.
ಕಳೆದ ವರ್ಷದಂತೆ ಈ ವರ್ಷವೂ ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ 1981-82 ರ ಸಾಲಿನ ವಿಧ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಇಂದು ಉಡುಪಿಯ ವುಡ್ ಲ್ಯಾಂಡ್ ಹೋಟೇಲಿನ ಸಭಾಂಗಣದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಶ್ರೀ ಕಿರಣ್ ದಬಾಡೆಯವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕರಾದ ಶ್ರೀ ಪ್ಯಾಟಿಯವರು, ಶ್ರೀ ಎಮ್.ಅರ್.ಹೆಗ್ಡೆಯವರು ಪತ್ನೀ ಸಮೇತರಾಗಿ ಉಪಸ್ಥಿತರಿದ್ದರು. ಗೌರವವನ್ನು ಸ್ವೀಕರಿಸಿದ ಪ್ರಾಧ್ಯಾಪಕರಾದ ಶ್ರೀಯುತ ಕಿರಣ್ ದಬಾಡೆಯವರು, ವ್ಯಕ್ತಿಗಳ ಸಂಬಂಧದ ಬಗ್ಗೆ ವಿವರಿಸಿ ಶುಭ ಹಾರೈಸಿದರು. ಉಪಸ್ಥಿತರಿದ್ದ ಡಾ|ಎಂ.ಆರ್.ಹೆಗಡೆಯವರು, ವ್ಯಕ್ತಿ ಸಮಾಜದಿಂದ ತುಂಬಾ ಪಡೆಯುತ್ತಾನೆ. ಸಮಾಜಕ್ಕೆ ತನ್ನಿಂದಾದ ಸಹಾಯ ಮಾಡುವುದು ಅವನ ಕರ್ತವ್ಯ ಎಂದರು. ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ವೆಂಕಟೇಶ್ ಪ್ಯಾಟಿಯವರು ಜೀವನದಲ್ಲಿ ಸಂತಸ ಪಡುವುದು ಮುಖ್ಯ. ಇವತ್ತಿನ ಸಭೆ ಅದನ್ನು ನೀಡಿದೆ.ಎಲ್ಲರ ಜೀವನವೂ ಸಂತಸವಾಗಿರಲೆಂದು ಹರಸಿದರು.
ಕಾರ್ಯಕ್ರಮ ಬೆಳಿಗ್ಗೆ 10 ಕ್ಕೆ ಸರಿಯಾಗಿ ಲಘು ಉಪಹಾರದೊಂದಿಗೆ ಆರಂಭವಾಯಿತು.
ಸಭಾ ಕಾರ್ಯಕ್ರಮದ ನಂತರ
ಜನಗಣಮನದೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮವನ್ನು ಉಡುಪಿಯ ಉದ್ಯಮಿ ಅಲೆವೂರು ಶ್ರೀ ನಾಗರಾಜ್ ಆಚಾರ್ಯ ರವರು ಸಂಯೋಜಿಸಿದರು. ಶ್ರೀ ಸುಧಾಕರ ಶೆಟ್ಟಿ ನಿವೃತ್ತ ಮುಖ್ಯ ಶಿಕ್ಷಕರು ಸ್ವಾಗತಿಸಿದರು. ಶ್ರೀ ಸಕು ಪಾಂಗಾಳರವರು ಕಾರ್ಯಕ್ರಮ ನಿರ್ವಹಿಸಿದರು.ಕೊನೆಯಲ್ಲಿ ಶ್ರೀ ಸೂರಪ್ಪ ಕುಂದರ್,ಮುಂಬಯಿ ಇವರು ಧನ್ಯವಾದವಿತ್ತರು.
ನಂತರ ಸ್ವಾದಿಷ್ಟಭರಿತ ವುಡ್ ಲ್ಯಾಂಡ್ ಹೋಟೇಲಿನ ಊಟದ ವ್ಯವಸ್ಥೆಯನ್ನು ಆಸ್ವಾದಿಸಿದರು.
ಕೊನೆಯಲ್ಲಿ ವಿಧ್ಯಾರ್ಥಿಗಳು ಉಡುಪಿಯ ಕುಕ್ಕಿಕಟ್ಟೆಯಲ್ಲಿರುವ
ಶ್ರೀ ಕೃಷ್ಣ ಬಾಲನಿಕೇತನ ಕ್ಕೆ ಭೇಟಿ ದೇಣಿಗೆಯನ್ನು ನೀಡಿದರು.





