September 6, 2026
Mumbai News Kannada
ಮುಂಬಯಿ

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ : ಭಕ್ತಿ ಸಂಭ್ರಮದ   ಪಲ್ಲಕ್ಕಿ ಉತ್ಸವ, .





.

.

ಚಿತ್ರ ವರದಿ: ದಿನೇಶ್ ಕುಲಾಲ್ 

ಮುಂಬಯಿ: ಮಲಾಡ್ ಪೂರ್ವದ   ಕುರಾರ್ ವಿಲೇಜ್ ನ ಕೇತುವಾಡಿಯ ಜಾನ್ ಕಂಪೌಂಡ್‌ನಲ್ಲಿ ಭವ್ಯ ಸುಂದರ ಶ್ರೀದೇವಿ ಮಹಮ್ಮಾಯಿ ದೇವಾಸ್ಥಾನದಲ್ಲಿ
ದೇವಸ್ಥಾದ ಧರ್ಮದರ್ಶಿ ರವಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ   ಪಲ್ಲಕ್ಕಿ ಉತ್ಸವ,ಮಹಾಪೂಜೆ ಅನ್ನ ಸಂತರ್ಪಣೆ ಸಾವಿರಾರು ಭಕ್ತರ ಕೂಡಿಕೆಯಲ್ಲಿ ಭಕ್ತಿ ಸಂಭ್ರಮದೊಂದಿಗೆ ನಡೆಯಿತು.

      ಎ.10ರ ಶುಕ್ರವಾರ ಬೆಳಿಗ್ಗೆ  ಗಣಹೋಮ, ನವಕ ಪ್ರಧಾನ ಹೋಮ ,ಪಂಚಾಮೃತ ಅಭಿಷೇಕ, ನವಕ ಕಳಸ ಅಭಿಷೇಕ ,108 ಸೀಯಾಳ ಅಭಿಷೇಕ, ದೇವಿ ದರ್ಶನ,  ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ  ಆ ಬಳಿಕ ತೀರ್ಥ ಪ್ರಸಾದ ವಿತರಣೆ ನಡೆಯಿತು.

ಸಂಜೆ  ಕುಂಕುಮಾರ್ಚನೆ ಸೇವೆ ,  ಪಲ್ಲಕ್ಕಿ ಮೆರವಣಿ, ಭಜನಾ ಸಂಕೀರ್ತನೆ, ಯಕ್ಷಗಾನ ಜರಗಿತು.ದಿನೇಶ್ ಕೋಟ್ಯಾನ್ ಜೇರಿಮೇರಿ ಬಳಗದವರ ಸೇಕ್ಸೋಫೋನ್
ಮಾದನದೊಂದಿಗೆ ಕುರಾರ್ ಗ್ರಾಮದ ತಾನಾಜಿ ನಗರ, ಆದರ್ಶ ನಗರದ ಮೂಲಕ ಪಲ್ಲಕ್ಕಿ ಉತ್ಸವದ ಮೆರವಣಿಗೆ ಸಾಗಿಬಂತು.
ಎ.11ರ ಶನಿವಾರ ಮಧ್ಯಾಹ್ನ ಚಪ್ಪರ ಮುಹೂರ್ತ. ದೈವುಗಳ ಬಂಡಾರ ಇಳಿಸುವಿಕೆ, ಸಂಜೆ  ಸತ್ಯ ದೇವತೆ, ಕಲ್ಕುಡ, ಕಲ್ಲುರ್ಟಿ, ಗುಳಿಗ ದೇವಗಳಿಗೆ ನೇಮೋತ್ಸವ, ರಾತ್ರಿ ಅನ್ನ ಸಂತರ್ಪಣೆ ನಡೆಯಿತು.
 ಈ  ಪುಣ್ಯ ಕಾರ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ  ಭಕ್ತರು ಪಾಲ್ಗೊಂಡುದರು.

ಪಾಲ್ಗೊಂಡಿದ್ದ ಭಕ್ತಾದಿಗಳಿಗೆ, ದಾನಿಗಳಿಗೆ
ಶ್ರೀದೇವಿ  ಮಹಮ್ಮಾಯಿ ಹಾಗೂ ಧರ್ಮ ದೈವಗಳ  ಗಂಧ ಪ್ರಸಾದವನ್ನು ದೇವಸ್ಥಾನದ ಧರ್ಮದರ್ಶಿ ರವಿ ಸ್ವಾಮೀಜಿ ನೀಡಿದರು.

ಶ್ರೀ ದೇವಿ ಮಹಮ್ಮಾಯಿ ಸೇವಾ ಸಮಿತಿಯ ಗೌ.ಅಧ್ಯಕ್ಷ ಸಂತೋಷ್ ಕೆ. ಪೂಜಾರಿ, ಅಧ್ಯಕ್ಷ ಲಾಲ್ ಮನ್ ಯಾದವ್, ಕಾರ್ಯದರ್ಶಿ ಉದಯ ಬಿ ಸಾಲ್ಯಾನ್, ಕೋಶಾಧಿಕಾರಿ ಹರಿಶ್ಚಂದ್ರ ಆಚಾರ್ಯ, ಸಲಹೆಗಾರರಾದ ಸುರೇಂದ್ರ ಶೆಟ್ಟಿ ಹೊಸ್ಮರು , ಸುಧೀರ್ ಪುತ್ರನ್, ಸದಸ್ಯರಾದ ರಾಘು ಪೂಜಾರಿ,
ಮಾರ್ನಾಡು ಉಮೇಶ್ ಅಂಚನ್, ಶೇಖರ್ ಡಿ. ಅಮೀನ್ ,   ರಾಜು ಪೂಜಾರಿ, ಸನತ್ ಪೂಜಾರಿ ಕೆಲ್ಲಪುತ್ತಿಗೆ, ಪ್ರಕಾಶ್ ಸಾಲಿಯಾನ್ (ಅನ್ನು) ಚಂದ್ರಕಾಂತ್ ಸಾಲಿಯಾನ್, ಅಕ್ಷಯ ಪೂಜಾರಿ, ಅಮಿತ್ ಪೂಜಾರಿ, ಪ್ರಥಮ್ ಪೂಜಾರಿ, ನವೀನ್ ಸಾಲಿಯಾನ್, ಆದಿತ್ಯ ಅಂಚನ್, ಕೌಶಲ್ ಪೂಜಾರಿ, ಮನೋಜ್  ಓಜಾ, ಮತ್ತು ಮಹಿಳಾ ವಿಭಾಗದ ಸುನಂದ ಅಮೀನ್, ವಿಜಯಲಕ್ಷ್ಮಿ ಸಾಲಿಯಾನ್, ಆಶಾ ಆರ್ ಪೂಜಾರಿ, ಶೋಭಾ  ಪೂಜಾರಿ, ಆಶಾ ಅಂಚನ್, ಶಶಿ ಪೂಜಾರಿ, ಕುಸುಮ ಬಂಜನ್, ಸುಮತಿ ಆಚಾರ್ಯ, ವೇದಾವತಿ ಸಾಲಿಯನ್, ರತ್ನಾ ಪೂಜಾರಿ, ರೀನಾ ಯಾದವ್, ಯಶೋಧ ಸಾಲಿಯಾನ್, ಸುನೀತ ಕುಂದರ್, ಯುವ ಮಂಡಲದ ಸದಸ್ಯರು ಸಿ ಎ ಪ್ರೀತಿ ಪೂಜಾರಿ, ಡಾಕ್ಟರ್ ಪ್ರಿಯಲ್ ಯಾದವ್, ಉಷಾ ಕೋಟ್ಯಾನ್, ಅಮೃತ ಪೂಜಾರಿ, ದೀಕ್ಷಿತ ಸಾಲಿಯಾನ್, ಅಥರ್ವ ಅಂಚನ್, ದೀಕ್ಷಾ ಪೂಜಾರಿ, ಜ್ಯೋತಿ ಪೂಜಾರಿ, ಹರ್ಷ ಕುಂದರ್, ದಿಶಾ ಕರ್ಕೇರ, ಋತ್ವಿ ಕುಂದರ್, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು ಸಹಕಾರ ನೀಡಿದರು.



Related posts

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾಗಿ ಹರೀಶ್ ಜಿ ಅಮೀನ್ ಆಯ್ಕೆ

Mumbai News Desk

ಮುಂಬಯಿಯಲ್ಲಿ ಮೊಹಮ್ಮದ್ ಗೌಸ್‌ ನೇತೃತ್ವದ ಯಕ್ಷಗಾನ ಪ್ರವಾಸಕ್ಕೆ ಚಾಲನೆ

Mumbai News Desk

ಸಿ ಎ ಪರೀಕ್ಷೆ ಫಲಿತಾಂಶ 2024 ಅನುಷಾ ಎ ಕರ್ಕೇರ ಉತ್ತೀರ್ಣ

Mumbai News Desk

ಅಂಧೇರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ವತಿಯಿಂದ ಒಡಿಯೂರು ಶ್ರೀ ಗಳಿಗೆ ಗುರುವಂದನೆ

Mumbai News Desk

ಸಾರಸ್ವತ ವೈದಿಕ ಸೇವಾ ಪ್ರತಿಷ್ಟಾನ: ದ್ವಿತೀಯ ವಾರ್ಷಿಕ ಕಾರ್ಯಕ್ರಮ ಸಂಪನ್ನ .

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ -ಖೋಪರ್‌ಖೈರ್ನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ ದಶಮಾನೋತ್ಸವ ಆಚರಣೆ

Mumbai News Desk