30 C
Mumbai
April 24, 2026
Mumbai News Kannada
ಮುಂಬಯಿ

ಪೌರಾಣಿಕ ವಾಚಕ ಸಮಿತಿ ಮುಂಬಯಿ: ಸುವರ್ಣ ಮಹೋತ್ಸವ ಸಮಾರಂಭಕ್ಕೆ ಚಾಲನೆ.





ಚಿತ್ರ ವರದಿ : ದಿನೇಶ್ ಕುಲಾಲ್

ಪೌರಾಣಿಕ ವಾಚಕ ಸಮಿತಿ ಮುಂಬಯಿ ಇದರ ಸುವರ್ಣ ಮಹೋತ್ಸವ ಸಮಾರಂಭವು ಫೆ.28 ಶನಿವಾರ ದಿಂದ ಮಾರ್ಚ್ 1ರ ವರೆಗೆ ಅಂಧೇರಿಯ ವೀರದೇಸಾಯಿ ರಸ್ತೆ ಸಮೀಪದ ಶ್ರೀಮದ್ಭಾರತ ಮಂಡಳಿಯ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ನಡೆಯಿತು.

ತಾ.28ರಂದು ಬೆಳಿಗ್ಗೆ 10ಕ್ಕೆ ಕಲಶ ಮಹೂರ್ತದೊಂದಿಗೆ 50ನೇ ವಾರ್ಷಿಕ ಶ್ರೀ ಶನಿ ಮಹಾ ಪೂಜೆ ಪ್ರಾರಂಭವಾಗಿ ಅಪರಾನ್ಹ ಗ್ರಂಥ ಪಾರಾಯಣ,.ಬಳಿಕ ಭಜನೆ ನಂತರ ಮಂಗಳರಾತಿ ಹಾಗೂ ಪ್ರಸಾದ ವಿತರಣೆ ನಡೆಯಿತು.

ಮಾರ್ಚ್ 1ರಂದು ಬೆಳಿಗ್ಗೆ ವಿವಿಧ ಆಮಂತ್ರಿತ ಭಜನಾ ಮಂಡಳಿ ಯವರಿಂದ ಭಜನಾ ಕಾರ್ಯಕ್ರಮಕ್ಕೆ ಶ್ರೀ ಲಕ್ಷ್ಮಿ ನಾರಾಯಣ ಮಂದಿರದ ಪ್ರಧಾನ ಅರ್ಚಕರಾದ ಗುರು ಪ್ರಸಾದ್ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷೆ ದಯಾವತಿ ಸುವರ್ಣ, ಶ್ರೀ ಮದ್ಭಾರತ ಮಂಡಳಿಯ ಅಧ್ಯಕ್ಷ ಜಗನ್ನಾಥ ಪುತ್ರನ್, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ ಇದರ ಟ್ರಸ್ಟಿ ಚಂದ್ರಶೇಖರ್ ಆರ್. ಸಾಲ್ಯಾನ್, ವಾಚಕ ಸಮಿತಿಯ ಅಧ್ಯಕ್ಷ ರತ್ನಾಕರ್ ಬಿ. ಬಂಗೇರ ಉಪಸ್ಥಿತಿರಿದ್ದರು.


ಬಳಿಕ ಪೌರಾಣಿಕ ವಾಚಕ ಸಮಿತಿ,ಮಹಾವಿಷ್ಣು ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ,ಶ್ರೀ ಮದ್ಭಾರತ ಮಂಡಳಿ,ಮುಕಾಂಬಿಕ ಬಾಲ ಭಜನಾ ಮಂಡಳಿ ಘನ್ಸೋಲಿ,ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಫೋರ್ಟ್,ಮಹಿಷಾ ಮರ್ದಿನಿ ಭಜನಾ ಮಂಡಳಿ ಬೋರಿವಲಿ,
ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ ಇವರಿಂದ ಭಜನೆ ನಡೆಯಿತು.

ಆನಂತರ ಮಹಿಷಾ ಮರ್ದಿನಿ ಭಜನಾ ಮಂಡಳಿ ಬೊರಿವಲಿ, ಮಹಾಲಕ್ಷ್ಮೀ
ಭಜನಾ ಮಂಡಳಿ ಅಂಧೇರಿ, ಶನಿಶ್ವರ ಸೇವಾ ಚಾರಿಟೇಬಲ್ ಟ್ರಸ್ಟ್ ಮೀರಾ ರೋಡ್ ನ ಮಕ್ಕಳ ಭಜನಾ ಮಂಡಳಿ ಅವರಿಂದ ಕುಣಿತ ನಡೆಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕನಾಥ ಪಿ. ಕಾಂಚನ್,ಕೋಶಾಧಿಕಾರಿ ಸದಾಶಿವ ಎನ್. ಸುವರ್ಣ, ಸಮಿತಿ ಸದಸ್ಯರಾದ ಕಮಲಾಕರ್ ಕೋಟ್ಯಾನ್, ಆನಂದ ಅಮೀನ್, ಸಂಜೀವ ಸಿ. ಬಂಗೇರ, ಹರಿಶ್ಚಂದ್ರ ಸಿ. ಕಾಂಚನ್,
ಕೇಶವ ಎಸ್.ಬಂಗೇರ,ಸುರೇಂದ್ರ ನಾಥ್ ಹಳೆಯಂಗಡಿ, ಚಂದ್ರ ಶೇಕರ ಬಿ. ಬಂಗೇರ ಸಹಕರಿಸಿದರು.



Related posts

ಭಾರತ ಪ್ರವಾಸೋದ್ಯಮಕ್ಕೆ ವಿಶ್ವಕರ್ಮರ ಕೊಡುಗೆ ಮಹತ್ತರ : ಕಾಳಹಸ್ತೇಂದ್ರ ಶ್ರೀ

Mumbai News Desk

ಎಲ್ಲರ ಬದುಕಲ್ಲಿ ಧರ್ಮ ಕಾರ್ಯಗಳು ನಡೆಯಲಿ: ಸಾಣೂರು ಸಾಂತಿಂಜ ಜನಾರ್ದನ ಭಟ್‌

Mumbai News Desk

ಚಾರ್ಕೋಪ್ ಕನ್ನಡಿಗರ ಬಳಗದ ರಜತ ಮಹೋತ್ಸದ ಸಂಭ್ರಮ ಉದ್ಘಾಟನೆ

Mumbai News Desk

ಎನ್ಲೈಟನ್ ಫೌಂಡೇಶನ್ ಧಾರವಿ, ಏಳನೆ ವಾರ್ಷಿಕೋತ್ಸವ:

Mumbai News Desk

ಶ್ರೀ ಮೂಕಾಂಬಿಕ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ : ಮಹಾ ಶಿವರಾತ್ರಿಯ ಅಂಗವಾಗಿ ಏಕಹಾ ಭಜನೆ

Mumbai News Desk

ಮುಂಬೈ: ಬೋರಿವಲಿ ಶ್ರೀ ಜಗದೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮ ಸಂಪನ್ನ

Mumbai News Desk