32 C
Mumbai
April 23, 2026
Mumbai News Kannada
ಪ್ರಕಟಣೆ

ಮೊಗವೀರ ಕನ್ನಡ ಮಾಸಿಕ, ಮುಂಬಯಿ – ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಸಣ್ಣ ಕಥಾ ಸ್ಪರ್ಧೆ





ಮುಂಬೈಯ ಹಿರಿಯ ಸಾಮಾಜಿಕ ಸಂಘಟನೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖವಾಣಿ ಮೊಗವೀರ ಮಾಸಿಕವು 86ನೇ ವರ್ಷಕ್ಕೆ ಪಾದರ್ಪಣೆ ಮಾಡಿದ್ದು, ಈ ಸುಸಂದರ್ಭದಲ್ಲಿ ಭಾರತದಾದ್ಯಂತ ಇರುವ ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡ ಸಣ್ಣ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ.

ಬಹುಮಾನಗಳು:

  • ಪ್ರಥಮ ಬಹುಮಾನ: ರೂ. 10,000/-
  • ದ್ವಿತೀಯ ಬಹುಮಾನ: ರೂ. 7,000/-
  • ತೃತೀಯ ಬಹುಮಾನ: ರೂ. 5,000/-
  • ಹತ್ತು ಪ್ರೋತ್ಸಾಹಕ ಬಹುಮಾನಗಳನ್ನು ಸಹ ನೀಡಲಾಗುವುದು ಎಂದು ಪತ್ರಿಕೆಯ ಸಂಪಾದಕರಾದ ಅಶೋಕ್ ಸುವರ್ಣ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಭಾಗವಹಿಸಲು ನಿಯಮಗಳು:
1) ಕಥೆಗಳು ಸ್ವಂತ ರಚನೆ ಆಗಿರಬೇಕು, ಅನುವಾದಿತ ಕಥೆಗಳಿಗೆ ಅವಕಾಶವಿಲ್ಲ, ಒಬ್ಬರು ಒಂದೇ ಅಪ್ರಕಟಿತ ಕಥೆ ಕಳಿಸಬೇಕು.
2) ಉತ್ತಮ ಕಥಾ ವಸ್ತುವಿರಲಿ, ಭಾಷೆ, ಶೈಲಿ, ತಂತ್ರ ಇವುಗಳು ಶ್ರೇಷ್ಠ ಮಟ್ಟದಲ್ಲಿರಲಿ.
3) ಸಾಮಾಜಿಕ, ಆರ್ಥಿಕ, ರಾಜಕೀಯ, ಪತ್ತೆದಾರಿ, ಥ್ರಿಲ್ಲರ್,ಹಾರರ್, ಸೈನ್ಸ್ ಫಿಕ್ಷನ್ ಎಲ್ಲ ರೀತಿಯ ಸಭ್ಯ ಸಾಹಿತ್ಯಕ್ಕೂ ಅವಕಾಶವಿದೆ.
4) ಸ್ಪಷ್ಟವಾದ ಕೈ ಬರಹ, ಬೆರಳಚ್ಚು, ಕಂಪ್ಯೂಟರ್ ಮುದ್ರಿತ ಪ್ರತಿಗಳನ್ನು ಕಳಿಸಬಹುದು. ಇ-ಮೇಲ್ ಮೂಲಕ ನುಡಿ ತಂತ್ರಾಂಶದಲ್ಲಿ ಕಂಪೋಸ್ ಮಾಡಿರುವ ಫೈಲ್ಗಳನ್ನು ಕಳಿಸಬಹುದು.
5) ಹಸ್ತ ಪ್ರತಿ, ಮುದ್ರಿತ ಪ್ರತಿ, ಸಾಫ್ಟ್ ಕಾಪಿ ಜೊತೆಗೆ ಪ್ರತ್ಯೇಕ ಕಾಗದದಲ್ಲಿ ವಿಳಾಸ, ಮೊಬೈಲ್ ನಂಬರ್ ಬರೆದು ಫೋಟೋ ಅಂಟಿಸಿ ಪ್ರತಿಯೋಡನೆ ಲಗತಿಕರಿಸಬೇಕು. ಕಥೆ, ಪುಟಗಳಲ್ಲಿ ಲೇಖಕರ ಹೆಸರು ಇರಬಾರದು.
6) ಪಾಯಿಂಟ್ ಫಾಂಟ್ ಸೈಜಿನ ಮುದ್ರಿತ ಪ್ರತಿಯಲ್ಲಿ ಕನಿಷ್ಠ 8 ಪುಟಗಳಷ್ಟು ಹಾಗೂ ಗರಿಷ್ಠ 10 ಪುಟಗಳಷ್ಟು ಮೀರದಂತಿರಲಿ, ಮಿನಿ ಕಥೆಗಳು ಬೇಡ.
7) ವಿಜೇತರಿಗೆ ಎನ್‌ಇಎಫ್‌ಟಿ(NEFT) ಮೂಲಕ ಬಹುಮಾನ ಕಳಿಸಲಾಗುವುದು.
8) ಬಹುಮಾನಗಳಿಸಿದ ಹಾಗೂ ಮೆಚ್ಚುಗೆ ಪಡೆದ ಕೃತಿಗಳನ್ನು ಮೊಗವೀರದ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು.ಪ್ರಕಟಿತ ಕಥೆಗಳಿಗೆ ಮೊಗವೀರ ನಿಗದಿ ಪಡಿಸಿದ ಗೌರವ ಧನವನ್ನು ಕಳುಹಿಸಲಾಗುವುದು. 9) ಕ್ರತಿಗಳ ಪ್ರತಿಗಳನ್ನು ಹಿಂದೆ ಕಳಿಸಲಾಗುವುದಿಲ್ಲ
10) ತೀರ್ಪುಗಾರರ ನಿರ್ಣಯವೇ ಅಂತಿಮ ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ.
ಬರಹಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 30-10-25.
ಕೃತಿಗಳನ್ನು ಕಳುಹಿಸಬೇಕಾದ ವಿಳಾಸ

  • The Editor, Mogavera Kannada Monthly Magazine, Mogaveera Bhavana, MVM Educational Campus Marg, Off: Veera Desai Road, Andheri West, Mumbai – 400 058(Email :mvmmogaveeramagazine1939@gmail.com


Related posts

ಫೆ.12 ರಿಂದ 16 ವರಗೆ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಕುಂಭ ಮಹೋತ್ಸವ,

Mumbai News Desk

ನಾಳೆ (ಜ. 26)ಗೊರೇಗಾoವ್ ಜಯಲೀಲಾ ಬ್ಯಾಂಕ್ಟ್ ಟ್ ಹಾಲ್ ನಲ್ಲಿ,ಜಯ ಸಿ ಸುವರ್ಣ ಅಭಿಮಾನಿಗಳು, ಮಹಿಳಾ ಅಭಿಮಾನಿಗಳು ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ಕನ್ನಡಿಗರ ಸ್ನೇಹ ಬಳಗ ಸಂಸ್ಥಾ (R) ವತಿಯಿಂದ ಫೆ. 26 ರಂದು ಶಿವ ಭಕ್ತಾದಿಗಳಿಗೆ ಹಣ್ಣು ಹಂಪಲು ವಿತರಣೆ.

Mumbai News Desk

ಜ. 14 ರಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

ಜ.17ರಿಂದ 19 ರ ತನಕ ಭುವಾಜಿ ರವೀಂದ್ರ ಶಾಂತಿ ಹಾಗೂ ತಂಡದವರಿಂದ 11ನೇ ವರ್ಷದ ತಿರುಪತಿ ಯಾತ್ರೆ: ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಸಹಭಾಗಿ

Mumbai News Desk

ದೊಡ್ಡಣ್ಣ ಗುಡ್ಡೆಯ  ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಮೇ 9 ರಿಂದ ಮೇ 13 ಪ್ರತಿಷ್ಠಾ ವರ್ಧಂತಿ ಮಹೋತ್ಸವ

Mumbai News Desk