July 23, 2026
Mumbai News Kannada
ಸುದ್ದಿ

ಮೊಗವೀರ ಪ್ರೀಮಿಯರ್ ಲೀಗ್ (MPL 2026): ಹರಾಜು ಪ್ರಕ್ರಿಯೆ ಯಶಸ್ವಿ; ₹4 ಲಕ್ಷಕ್ಕೆ ಕುಂದಾಪುರ ಲೆಜೆಂಡ್ಸ್ ಮುಂಚೂಣಿಯಲ್ಲಿ







ಮುಂಬಯಿ (ಜ. 14): ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ, ಮುಂಬಯಿ) ಇದರ ಆಯೋಜನೆಯಲ್ಲಿ ಜನವರಿ 18ರ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಐತಿಹಾಸಿಕ ಮೊಗವೀರ ಪ್ರೀಮಿಯರ್ ಲೀಗ್ (MPL 2026) ಕ್ರಿಕೆಟ್ ಪಂದ್ಯಾಟವು ನಡೆಯಲಿದೆ.

​ಸಮಾಜದ ಯುವ ಸಮುದಾಯವನ್ನು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಪಂದ್ಯಾಟದ ಆಟಗಾರರ ಹರಾಜು ಪ್ರಕ್ರಿಯೆಯು ಸಂಘದ ಅಧ್ಯಕ್ಷರಾದ ಸಂತೋಷ್ ಕೆ. ಪುತ್ರನ್ ಅವರ ಆಡಳಿತದ ದಹಿಸರ್‌ನ ‘ಹೋಟೆಲ್ ಹ್ಯಾಪಿ’ಯಲ್ಲಿ ಯಶಸ್ವಿಯಾಗಿ ಜರುಗಿತು.

​ಈ ಹರಾಜು ಪ್ರಕ್ರಿಯೆಯಲ್ಲಿ ಸಂಘದ ಗೌರವ ಅಧ್ಯಕ್ಷ ಸುರೇಶ್ ಕಾಂಚನ್, ಅಧ್ಯಕ್ಷ ಸಂತೋಷ್ ಕೆ. ಪುತ್ರನ್, ಮಾಜಿ ಅಧ್ಯಕ್ಷರುಗಳಾದ ಗೋಪಾಲ್ ಪುತ್ರನ್, ರಮೇಶ್ ಬಂಗೇರ, ರಾಜು ಮೆಂಡನ್ ವಂಡ್ಸೆ, ವಿನೋದ್ ಕೋಟ್ಯಾನ್ ಮತ್ತು ಪ್ರಜ್ವಲ್ ಸಾಲಿಯಾನ್, ರಘುರಾಮ್ ಚಂದನ್, ಅವಿನಾಶ್ ಪುತ್ರನ್, ಭಾರತಿ ನಾಯ್ಕ್, ಸುನೀಲ್ ಕುಂದರ್, ರಾಜು ಮೊಗವೀರ, ಪ್ರದೀಪ್ ಚಂದನ್, ಸುರೇಶ್ ತೋಳಾರ್, ನಾಗೇಶ್ ತೋಳಾರ್, ಸುಚಿತ್ರ ಪುತ್ರನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

​ಹರಾಜಾದ ತಂಡಗಳು ಮತ್ತು ಮಾಲಕತ್ವದ ವಿವರ

​ಮೊಗವೀರ ಸಮಾಜದ ಬಂಧುಗಳಿಗಾಗಿ ಆಯೋಜಿಸಲಾದ ಈ ಪಂದ್ಯಾಟದಲ್ಲಿ ಕುಂದಾಪುರ ಮತ್ತು ಉಡುಪಿ ಭಾಗದ ಊರುಗಳ ಹೆಸರಿನ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಹರಾಜಿನಲ್ಲಿ ತಂಡಗಳ ವಿವರ ಹೀಗಿದೆ:

ತಂಡದ ಹೆಸರುಮಾಲಕರುಹರಾಜು ಮೊತ್ತ
ಕುಂದಾಪುರ ಲೆಜೆಂಡ್ಸ್ಗೋಪಾಲ್ ಪುತ್ರನ್ (ಮಾಜಿ ಅಧ್ಯಕ್ಷರು)₹4 ಲಕ್ಷ
ಚಿಕ್ಕನ್ಸಾಲ್ ಚಾಲೆಂಜರ್ಸ್ಸಂತೋಷ್ ಕೆ. ಪುತ್ರನ್ (ಅಧ್ಯಕ್ಷರು)₹3.2 ಲಕ್ಷ
ಸೌಪರ್ಣಿಕ ಮರವಂತೆಸುರೇಶ್ ತೋಳಾರ್ ಮತ್ತು ನಾಗೇಶ್ ತೋಳಾರ್₹3.1 ಲಕ್ಷ
ವಂಡ್ಸೆ ವಾರಿಯರ್ಸ್ರಾಜು ಮೆಂಡನ್ ವಂಡ್ಸೆ (ಮಾಜಿ ಅಧ್ಯಕ್ಷರು)₹2.2 ಲಕ್ಷ
ಉಪ್ಪಿನಕುದ್ರು ಕೋಸ್ಟಲ್ ರೈಡರ್ಸ್ಸುರೇಶ್ ಕಾಂಚನ್ (ಗೌರವ ಅಧ್ಯಕ್ಷರು)₹2.1 ಲಕ್ಷ
ಪಡುಕೋಣೆ ಪ್ಯಾಂಥರ್ಸ್ರಮೇಶ್ ಬಂಗೇರ ಮತ್ತು ವಿನೋದ್ ಕೋಟ್ಯಾನ್₹1.6 ಲಕ್ಷ
ನಾವುಂದ ಸೂಪರ್ ಕಿಂಗ್ಸ್ಮಹಾಬಲ ಕುಂದರ್ (ಮಾಜಿ ಅಧ್ಯಕ್ಷರು)₹1.5 ಲಕ್ಷ
ಸಸಿಹಿತ್ಲು ಸೂಪರ್ ಕಿಂಗ್ಸ್ಪ್ರಜ್ವಲ್ ಸಾಲಿಯಾನ್₹1.1 ಲಕ್ಷ
ತೆಗ್ಗರ್ಸೆ ಟೈಗರ್ಸ್ಸುನಿಲ್ ಕುಂದರ್₹1.1 ಲಕ್ಷ
ಸೇನಾಪುರ ಟೈಟಾನ್ಸ್ಪ್ರದೀಪ್ ಚಂದನ್, ರಾಜೀವ ಚಂದನ್, ಚಂದ್ರ ನಾಯ್ಕ್₹1.1 ಲಕ್ಷ
ಉಡುಪಿ ಫೋರ್ಸ್ಗಣೇಶ್ ಕಾಂಚನ್ (ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಮಂಡಳಿ)₹1.1 ಲಕ್ಷ
ಕೋಸ್ಟಲ್ ಕಿಂಗ್ಸ್ ಬಟ್ಟೆಕುದ್ರುಭಾಸ್ಕರ್ ಶ್ರೀಯಾನ್₹1 ಲಕ್ಷ
ಮೊಗವೀರ ರಾಯಲ್ಸ್ಸಂಘದ ಮಹಿಳಾ ವಿಭಾಗ₹1 ಲಕ್ಷ
ಬೈಂದೂರು ಉದ್ದಬೆಟ್ಟುಸಂಘದ ದೊಂಬಿವಿಲಿ ಶಾಖೆ₹1 ಲಕ್ಷ
ಬಾಗ್ವಾಡಿ ಕಿಂಗ್ಸ್ 11ಅವಿನಾಶ್ ಪುತ್ರನ್₹1 ಲಕ್ಷ
ಕುಂದಬಾರಂದಾಡಿ ಸ್ಟ್ರೈಕರ್ಸ್ರಘುರಾಮ್ ಚಂದನ್₹1 ಲಕ್ಷ

​ಜ. 10 ರಂದು ನಡೆದ ಈ ಹರಾಜಿನಲ್ಲಿ ಕುಂದಾಪುರ ಲೆಜೆಂಡ್ಸ್ ತಂಡವು ಅತಿ ಹೆಚ್ಚು ಮೊತ್ತಕ್ಕೆ (₹4 ಲಕ್ಷ) ಹರಾಜಾಗುವ ಮೂಲಕ ಮುಂಚೂಣಿಯಲ್ಲಿದೆ. ಐದು ತಂಡಗಳು ತಲಾ ₹1 ಲಕ್ಷದ ಕನಿಷ್ಠ ಬಿಡ್ ಪಡೆದುಕೊಂಡಿವೆ.

ಜನವರಿ 18ರಂದು ನಗರದ ಗಣ್ಯರ ಉಪಸ್ಥಿತಿಯಲ್ಲಿ ಕ್ರಿಕೆಟ್ ಪಂದ್ಯಾಟವು ಉದ್ಘಾಟನೆಗೊಳ್ಳಲಿದ್ದು, ಸಂಜೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಪ್ರಪ್ರಥಮ ಬಾರಿಗೆ ಜಾತೀಯ ಸಂಘಟನೆಯೊಂದು ಇಷ್ಟು ವ್ಯವಸ್ಥಿತವಾಗಿ ತಂಡಗಳನ್ನು ಹರಾಜು ಮಾಡುವ ಮೂಲಕ ಪಂದ್ಯಾಟ ಆಯೋಜಿಸುತ್ತಿರುವುದು ವಿಶೇಷವಾಗಿದೆ. ಈ ಕ್ರೀಡಾಕೂಟವು ಮೊಗವೀರ ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಮತ್ತು ಯುವಕರನ್ನು ಸಂಘಟನೆಯತ್ತ ಸೆಳೆಯಲು ಸ್ಪೂರ್ತಿಯಾಗಲಿದೆ ಎಂದು ಅಧ್ಯಕ್ಷ ಸಂತೋಷ್ ಕೆ. ಪುತ್ರನ್ ತಿಳಿಸಿದ್ದಾರೆ.



Related posts

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿ. ಎಸ್ ಎಸ್ ಮನೋಹರ್ ಶೆಟ್ಟಿ ಅವರಿಗೆ ನುಡಿ ನಮನ.

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (28/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಮುಂಬಯಿಯ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಯಿಂದ ತುಳುನಾಡಿನ ವಿವಿಧ ಪುಣ್ಯ ಕ್ಷೇತ್ರ ಗಳಲ್ಲಿ ಭಜನಾ ಕಾರ್ಯಕ್ರಮ.

Mumbai News Desk

ಮುಂಬೈ ಕನ್ನಡತಿ ನ್ಯಾ. ಮೀನಾಕ್ಷಿ ಅಚಾರ್ಯರಿಗೆ ಗ್ಲೋಬಲ್ ಲೀಗಲ್ ಅವಾರ್ಡ್ಸ್ ನಿಂದ, “ವರ್ಷದ ವ್ಯವಸ್ಥಾಪಕಿ ಪಾಲುದಾರ ಮಹಿಳೆ” ಪ್ರಶಸ್ತಿ.

Mumbai News Desk

ಯಕ್ಷಗಾನ ಕಲಾವಿದ, ಹಾಸ್ಯ ಚಕ್ರವರ್ತಿ, ಅರುಣ್ ಕುಮಾರ್ ಜಾರ್ಕಳಗೆ ಕುಂದೇಶ್ವರ ಸಮ್ಮಾನ್

Mumbai News Desk

ಪಕ್ಷಿಕೆರೆ : ಪತ್ನಿ ಮಗುವನ್ನು ಹತ್ಯೆಗೈದು ಪತಿ ರೈಲಿಗೆ ತಲೆಕಕೊಟ್ಟು ಅತ್ಮಹತ್ಯೆ

Mumbai News Desk