September 6, 2026
Mumbai News Kannada
ಮುಂಬಯಿ

ಶ್ರೀ ನಾರಾಯಣ ಗುರು ಭಜನಾ ಮಂಡಳಿ, ಕಾಂದಿವಲಿ ಬಿಲ್ಲವರ ಆಯೋಜನೆಯಲ್ಲಿ ಶನೀಶ್ವರ ಪಾರಾಯಣ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಪೂಜೆ!





ಚಿತ್ರ ವರದಿ: ದಿನೇಶ್ ಕುಲಾಲ್

ದಿನಾಂಕ: ಸೆಪ್ಟೆಂಬರ್ ೨೯, ಮುಂಬಯಿ: ದಿವಂಗತ ಜಯ ಸುವರ್ಣರ ಅಭಿಮಾನಿ ಬಳಗ ಹಾಗೂ ಮುಂಬಯಿ ಬಿಲ್ಲವರ ಸಹಕಾರದೊಂದಿಗೆ, ಶ್ರೀ ನಾರಾಯಣ ಗುರು ಭಜನಾ ಮಂಡಳಿ, ಕಾಂದಿವಲಿ ಬಿಲ್ಲವರ ಆಯೋಜನೆಯಲ್ಲಿ ಸೆಪ್ಟೆಂಬರ್ ೨೭ರಂದು ಕಾಂದಿವಲಿ ಪಶ್ಚಿಮದ ಮಹಾವೀರ ನಗರದ ಪಾಂಚೋಲಿ ಪ್ರೌಢಶಾಲೆಯ ಆವರಣದಲ್ಲಿ ಭಕ್ತಿಪೂರ್ವಕ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು. ಖಾರ್ ಪೂರ್ವದ ಶ್ರೀ ಶನೀಶ್ವರ ಮಂದಿರದ ಪ್ರಧಾನ ಅರ್ಚಕರಾದ ಯೋಗೇಶ್ ಕೆ. ಹೆಜ್ಮಾಡಿಯವರ ಮಾರ್ಗದರ್ಶನದಲ್ಲಿ ಶನೀಶ್ವರ ಸಂಪೂರ್ಣ ಗ್ರಂಥ ಪಾರಾಯಣ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ನೆರವೇರಿದವು.

​ಧಾರ್ಮಿಕ ವಿಧಿ-ವಿಧಾನಗಳ ಸಡಗರ

​ಮಧ್ಯಾಹ್ನ ಕಲಶ ಪ್ರತಿಷ್ಠಾಪನೆಯೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡವು. ಬಳಿಕ ಭಜನೆಗಳು ಮೊಳಗಿದ ನಂತರ, ಸಂಪೂರ್ಣ ಶನಿಗ್ರಂಥ ಪಾರಾಯಣ ಪ್ರಾರಂಭವಾಯಿತು. ಇಡೀ ದಿನ ಭಕ್ತಿಭಾವದ ವಾತಾವರಣ ನೆಲೆಸಿತ್ತು. ರಾತ್ರಿ ಮಹಾಮಂಗಳಾರತಿ ಹಾಗೂ ತದನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

​ಸತ್ಯದ ಹಾದಿಯೇ ವಿಜಯದ ದಾರಿ: ಸೂರ್ಯಕಾಂತ್ ಜಯ ಸುವರ್ಣ

​ಸಂಜೆ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರವರು ವಹಿಸಿದ್ದರು. ಈ ಸಂದರ್ಭದಲ್ಲಿ, ಸ್ಥಳೀಯ ಹಿರಿಯ ಸಮಾಜ ಸೇವಕರನ್ನು ಗೌರವಿಸಿ ಸನ್ಮಾನಿಸಲಾಯಿತು.

​ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಸೂರ್ಯಕಾಂತ್ ಜಯ ಸುವರ್ಣರವರು, “ಹಿಂದೆ ಪ್ರತಿ ಮನೆಯಲ್ಲೂ ಭಜನೆ ನಡೆಯುತ್ತಿತ್ತು, ಆ ಮೂಲಕ ಎಲ್ಲರೂ ಒಗ್ಗಟ್ಟಾಗುತ್ತಿದ್ದರು. ನಗರ ಹಾಗೂ ಉಪನಗರಗಳಲ್ಲಿ ಪ್ರತಿ ಭಜನಾ ಮಂಡಳಿ ಪ್ರಾರಂಭವಾಗುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಸೇರುವುದು ಸಂತಸದ ಸಂಗತಿ. ಭಕ್ತಿಯಲ್ಲಿ ಅಪಾರ ಶಕ್ತಿಯಿದೆ, ಆ ಶಕ್ತಿಯ ಮೂಲಕ ಸಮಾಜ ಇನ್ನಷ್ಟು ಬಲಿಷ್ಠಗೊಳ್ಳಲು ಸಾಧ್ಯವಾಗುತ್ತದೆ” ಎಂದರು. “ಸಮಾಜ ಬಾಂಧವರೆಲ್ಲರೂ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಸಂದೇಶಗಳನ್ನು ಪಾಲಿಸುತ್ತಾ, ಯಾರನ್ನೂ ದ್ವೇಷಿಸದೆ ಸನ್ನಡತೆಯಲ್ಲಿ ನಡೆಯಬೇಕು. ಸತ್ಯದ ಹಾದಿಯಲ್ಲಿ ನಡೆದಾಗ ಧರ್ಮ ನಮ್ಮನ್ನು ಖಂಡಿತವಾಗಿಯೂ ವಿಜಯದತ್ತ ಕೊಂಡೊಯ್ಯುತ್ತದೆ” ಎಂಬ ಮೌಲ್ಯಯುತ ಸಂದೇಶ ನೀಡಿದರು.

​ಒಗ್ಗಟ್ಟಿನಿಂದ ಬಲಿಷ್ಠ ಸಮಾಜ ನಿರ್ಮಾಣ: ದುರ್ಗಾಪ್ರಸಾದ್ ಸಾಲ್ಯಾನ್

​ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಸಾಲ್ಯಾನ್ರವರು ಮಾತನಾಡಿ, “ಬ್ರಹ್ಮಶ್ರೀ ನಾರಾಯಣ ಗುರುಗಳು ನಮ್ಮ ಸಮಾಜ ಸನ್ಮಾರ್ಗದಲ್ಲಿ ನಡೆಯಲು ದೇವಸ್ಥಾನಗಳನ್ನು ನಿರ್ಮಿಸಿದ್ದರು. ಅಂದಿನಿಂದಲೂ ಬಿಲ್ಲವ ಸಮಾಜ ಧಾರ್ಮಿಕ ಚಿಂತನೆಯಲ್ಲಿ ಮುಂದುವರಿದು ಬಲಿಷ್ಠಗೊಂಡಿದೆ. ನಮ್ಮ ಸಮಾಜ ಇನ್ನಷ್ಟು ಬಲಿಷ್ಠಗೊಳ್ಳಲು ನಾವೆಲ್ಲರೂ ಒಗ್ಗಟ್ಟಾಗುವುದು ಅತ್ಯಗತ್ಯ” ಎಂದರು. ಅಲ್ಲದೆ, “ಮುಂಬೈ ನಗರದಲ್ಲಿ ಜಯ ಸುವರ್ಣರವರು ಸಮಾಜವನ್ನು ಬಲಿಷ್ಠಗೊಳಿಸಲು ಮಾಡಿದ ತ್ಯಾಗ ಮತ್ತು ಸೇವೆಯನ್ನು ಸದಾ ಸ್ಮರಿಸಬೇಕು, ಅವರು ನಡೆದ ದಾರಿಯಲ್ಲಿ ನಾವು ಮುನ್ನಡೆಯಬೇಕು. ನಾರಾಯಣ ಗುರುಗಳ ಆದರ್ಶ ಮತ್ತು ತತ್ವ ಸಂದೇಶಗಳನ್ನು ಸಾರುವ ಉದ್ದೇಶದಿಂದ ಭಜನಾ ಮಂಡಳಿ ಸ್ಥಾಪಿಸಿರುವುದು ನಿಜಕ್ಕೂ ಅಭಿನಂದನೀಯ” ಎಂದು ಶ್ಲಾಘಿಸಿದರು.

​ಭಾರತ್ ಬ್ಯಾಂಕ್ ಸುದೃಢವಾಗಿದೆ: ಗಂಗಾಧರ್ ಜೆ. ಪೂಜಾರಿ

​ಕಾರ್ಯಕ್ರಮದ ಮುಖ್ಯ ಆಯೋಜಕರಲ್ಲಿ ಒಬ್ಬರಾದ, ಬಿಲ್ಲವರ ಅಸೋಸಿಯೇಷನ್, ಕಾಂದಿವಿಲಿ ಸ್ಥಳೀಯ ಕಚೇರಿಯ ಮಾಜಿ ಗೌರವ ಕಾರ್ಯಧ್ಯಕ್ಷರೂ ಹಾಗೂ ಭಾರತ್ ಬ್ಯಾಂಕಿನ ನಿರ್ದೇಶಕರೂ ಆದ ಗಂಗಾಧರ್ ಜೆ. ಪೂಜಾರಿಯವರು ಮಾತನಾಡಿದರು. “ಕಾಂದಿವಲಿ ಬಿಲ್ಲವರು ನಾರಾಯಣ ಗುರುಗಳ ತತ್ವದಂತೆ ಮತ್ತು ಜಯ ಸುವರ್ಣರ ಮಾರ್ಗದರ್ಶನದಂತೆ ಸಮಾಜ ಸೇವೆ ಮಾಡುತ್ತಿದ್ದಾರೆ. ಪ್ರತಿ ಮನೆಮನೆಯಲ್ಲೂ ಭಜನೆ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಮುಂಬೈ ಮತ್ತು ಉಪನಗರಗಳಲ್ಲಿ ಸುಮಾರು ೩೦ಕ್ಕೂ ಹೆಚ್ಚು ನಾರಾಯಣ ಗುರುಗಳ ಹೆಸರಿನಲ್ಲಿ ಭಜನಾ ಮಂಡಳಿಗಳು ಪ್ರಾರಂಭಗೊಳ್ಳಲಿದ್ದು, ಆ ಮೂಲಕ ಮುಂಬೈ ಬಿಲ್ಲವರು ಇನ್ನಷ್ಟು ಒಗ್ಗಟ್ಟಾಗಬೇಕು” ಎಂದು ಆಶಿಸಿದರು.

​ಅಲ್ಲದೆ, “ಭಾರತ್ ಬ್ಯಾಂಕಿನ ಬಗ್ಗೆ ಯಾವುದೇ ಅಪಪ್ರಚಾರಗಳಿಗೆ ಗ್ರಾಹಕರು ಮತ್ತು ಸಮಾಜ ಬಾಂಧವರು ಕಿವಿಯಾಗದೆ ಇರಿ. ಬ್ಯಾಂಕ್ ಸುದೃಢವಾಗಿ ಬೆಳೆದು ನಿಂತಿದೆ. ಎಲ್ಲಾ ರೀತಿಯಲ್ಲೂ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾವಿರಾರು ಕುಟುಂಬಗಳಿಗೆ ಆಧಾರವಾಗಿದೆ. ಬ್ಯಾಂಕನ್ನು ಇನ್ನಷ್ಟು ಬಲಿಷ್ಠಗೊಳಿಸುವಲ್ಲಿ ಸಮಾಜ ಬಾಂಧವರು ಸಹಕಾರ ನೀಡಬೇಕು” ಎಂದು ವಿನಂತಿಸಿದರು.

​ಗಣ್ಯರ ಉಪಸ್ಥಿತಿ ಹಾಗೂ ಸನ್ಮಾನ

​ವೇದಿಕೆಯ ಮೇಲೆ ಭಾರತ್ ಬ್ಯಾಂಕಿನ ಉಪಕಾರ್ಯಾಧ್ಯಕ್ಷರಾದ ನ್ಯಾಯವಾದಿ ಸೋಮನಾಥ್ ಅಮೀನ್, ಹೊಟೇಲ್ ಉದ್ಯಮಿ ಜಗನ್ನಾಥ್ ವಿ. ಕೋಟ್ಯಾನ್, ಬಿಲ್ಲವರ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ, ಭಾರತ್ ಬ್ಯಾಂಕಿನ ನಿರ್ದೇಶಕರಾದ ಭಾಸ್ಕರ್ ಎಂ. ಸಾಲ್ಯಾನ್, ಸುರೇಶ್ ಸುವರ್ಣ, ಮೋಹನ್ ದಾಸ್ ಜಿ. ಪೂಜಾರಿ, ಸಂತೋಷ್ ಕೆ. ಪೂಜಾರಿ, ನರೇಶ್ ಕೆ. ಪೂಜಾರಿ ಮತ್ತು ಶೋಭಾ ದಯಾನಂದ್ ಉಪಸ್ಥಿತರಿದ್ದರು. ಇವರ ಜೊತೆಗೆ ಜನಾರ್ಧನ್ ಎಂ. ಪೂಜಾರಿ, ಶಿವರಾಮ್ ಸಿ. ಪೂಜಾರಿ, ಕೇಶವ್ ಪೂಜಾರಿ, ಮಹೇಶ್ ಬಿ. ಕೋಟ್ಯಾನ್, ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ಕೆ. ಕುಕ್ಯಾನ್, ಕಾರ್ಯದರ್ಶಿ ಕೇಶವ ಎಸ್. ಪೂಜಾರಿ, ಕೋಶಾಧಿಕಾರಿ ಸಬಿತಾ ಜಿ. ಪೂಜಾರಿ ಮತ್ತು ಕಾಂದಿವಲಿ ಬಿಲ್ಲವರ ಅನೇಕ ಪ್ರಮುಖ ಸೇವಾಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

​ಈ ಶುಭ ಸಂದರ್ಭದಲ್ಲಿ ಸಮಾಜದ ಸಾಧಕರಾದ ಜನಾರ್ಧನ್ ಎಂ. ಪೂಜಾರಿ, ಯೋಗೇಶ್ ಕೆ. ಹೆಜ್ಮಾಡಿ, ಸಂಜೀವಿ ಕೇಶವ ಪೂಜಾರಿ, ಚಂದ್ರಕಲಾ ಸಾಲ್ಯಾನ್, ಆಶಾ ಗೋಪಾಲ್ ಅಂಚನ್, ಚಂಚಲಕ್ಷಿ ಅಂಚನ್, ಜಯರಾಮ್ ಪೂಜಾರಿ, ನಾರಾಯಣ ಕೆ. ಸುವರ್ಣ, ಜಗನ್ನಾಥ್ ಡಿ. ಕುಖ್ಯಾನ್, ರಮೇಶ್ ಪಿ. ಬಂಗೇರ, ಪ್ರವೀಣ್ ರಾಥೋಡ್, ಶೈಲೇಶ್ ಪೂಜಾರಿ, ವಿಜಯ್ ಡಿ. ಪೂಜಾರಿ, ಪ್ರಭಾವತಿ ಸುರೇಶ್ ಪೂಜಾರಿ, ಶಾಂತ ಶಿವಾನಂದ ಸುವರ್ಣ, ರೇಖಾ ಪ್ರಕಾಶ್ ಬಂಗೇರ, ಸಬೀತ ಜಿ. ಪೂಜಾರಿ, ಯಮುನಾ ಸಾಲ್ಯಾನ್, ಶುಭ ಎಸ್. ಸುವರ್ಣ, ಶಶಿಕಲಾ ಎಂ. ಸನಿಲ್, ಸರಸ್ವತಿ ಎಸ್. ಬಂಗೇರ, ಅನಿತಾ ವಿ. ಸಾಲ್ಯಾನ್, ಹೇಮಲತಾ ಎಸ್. ಪೂಜಾರಿ ಮತ್ತು ಸುಂದರಿ ಎಸ್. ಸುವರ್ಣ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.

​ಇದಲ್ಲದೆ, ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ವತಿಯಿಂದ ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ರೂ. ೨೦,೦೦೦ ಆರ್ಥಿಕ ನೆರವು ನೀಡಲಾಯಿತು. ಜೊತೆಗೆ, ಪ್ರತಿಭಾವಂತರಾದ ಪ್ರಖ್ಯಾತ್ ಭಾಸ್ಕರ್ ಪೂಜಾರಿ ಮತ್ತು ಪ್ರಜ್ವಲ್ ಏಕನಾಥ್ ಕುಕ್ಯಾನ್ ಅವರನ್ನು ಗೌರವಿಸಲಾಯಿತು.

​ಕಾರ್ಯಕ್ರಮವನ್ನು ಶಶಿಧರ್ ಬಂಗೇರರವರು ಅಚ್ಚುಕಟ್ಟಾಗಿ ನಿರೂಪಿಸಿ, ಎಲ್ಲರಿಗೂ ವಂದನಾರ್ಪಣೆ ಮಾಡಿದರು.



Related posts

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ ಇದರ 78ನೇ ವಾರ್ಷಿಕ ಮಹಾಸಭೆ. ಅಧ್ಯಕ್ಷರಾಗಿ ರಾಜು ಎಸ್. ಪೂಜಾರಿ ನಿಯುಕ್ತಿ.

Mumbai News Desk

ಬಾಂಬೆ ಬಂಟ್ಸ್ ಅಸೋಷಿಯೇಶನಿನ ಮಹಿಳಾ ವಿಭಾಗದಿಂದ” ನಾರಿ ಉತ್ಸವ “

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದ ‘ಹಳದಿ ಕುಂಕುಮ’ ಕಾರ್ಯಕ್ರಮ: ಸ್ತ್ರೀ ಶಕ್ತಿಯ ಸೌಹಾರ್ದ ಸಮಾಗಮ

Mumbai News Desk

ಶ್ರೀ ಮಹಾ ವಿಷ್ಣು ಮಂದಿರ – ಡೊಂಬಿವಲಿ, ಮಹಿಳಾ ವಿಭಾಗದ ವತಿಯಿಂದ ಹರಶಿನ ಕುಂಕುಮ ಕಾರ್ಯಕ್ರಮ.

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಅಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಹಾಗೂ ರಕ್ತದಾನ ಶಿಬಿರ

Mumbai News Desk

ಮುಂಬೈನಲ್ಲಿ ರಣಬಿಸಿಲಿನ ಆರ್ಭಟ: ಮಾರ್ಚ್ ಆರಂಭದಲ್ಲೇ 40 ಡಿಗ್ರಿಗೆ ಏರಿದ ತಾಪಮಾನ, ಐಎಂಡಿಯಿಂದ ‘ಕಿತ್ತಳೆ ಎಚ್ಚರಿಕೆ’ (Orange Alert) ಜಾರಿ

Mumbai News Desk