30.5 C
Mumbai
June 8, 2026
Mumbai News Kannada
ಸುದ್ದಿ

ಅಂಕ್ಲೇಶ್ವರದಲ್ಲಿ ಭಾರತ್ ಬ್ಯಾಂಕ್‌ನ 47ನೇ ಸಂಸ್ಥಾಪನಾ ದಿನಾಚರಣೆ: ಯಶಸ್ಸಿನ ಮೈಲಿಗಲ್ಲು





ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ಭಾರತೀಯ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ಜನಪ್ರಿಯ ಭಾರತ್ ಬ್ಯಾಂಕ್ (ಮುಂಬೈ) ಲಿಮಿಟೆಡ್, ಗುಜರಾತ್ ರಾಜ್ಯದ ಅಂಕ್ಲೇಶ್ವರ ಶಾಖೆಯಲ್ಲಿ ಬ್ಯಾಂಕ್ ತನ್ನ 47ನೇ ಸಂಸ್ಥಾಪನಾ ದಿನಾಚರಣೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿತು. ಈ ಸಂಭ್ರಮವು ಬ್ಯಾಂಕ್‌ನ ಗ್ರಾಹಕರು, ಹಿತೈಷಿಗಳು ಮತ್ತು ಉದ್ಯಮಿಗಳ ಸಮ್ಮುಖದಲ್ಲಿ ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಯಶಸ್ವಿಯಾಗಿ ನೆರವೇರಿತು.
​ಈ ಮಹತ್ವದ ಕಾರ್ಯಕ್ರಮಕ್ಕೆ ಹಲವು ಗಣ್ಯರು ಸಾಕ್ಷಿಯಾದರು. ಪ್ರಮುಖವಾಗಿ ಬಿಲ್ಲವರ ಎಸೋಸಿಯೇಶನ್ ಗುಜರಾತ್ ನ ಅಧ್ಯಕ್ಷ ಹಾಗೂ ತುಳು ಕೂಟ ಅಂಕ್ಲೇಶ್ವರದ ಉಪಾಧ್ಯಕ್ಷ ಹರೀಶ್ ಪೂಜಾರಿ, ಬ್ಯಾಂಕ್‌ನ ಗ್ರಾಹಕರು ಹಾಗೂ ಉದ್ಯಮಿಗಳಾದ ರಂಜಿತ್ ಶೆಟ್ಟಿ (ಮ್ಯಾನೇಜರ್, ಪ್ರತೀನ್ ಹೋಟೆಲ್, ಅಂಕ್ಲೇಶ್ವರ), ಚಿರಾಗ್ ಪಟೇಲ್ (ಮ್ಯಾನೇಜರ್, ಪ್ರೈಮ್ ಕೋ ಆಪರೇಟಿವ್ ಬ್ಯಾಂಕ್, ಭರೂಚ್), ಮತ್ತು ಅನಿಲ್ ಜೋಶಿ (ಹೈ ನೆಟ್‌ವರ್ಥ್ ಕಸ್ಟಮರ್) ತಮ್ಮ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ಮೆರಗು ತಂದರು. ಇವರೊಂದಿಗೆ ಉದ್ಯಮಿಗಳಾದ ಸಜೀದ್ ರವತ್, ದೀಪಕ್ ಶೆಟ್ಟಿ (ಜಲರಾಮ್ ಇಂಜಿನಿಯರಿಂಗ್ ಮಾಲಕರು), ಚೇತನ ಶೆಟ್ಟಿ (ಯಶಶ್ವಿ ಇಂಜಿನಿಯರಿಂಗ್ ಮಾಲಕರು) ಮತ್ತು ಬ್ಯಾಂಕ್‌ನ ಹಿರಿಯ ಠೇವಣಿದಾರರು ಹಾಗೂ ಗ್ರಾಹಕರಾದ ವಸಂತಿ ಆರ್. ಕೋಟ್ಯಾನ್ ಮತ್ತು ಛಾಯಾ ಉಮೇಶ್ ಗಜ್ಜಾರ್ ಕಾರ್ಯಕ್ರಮದ ಭಾಗವಾಗಿದ್ದರು. ಜೊತೆಗೆ ಉಮೇಶ್ ಗಜ್ಜಾರ್, ಕಮಲಾಕರ್ ರಾವ್, ನಿತೀಶ್ ಬತೀಜ ಮತ್ತು ಮಯೂರ್ ರಾವ್ ಸಹ ಉಪಸ್ಥಿತರಿದ್ದರು.


​ಈ ಮಹತ್ವದ ಕ್ಷಣಕ್ಕೆ ಬೆಂಬಲವಾಗಿ ನಿಂತ ಶುಭಚಿಂತಕರಲ್ಲಿ ಪ್ರಮುಖರಾದ ಶಂಕರ್ ಶೆಟ್ಟಿ (ಅಧ್ಯಕ್ಷರು, ತುಳು ಸಂಘ, ಅಂಕ್ಲೇಶ್ವರ), ಹರೀಶ್ ಶೆಟ್ಟಿ (ಪಾಲುದಾರರು, ಶ್ರೀದೇವಿ ಹಾಸ್ಪಿಟಾಲಿಟಿ), ಮನಸ್ಮಿತಾ ಶೆಟ್ಟಿ, ಸುರೇಶ್ ಶೆಟ್ಟಿ (ಮಾಲಕರು, ದುರ್ಗಾ ರೋಡ್ ಲೈನ್ಸ್) ಮತ್ತು ಪ್ರತೀನ್ ಹೋಟೆಲ್‌ನ ಪಾಲುದಾರರಾದ ಪ್ರತೀನ್ ಶೆಟ್ಟಿ ಹಾಗೂ ಮಲ್ಲಿಕಾ ಪುಷ್ಪನಾಥ್ ಶೆಟ್ಟಿ ಪಾಲ್ಗೊಂಡಿದ್ದರು. ಇವರೊಂದಿಗೆ ಹೋಟೆಲ್ ರುಚಿ, ಅಂಕ್ಲೇಶ್ವರದ ಮಾಲಕರಾದ ಯೋಗೇಶ್ ರೈ ಅವರು ಉಪಸ್ಥಿತರಿದ್ದು, ಬ್ಯಾಂಕ್‌ನ ಮುಂದಿನ ಯಶಸ್ಸಿಗೆ ಶುಭ ಹಾರೈಸಿದರು.
​ಕಾರ್ಯಕ್ರಮದ ಆರಂಭದಲ್ಲಿ, ಅಂಕ್ಲೇಶ್ವರ ಶಾಖಾ ಮುಖ್ಯಸ್ಥರಾದ ಆಶೀಷ್ ಕೋಟ್ಯಾನ್ ಅವರು ಎಲ್ಲ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬ್ಯಾಂಕ್‌ನ ಬೆಳವಣಿಗೆ ಮತ್ತು ಗ್ರಾಹಕರ ಸಹಭಾಗಿತ್ವದ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಬ್ಯಾಂಕ್‌ನ ಸಿಬ್ಬಂದಿಗಳಾದ ಚೇತನ್ ಸುವರ್ಣ, ದರ್ಶನ್ ಪಟೇಲ್, ಪ್ರಹ್ಲಾದ್ ಪೂಜಾರಿ, ಉಮೇಶ್ ಕೋಟ್ಯಾನ್ ಮತ್ತು ಭದ್ರತಾ ಸಿಬ್ಬಂದಿ ಮಕ್ಸೂದ್ ಅವರ ಸಹಕಾರ ಶ್ಲಾಘನೀಯವಾಗಿತ್ತು.
​ಒಟ್ಟಾರೆಯಾಗಿ, ಭಾರತ್ ಬ್ಯಾಂಕ್‌ನ 47ನೇ ಸಂಸ್ಥಾಪನಾ ದಿನಾಚರಣೆಯು ಕೇವಲ ಒಂದು ಆಚರಣೆಯಾಗದೆ, ಅದು ಬ್ಯಾಂಕ್‌ ಮತ್ತು ಅದರ ಗ್ರಾಹಕರ ನಡುವಿನ ಗಟ್ಟಿ ಸಂಬಂಧ, ಪರಸ್ಪರ ನಂಬಿಕೆ ಮತ್ತು ಸಮೃದ್ಧಿಯ ಸಂಕೇತವಾಗಿ ಮೂಡಿಬಂತು. ಈ ಸಂಭ್ರಮದ ಕ್ಷಣಗಳು ಬ್ಯಾಂಕ್‌ನ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದಂತಿದೆ.



Related posts

ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರ ಮಾತೃಶ್ರೀ ಲೀಲಾವತಿ ಶೆಟ್ಟಿ ನಿಧನ,

Mumbai News Desk

ವಸಯಿ ತಾಲೂಕ ಹೋಟೆಲ್ ಎಸೋಸಿಯೇಶನಿಂದ  ಪ್ರತಿಭಟನೆ

Mumbai News Desk

ಕರ್ನಾಟಕ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಹರಿಪ್ರಸಾದ್ ನಂದಳಿಕೆ ಅವರಿಗೆ   ಪ್ರಶಸ್ತಿ.

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ, ಮುಂಡ್ಕೂರು ವತಿಯಿಂದ ಏರ್ ಕಂಡಿಷನರ್ ಸ್ಫೋಟಗೊಂಡ ದುರ್ಘಟನೆಯಲ್ಲಿ ಮೃತರಾದ ತಾರಾನಾಥ ವಿ ಬಂಜನ್ ಅವರಿಗೆ ಶ್ರದ್ಧಾಂಜಲಿ.

Mumbai News Desk

ಬಟ್ಟೆ ಕುದ್ರು ದುರ್ಗಿ ಶ್ರೀಯಾನ್ ನಿಧನ.

Mumbai News Desk

ಅಂತಾರಾಷ್ಟ್ರೀಯ ಮಾನವಾಧಿಕಾರ ಫೆಡರೇಶನ್ ಮಹಾರಾಷ್ಟ್ರ : ಪಾಲ್ಘರ್ ಜಿಲ್ಲಾ ಉಪಾಧ್ಯಕ್ಷರಾಗಿ ಪತ್ರಕರ್ತ ಯೋಗೇಶ್ ಪುತ್ರನ್ ನಿಯುಕ್ತಿ.

Mumbai News Desk