30.9 C
Mumbai
June 8, 2026
Mumbai News Kannada
ಮುಂಬಯಿ

ನವಿ ಮುಂಬಯಿ ಘನ್ಸೋಲಿಯ ದೇವಿ ಮೂಕಾಂಬಿಕಾಗೆ ಸೋಮನಾಥ ಎಸ್‌. ಕರ್ಕೇರರ ನೂತನ ತುಳು ಕೃತಿ ‘ಪೆರ್ಗ’ ದ ಮೊದಲ ಪ್ರತಿ ಅರ್ಪಣೆ






ಅನೇಕ ತುಳು ಹಾಗೂ ಕನ್ನಡ ಕೃತಿಗಳನ್ನು ರಚಿಸಿರುವ ಸೋಮನಾಥ ಎಸ್‌.ಕರ್ಕೇರರ ಹೊಸ ತುಳು ಕೃತಿ ‘ಪೆರ್ಗ’ವು ಇದೀಗ ಅಚ್ಚಿನ ಮನೆಯಿಂದ ಹೊರ ಬಂದಿದ್ದು ಇದರ ಮೊತ್ತ ಮೊದಲನೆಯ ಪ್ರತಿಯನ್ನು ಶುಕ್ರವಾರ ದಿನಾಂಕ 20-2-2026 ರಂದು ನವಿ ಮುಂಬಯಿಯ ಘನ್ಸೋಲಿಯ ಮೂಕಾಂಬಿಕಾ ದೇವಿಯ ಚರಣ ಕಮಲಗಳಿಗೆ ಅರ್ಪಿಸಲಾಯ್ತು.

ಈ ಸಂಧರ್ಭದಲ್ಲಿ ಮಂದಿರದ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿಯವರು ದೇವಸ್ಥಾನದ ಪರವಾಗಿ ‘ಪೆರ್ಗ”ದ ಪ್ರತಿಯನ್ನು ಸ್ವೀಕರಿಸಿದರು. ಈ ಪ್ರಯುಕ್ತ ಸರಳ ಪೂಜೆ ಹಾಗೂ ಮಂಗಳಾರತಿಯನ್ನು ಮಾಡಲಾಗಿ ಲೇಖಕರಿಗೆ ದೇವಿ ಮೂಕಾಂಬಿಕೆಯ ಪ್ರಸಾದ ನೀಡಿ ಅವರಿಂದ ಇನ್ನೂ ಹೆಚ್ಚು ಮೌಲಿಕ ಕೃತಿಗಳು ರಚಿಸಲ್ಪಟ್ಟು ಓದುಗರ ಕೈ ಸೇರಲಿ ಎಂದು ಅಣ್ಣಿ ಶೆಟ್ಟಿಯವರು ಆಶಿರ್ವದಿಸಿದರು. ಕೃತಿ ಅರ್ಪಣೆಯ ಈ ಸಂದರ್ಭದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖ್ಯ ಕಛೇರಿಯ ಸಮಿತಿ ಸದಸ್ಯ ಹಾಗೂ ಜೊತೆ ಕೋಶಾಧಿಕಾರಿ ಚಂದ್ರಕಾಂತ ಸಾಲ್ಯಾನ್‌, ದೇವಸ್ಥಾನದ ಕಾರ್ಯಕಾರಿ ಸಮಿತಿ ಸದಸ್ಯ ಕುಟ್ಟಿ ಕೆಂದರ್‌ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ನವಿ ಮುಂಬಯಿ ಶಾಖೆಯ ಮಹಿಳಾ ವಿಭಾಗದ ಸದಸ್ಯೆ ಪ್ರತಿಭಾ ಸಾಲ್ಯಾನ್‌ ಉಪಸ್ಥಿತರಿದ್ದರು.


ತುಳು ಹನಿಗವನ, ಹನಿ ಕಥೆ, ಹಾಸ್ಯ ತುಣುಕುಗಳಿಂದ ಕೂಡಿದ ‘ಪೆರ್ಗ’ ವು ಸದ್ಯದಲ್ಲೇ ಮುಂಬಯಿ ಮತ್ತು ಉಡುಪಿ ಜಿಲ್ಲೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯಯನ್ನು ಮುಂಬಯಿಯ ಪ್ರತಿಯೊಬ್ಬ ತುಳುವರ ಮನೆ ಮನೆಗೆ ತಲುಪಿಸಲಾಗುವುದು ಎಂದು ಈ ಕೃತಿಯ ಪ್ರಕಾಶಕರಾದ ಮುಂಬಯಿಯ ಅಕ್ಷರಗಂಗಾ ಪ್ರಕಾಶನದವರು ತಿಳಿಸಿದ್ದಾರೆ.



Related posts

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಬೆಳ್ಳಿ ಹಬ್ಬ ಸಮಾರಂಭದ ಉದ್ಘಾಟನೆ

Mumbai News Desk

ಮೀರಾರೋಡ್ ಪೂರ್ವದ ಶ್ರೀ ರಾಧಾ ಕೃಷ್ಣ ವೃದ್ಧಾಶ್ರಮಕ್ಕೆ ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ  ಮಹಿಳಾ ವಿಭಾಗ ಭೇಟಿ

Mumbai News Desk

ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ 65ನೇ ವಾರ್ಷಿಕ ಮಂಗಳೋತ್ಸವ ಸಂಪನ್ನ.

Mumbai News Desk

ಮೀರಾ – ಭಾಯಂದರ್ ನಲ್ಲಿ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಉದ್ಘಾಟನೆ. ಕಾರ್ಯಾಧ್ಯಕ್ಷರಾಗಿ ಉದಯ ಡಿ ಸುವರ್ಣ ಆಯ್ಕೆ

Mumbai News Desk

ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್ ಪೂರ್ವ – ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ 26ನೇ ವಾರ್ಷಿಕ ಅಯ್ಯಪ್ಪ ಪೂಜೆ ಸಂಪನ್ನ.

Mumbai News Desk

ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಹಾಗೂ ಶನೀಶ್ವರ ಮಹಾಪೂಜೆ.

Mumbai News Desk