July 22, 2026
Mumbai News Kannada
ತುಳುನಾಡು

ಬಜ್ಪೆಯಲ್ಲಿ ಮುಂಬೈಯ ಪುರುಷೋತ್ತಮ ಬೆಲ್ಚಡ ದಂಪತಿಗಳಿಂದ ಹರಕೆಯ ಯಕ್ಷಗಾನ ಸೇವೆ: ಕಲಾವಿದರುಗಳಾದ ಅರವಿಂದ ಬೋಳಾರ್ ಹಾಗೂ ಮನ್ವಿತ್ ನಿಡ್ಡೋಡಿ ಅವರಿಗೆ ಸನ್ಮಾನ







ಮುಂಬಯಿಯ ಘಾಟ್ಕೋಪರ್ ಆನಂದ ನಗರದ ನಿವಾಸಿಗಳಾದ ಪುರುಷೋತ್ತಮ ಮತ್ತು ಸುನಿತಾ ಸಾಲ್ಯಾನ್ ದಂಪತಿಗಳ ಹರಕೆಯ ಸೇವೆಯಾಗಿ ಏಪ್ರಿಲ್ 1, 2026 ರಂದು ಬಜ್ಪೆಯ ಮುರ ಸೌಹಾರ್ದ ನಗರದ ಅಂಗನವಾಡಿ ಭಂಡಾರ ಮನೆ ಬಳಿ ‘ಶ್ರೀ ಭಗವತಿ ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟವು ಅತ್ಯಂತ ಭಕ್ತಿ-ಸಂಭ್ರಮದಿಂದ ಜರುಗಿತು.


ಈ ಯಕ್ಷಗಾನದಲ್ಲಿ ತುಳುನಾಡ ಮಾಣಿಕ್ಯ, ಜನಜಾಗೃತಿ ನಟ ಅರವಿಂದ ಬೋಳಾರ್ ಅವರು ಅತಿಥಿ ಕಲಾವಿದರಾಗಿ ಆಗಮಿಸಿ ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು. ಕಾರ್ಯಕ್ರಮದ ಮಧ್ಯಂತರದಲ್ಲಿ ಕಲಾ ಸೇವೆಯನ್ನು ಗುರುತಿಸಿ ಅರವಿಂದ ಬೋಳಾರ್, ಪಾವಂಜೆ ಮೇಳದ ಪ್ರಸಿದ್ಧ ಕಲಾವಿದ ಮನ್ವಿತ್ ನಿಡ್ಡೋಡಿ ಹಾಗೂ ಯಕ್ಷಗಾನ ಸೇವಾಕರ್ತ ಯೋಗೀಶ್ ಕರ್ಕೇರ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಸೇವಾಕರ್ತರಾದ ಸುನೀತಾ ಬೆಲ್ಚಡ, ಪುರುಷೋತ್ತಮ ಬೆಲ್ಚಡ, ಜಿಶಾಂತ್, ಸುಪ್ರಿತಾ, ಜಿತೇಶ್, ಜಿಯ ಹಾಗೂ ದಾಮೋದರ್ ಬೆಲ್ಚಡ ಉಪಸ್ಥಿತರಿದ್ದರು. ಇಡೀ ಕಾರ್ಯಕ್ರಮವನ್ನು ಕಮಲಾಕ್ಷ ಬೆಲ್ಚಡ ಅವರು ಅಚ್ಚುಕಟ್ಟಾಗಿ ನಿರೂಪಿಸಿ ವಂದಿಸಿದರು.

ಜಯ ಸಿ. ಪೂಜಾರಿ ಕೆಳಾರ್ಕಳ ಬೆಟ್ಟು



Related posts

ಕಾಪು ಮಾರಿಯಮ್ಮ ನ ಅನುಗ್ರಹ, ಭಾರತ ಟಿ20 ತಂಡದ ನಾಯಕನಾದ ಸೂರ್ಯಕುಮಾರ ಯಾದವ್.

Mumbai News Desk

ಉಡುಪಿ : ಸರ್ವಜ್ಞ ಪೀಠಾರೋಹಣ ಮಾಡಿದ ಶೀರೂರು ಶ್ರೀ

Mumbai News Desk

ಪೊಲಿಪು ಕಾಂಚನ್ ಮೂಲಸ್ಥಾನ – ನಾಗರ ಪಂಚಮಿ ಆಚರಣೆ, ವಾರ್ಷಿಕ ಮಹಾಸಭೆ,ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ

Mumbai News Desk

ರೋಟರಿ ಕ್ಲಬ್ ಶಂಕರಪುರ ನೂತನ ಅಧ್ಯಕ್ಷರಾಗಿ ಮಾಲಿನಿ ಶೆಟ್ಟಿ ಇನ್ನಂಜೆ ಆಯ್ಕೆ ,

Mumbai News Desk

ಮುಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಭವ್ಯ ಸ್ವಾಗತ ಗೋಪುರ ನಿರ್ಮಾಣಕ್ಕೆ ಬಿಲ್ಲವ ಸಮಾಜದ ಸಿದ್ಧತೆ

Mumbai News Desk

ಮೂಲ್ಕಿ : ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಕೃತಿ ‘ನುಡಿಮುತ್ತು’ ಬಿಡುಗಡೆ ಕಾರ್ಯಕ್ರಮ

Mumbai News Desk