30.9 C
Mumbai
June 8, 2026
Mumbai News Kannada
ಪ್ರಕಟಣೆ

ಪಾಂಗಾಳ: ಮಾ. 2ರಿಂದ 4ರವರೆಗೆ ಸಿರಿ ಕುಮಾರ ಬ್ರಹ್ಮಲಿಂಗೇಶ್ವರ ಆದಿ ಆಲಡೆ ಆಯನ ಸಿರಿಜಾತ್ರೆ





ಉಡುಪಿ: ತಾಲ್ಲೂಕಿನ ಪಾಂಗಾಳದ ಶ್ರೀ ಸಿರಿ ಕುಮಾರ ಬ್ರಹ್ಮಲಿಂಗೇಶ್ವರ ಆದಿ ಆಲಡೆಯಲ್ಲಿ ಮಾರ್ಚ್ 2ರಿಂದ 4ರವರೆಗೆ ಆದಿ ಆಲಡೆ ಬ್ರಹ್ಮಲಿಂಗೇಶ್ವರ ಹಾಗೂ ಪರಿವಾರ ದೈವಗಳ ಆಯನ ಸಿರಿಜಾತ್ರಾ ಮಹೋತ್ಸವವು ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

​ಧಾರ್ಮಿಕ ಕಾರ್ಯಕ್ರಮಗಳ ವಿವರ:

ಮಾರ್ಚ್ 2 (ಸೋಮವಾರ): ಬೆಳಿಗ್ಗೆ 9:30ಕ್ಕೆ ನವಕ ಕಲಶ, ಪ್ರಧಾನ ಹೋಮ, ಕಲಶಾಭಿಷೇಕ ಹಾಗೂ ಕ್ಷೇತ್ರದ ನಾಗಬನದಲ್ಲಿ ತನು ತಂಬಿಲ ಪ್ರಸನ್ನ ಪೂಜೆ ನೆರವೇರಲಿದೆ. ಬೆಳಿಗ್ಗೆ 11:30ರ ವೃಷಭ ಲಗ್ನ ಸುಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಲಿದ್ದು, ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಹಾಗೂ 12:45ಕ್ಕೆ ಬ್ರಾಹ್ಮಣ ಸುಹಾಸಿನಿ ಆರಾಧನೆ ನಡೆಯಲಿದೆ. ನಂತರ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

​ರಾತ್ರಿ 8:30ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಡಲಿದೆ. ರಾತ್ರಿ 9:30ಕ್ಕೆ ಬೈಗಿನ ಬಲಿ, 11:00ಕ್ಕೆ ಕುಮಾರ ದರ್ಶನ, ರಾತ್ರಿ 1:00ಕ್ಕೆ ಮಹಾ ರಂಗಪೂಜೆ, 2:30ಕ್ಕೆ ಬ್ರಹ್ಮಮಂಡಲ ಹಾಗೂ ಮುಂಜಾನೆ 4:30ರಿಂದ ತುಲಾಭಾರ ಸೇವೆಗಳು ನಡೆಯಲಿವೆ.

ಮಾರ್ಚ್ 3: ಬೆಳಿಗ್ಗೆ 11:00ಕ್ಕೆ ಮಹಾಪೂಜೆ, ಸಂಜೆ 7:00 ಗಂಟೆಗೆ ತಪ್ಪಂಗಾಯಿ ಬಲಿ ನಡೆಯಲಿದೆ. ರಾತ್ರಿ 8:30ರಿಂದ ಧೂಳುಮಂಡಲ, ಭೂತಬಲಿ, ಶಯನೋತ್ಸವ ಹಾಗೂ ಕವಾಟ ಬಂಧನ ನಡೆಯಲಿದೆ.

ಮಾರ್ಚ್ 4: ಬೆಳಿಗ್ಗೆ 7:00 ಗಂಟೆಗೆ ಕವಾಟೋದ್ಘಾಟನೆ ನಂತರ ಮಹಾಪೂಜೆ ನೆರವೇರಲಿದೆ. ಸಾಯಂಕಾಲ 5:00 ಗಂಟೆಗೆ ಬಲಿ ಹೊರಟು ಅವಕೃತ ಸ್ನಾನ, ಕಟ್ಟೆ ಪೂಜೆ ನಡೆದು, ರಾತ್ರಿ ಧ್ವಜಾವರೋಹಣದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.

​ಈ ಮಹೋತ್ಸವದಲ್ಲಿ ಭಕ್ತಾದಿಗಳು ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀ ಬ್ರಹ್ಮಲಿಂಗೇಶ್ವರ, ನಾಗದೇವರು ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಬೇಕೆಂದು ಮುಕ್ಕಾಲಿ ರಮಾನಂದ ಎನ್. ಶೆಟ್ಟಿ, ಅಧ್ಯಕ್ಷ ರಮೇಶ ಡಿ. ಶೆಟ್ಟಿ (ಕಲ್ಯಾಣ್), ಕಾರ್ಯದರ್ಶಿ ರವಿವರ್ಮ ಶೆಟ್ಟಿ ಹಾಗೂ ಜೊತೆ ಕೋಶಾಧಿಕಾರಿ ದೀಪಕ್ ಎಸ್. ಶೆಟ್ಟಿ ವಿನಂತಿಸಿದ್ದಾರೆ.

​ಮುಂಬೈ ಸಮಿತಿಯ ಪರವಾಗಿ ಅಧ್ಯಕ್ಷ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ (ಅಂಧೇರಿ), ಉಪಾಧ್ಯಕ್ಷ ಉಮೇಶ್ ಆರ್. ಶೆಟ್ಟಿ (ಹೋಟೆಲ್ ಶಾರದ ಭವನ, ಸಾಂಗ್ಲಿ), ಕಾರ್ಯದರ್ಶಿ ಶೈಲೇಶ್ ಆರ್. ಶೆಟ್ಟಿ (ಹೋಟೆಲ್ ಮಹಾಲಕ್ಷ್ಮಿ, ಕಲ್ಯಾಣ್), ಜಂಟಿ ಕಾರ್ಯದರ್ಶಿ ಅಶೋಕ್ ಶೆಟ್ಟಿ (ಹೋಟೆಲ್ ಗಣೇಶ್ ಟೀ ಕ್ಲಬ್, ಸಾಂಗ್ಲಿ), ಖಜಾಂಚಿ ಶ್ರೀಧರ ಎಸ್. ಶೆಟ್ಟಿ (ಗೋರೆಗಾಂವ್, ಬಂಗೂರ್ ನಗರ) ಹಾಗೂ ಸೇವಾ ಸಮಿತಿಯ ಸರ್ವ ಸದಸ್ಯರು, ಮಹಿಳಾ ಸದಸ್ಯರು, ಕುಟುಂಬಸ್ಥರು ಮತ್ತು ಗ್ರಾಮಸ್ಥರು ಭಕ್ತರನ್ನು ಸ್ವಾಗತಿಸಿದ್ದಾರೆ.



Related posts

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಆ. 10 ರಂದು ಕಾಂದಿವಲಿಯಲ್ಲಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಜಂಟಿ ಕಾರ್ಯಕ್ರಮ.

Mumbai News Desk

ಮಾ. 29: ಬೋರಿವಲಿಯ ಶ್ರೀ ಜಗದೀಶ್ವರಿ ದೇವಸ್ಥಾನದಲ್ಲಿ ರಕ್ತದಾನ ಶಿಬಿರ: ಮಾನವೀಯ ಸೇವೆಗೆ ಸ್ಪಂದಿಸಲು ಭಕ್ತಾದಿಗಳಿಗೆ ಕರೆ

Mumbai News Desk

   ನ. 19 ;   ಕುಲಾಲ ಸಂಘ ಮುಂಬಯಿ  93ನೇ ವಾರ್ಷಿಕ ಮಹಾಸಭೆ.

Mumbai News Desk

ಡಿ.10 ರಂದು ಚಿತ್ರಪು ಬಿಲ್ಲವರ ಸಂಘ (ರಿ) ಮುಂಬಯಿ, 78ನೇ ವಾರ್ಷಿಕ ಮಹಾಸಭೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಡಿ.24ರಂದು 9ನೇ ಮೂಲತ್ವ ವಿಶ್ವ ಪ್ರಶಸ್ತಿ-2023.

Mumbai News Desk

ಫೆ. 9. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮೀರಾ – ಭಾಯಂದರ್ ಶಾಖೆಯ ವಾರ್ಷಿಕೋತ್ಸವ

Mumbai News Desk