 26ಕ್ಕೆ ಮಹಾಶಿವರಾತ್ರಿ ಉತ್ಸವ

Mumbai News Desk

ನ. 8-9, ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ ಡೊಂಬಿವಲಿ66ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಜಗಜ್ಯೋತಿ ಕಲಾವೃಂದ ಮುಂಬಯಿ : ಫೆ. 9ರಂದು 38ನೇ ವಾರ್ಷಿಕೋತ್ಸವ, ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ

Mumbai News Desk

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ, ಮಾ  28 :ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವ .

Mumbai News Desk

ದೋಲ್ಗೊಟ್ಟು, ಕೆಲ್ಲಪುತ್ತಿಗೆ, ಶ್ರೀ ಧರ್ಮಶಾಸ್ತ ಭಕ್ತವೃಂದ,ಜ.11 ರಂದು 23ನೇ ಅಯ್ಯಪ್ಪ ಮಹಾಪೂಜೆ ಅನ್ನಸಂತರ್ಪಣೆ,

Mumbai News Desk

ಕೊಡ್ಯಡ್ಕ ದೇವಸ್ಥಾನಕ್ಕೆ ಹೋದಾಗ ಆದ ಪ್ರೇರಣೆಯಂತೆ ಬೆಳಗಾವಿಯಲ್ಲಿ ನೆಲೆ ನಿಂತ ಅನ್ನಪೂರ್ಣೇಶ್ವರಿ ; ದೇವಿಯ ವಾರ್ಷಿಕ ಮಹೋತ್ಸವ ಶುಕ್ರವಾರದಿಂದ ಆರಂಭ

Mumbai News Desk