32 C
Mumbai
April 23, 2026
Mumbai News Kannada
ತುಳುನಾಡು

ಬಜ್ಪೆಯಲ್ಲಿ ಮುಂಬೈಯ ಪುರುಷೋತ್ತಮ ಬೆಲ್ಚಡ ದಂಪತಿಗಳಿಂದ ಹರಕೆಯ ಯಕ್ಷಗಾನ ಸೇವೆ: ಕಲಾವಿದರುಗಳಾದ ಅರವಿಂದ ಬೋಳಾರ್ ಹಾಗೂ ಮನ್ವಿತ್ ನಿಡ್ಡೋಡಿ ಅವರಿಗೆ ಸನ್ಮಾನ





ಮುಂಬಯಿಯ ಘಾಟ್ಕೋಪರ್ ಆನಂದ ನಗರದ ನಿವಾಸಿಗಳಾದ ಪುರುಷೋತ್ತಮ ಮತ್ತು ಸುನಿತಾ ಸಾಲ್ಯಾನ್ ದಂಪತಿಗಳ ಹರಕೆಯ ಸೇವೆಯಾಗಿ ಏಪ್ರಿಲ್ 1, 2026 ರಂದು ಬಜ್ಪೆಯ ಮುರ ಸೌಹಾರ್ದ ನಗರದ ಅಂಗನವಾಡಿ ಭಂಡಾರ ಮನೆ ಬಳಿ ‘ಶ್ರೀ ಭಗವತಿ ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟವು ಅತ್ಯಂತ ಭಕ್ತಿ-ಸಂಭ್ರಮದಿಂದ ಜರುಗಿತು.


ಈ ಯಕ್ಷಗಾನದಲ್ಲಿ ತುಳುನಾಡ ಮಾಣಿಕ್ಯ, ಜನಜಾಗೃತಿ ನಟ ಅರವಿಂದ ಬೋಳಾರ್ ಅವರು ಅತಿಥಿ ಕಲಾವಿದರಾಗಿ ಆಗಮಿಸಿ ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು. ಕಾರ್ಯಕ್ರಮದ ಮಧ್ಯಂತರದಲ್ಲಿ ಕಲಾ ಸೇವೆಯನ್ನು ಗುರುತಿಸಿ ಅರವಿಂದ ಬೋಳಾರ್, ಪಾವಂಜೆ ಮೇಳದ ಪ್ರಸಿದ್ಧ ಕಲಾವಿದ ಮನ್ವಿತ್ ನಿಡ್ಡೋಡಿ ಹಾಗೂ ಯಕ್ಷಗಾನ ಸೇವಾಕರ್ತ ಯೋಗೀಶ್ ಕರ್ಕೇರ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಸೇವಾಕರ್ತರಾದ ಸುನೀತಾ ಬೆಲ್ಚಡ, ಪುರುಷೋತ್ತಮ ಬೆಲ್ಚಡ, ಜಿಶಾಂತ್, ಸುಪ್ರಿತಾ, ಜಿತೇಶ್, ಜಿಯ ಹಾಗೂ ದಾಮೋದರ್ ಬೆಲ್ಚಡ ಉಪಸ್ಥಿತರಿದ್ದರು. ಇಡೀ ಕಾರ್ಯಕ್ರಮವನ್ನು ಕಮಲಾಕ್ಷ ಬೆಲ್ಚಡ ಅವರು ಅಚ್ಚುಕಟ್ಟಾಗಿ ನಿರೂಪಿಸಿ ವಂದಿಸಿದರು.

ಜಯ ಸಿ. ಪೂಜಾರಿ ಕೆಳಾರ್ಕಳ ಬೆಟ್ಟು



Related posts

ಉಡುಪಿ : ಸರ್ವಜ್ಞ ಪೀಠಾರೋಹಣ ಮಾಡಿದ ಶೀರೂರು ಶ್ರೀ

Mumbai News Desk

ಕಾಪು : ಧರ್ಮಪಾಲ ಯು ದೇವಾಡಿಗ ಮತ್ತು ಪರಿವಾರದವರ ಹರಕೆ ಮಾರಿ ಪೂಜೆ ಯಶಸ್ವಿ ಸಂಪನ್ನ

Mumbai News Desk

ಉಡುಪಿ: ಜಿಲ್ಲಾಡಳಿತದ ನಿಷೇಧಾಜ್ಞೆ ನಡುವೆಯೇ ಕಂಬಳ ಕ್ರೀಡಾಂಗಣಕ್ಕೆ ಗುದ್ದಲಿ ಪೂಜೆ

Mumbai News Desk

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ಮತ್ತು ನಟಿ ರೂಪ ಐಯ್ಯರ್ : ನವದುರ್ಗಾ ಲೇಖನ ಯಜ್ಞ ಸಂಕಲ್ಪ

Mumbai News Desk

ಮಧೂರು ಶ್ರೀ ಮದನಂತೇಶ್ವರ ದೇಗುಲ; ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ

Mumbai News Desk

ಕಾಪು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ತಾಲೂಕು ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ

Mumbai News Desk