September 6, 2026
Mumbai News Kannada
ಪ್ರಕಟಣೆ

ನಾಳೆ (ಜ. 26)ಗೊರೇಗಾoವ್ ಜಯಲೀಲಾ ಬ್ಯಾಂಕ್ಟ್ ಟ್ ಹಾಲ್ ನಲ್ಲಿ,ಜಯ ಸಿ ಸುವರ್ಣ ಅಭಿಮಾನಿಗಳು, ಮಹಿಳಾ ಅಭಿಮಾನಿಗಳು ಅರಸಿನ ಕುಂಕುಮ ಕಾರ್ಯಕ್ರಮ





ಜಯ ಸಿ ಸುವರ್ಣ ಅಭಿಮಾನಿಗಳು ಮಹಿಳಾ ಅಭಿಮಾನಿಗಳು, ಮುಂಬಯಿ ಬಿಲ್ಲವರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ), ಮುಂಬಯಿ, ಇವರ ಆಯೋಜನೆಯಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ ಜ.26ರಂದು ಸೋಮವಾರ ಅಪರಾನ್ಹ ಗಂಟೆ 3 ರಿಂದ ಗೊರೇಗಾoವ್ ಜಯಲೀಲಾ ಬ್ಯಾಂಕ್ಟ್ ಟ್ ಹಾಲ್ ನಲ್ಲಿ ನಡೆಯಲಿದೆ,

ಇದೇ ಸಂಧರ್ಭದಲ್ಲಿ ಮುಂಬಯಿಯ ವಿವಿಧ ಉಪನಗರಗಳ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಯವರಿಂದ ಕುಣಿತ ಭಜನೆ ನಡೆಯಲಿದೆ.
ಸಂಜೆ 5:30 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು
ಜಯ ಸಿ ಸುವರ್ಣ ಮಹಿಳಾ ಅಭಿಮಾನಿಗಳ ಕಾರ್ಯಧ್ಯಕ್ಷೆ ನಿಶಿತಾ ಸೂರ್ಯಕಾಂತ್ ಸುವರ್ಣ ವಹಿಸಲಿದ್ದಾರೆ.
ಅತಿಥಿಗಳಾಗಿ ನಗರ ಸೇವಕಿ ಮೀನಾಕ್ಷಿ ಶಿಂದೆ , ಪುಷ್ಪ ಶ್ರೀನಿವಾಸ್ ಕೋಟ್ಯಾನ್, ಗೌರವ ಅತಿಥಿಗಳಾಗಿ ನಗರ ಸೇವಕಿ ಜಗದೀಶ್ವರಿ ಜಗದೀಶ್ ಅಮೀನ್, ನಗರ ಸೇವಕಿ ನಿಶಾ ಸುರೇಶ್ ಬಂಗೇರ, ನಗರಸೇವಕ ಹರೀಶ್ ಶಾಸ್ತ್ರಿ, ಸಮಾಜ ಸೇವಕಿರಾದ ತನ್ವಿ ದಿನೇಶ್ ರಾವ್, ಹಿಮಾಲಿನಿ ಸದಾಶಿವ ಸುವರ್ಣ, ಹರಿನಾಕ್ಷಿ ಮೋಹನ್, ಇವರು ಪಾಲ್ಗೊಳ್ಳಲಿದ್ದಾರೆ,
ಈ ಸಂದರ್ಭದಲ್ಲಿ ಕರ್ನಾಟಕ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ಸ್ವೀಕರಿಸಿದ ರಿಕಿತ ಸಾಲಿಯಾನ್, ವೀಣಾ ಶೆಟ್ಟಿ, ಅಶ್ವಿನಿ ಕೋಟ್ಯಾನ್ ಇವರನ್ನು ಸನ್ಮಾನಿಸಲಾಗುವುದು

ಈ ಪ್ರಯುಕ್ತ ಎಲ್ಲಾ ಪರಿಸರದ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಜಯ ಸಿ ಸುವರ್ಣ ಅಭಿಮಾನಿಗಳು, ಮಹಿಳಾ ಅಭಿಮಾನಿಗಳು, ಯುವ ಅಭಿಮಾನಿಗಳು,ಮುಂಬಯಿ ಬಿಲ್ಲವರು, ಶ್ರೀ ನಾರಾಯಣ ಗುರು ಭಜನಾ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.



Related posts

ಉಳ್ಳಾಲದಲ್ಲಿ ಅದ್ದೂರಿ ಗಾಣಿಗ ಭವನ ಲೋಕಾರ್ಪಣೆ: ಮೇ 10ರಂದು ಸಮುದಾಯದ ಐತಿಹಾಸಿಕ ಕ್ಷಣ

Mumbai News Desk

ಉಡುಪಿ : ನೇಜಾರು ಶ್ರೀ ಭಗವತೀ ತೀಯಾ ಯುವ ಘಟಕದಿಂದ ಮೇ 24 ರಂದು ಭವ್ಯ ‘ಯುವ ಸಮ್ಮಿಲನ’ ಕಾರ್ಯಕ್ರಮ

Mumbai News Desk

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಕರ್ನಿರೆ ಎ 1 ರಿಂದ 3 ವರೆಗೆ    ಜಾರಂದಾಯ ದೈವದ ಕಾಲಾವಧಿ ನೇಮೋತ್ಸವ,

Mumbai News Desk

ತೋಕೂರು ಮದ್ದೇರಿ ದೈವಸ್ಥಾನ. ಮೇ 7 ರಿಂದ 9 ವರೆಗೆ ಪ್ರತಿಷ್ಠಿತೆ, ನೇಮೋತ್ಸವ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ. ಡಿ 7ರಂದು ಮುಂಬೈಯಲ್ಲಿ  ವಿಶ್ವಬಂಟರ ಸಮಾಗಮ  ಬಂಟರ  ಒಗ್ಗಟ್ಟಿಗೆ ಸಾಕ್ಷಿಯಾಗಲಿದೆ: ಐಕಳ ಹರೀಶ್ ಶೆಟ್ಟಿ

Mumbai News Desk

ವಸಾಯಿ ಕರ್ನಾಟಕ ಸಂಘ : ಜ.26 ರಂದು 38ನೇ ವಾರ್ಷಿಕ ಮಹಾಸಭೆ,

Mumbai News Desk