
ವರದಿ : ಉಮೇಶ್ ಕೆ. ಅಂಚನ್
ವಸಯಿ, ಸೆ.4:ಬಿಲ್ಲವರ ಅಸೋಸಿಯೇಶನ್ ಇದರ ವಸಯಿ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತ್ಯೋತ್ಸವವನ್ನು ವಸಯಿ ಪಶ್ಚಿಮದ ಶ್ರೀ ಸ್ವಾಮಿನಾರಾಯಣ ಮಂದಿರದ ಸಭಾಗ್ರಹದಲ್ಲಿ ಆದಿತ್ಯವಾರ ಅ.30ರಂದು ವಿಜ್ರಂಭಣೆಯಿಂದ ಆಚರಿಸಲಾಯಿತು.

ಆರಂಭದಲ್ಲಿ ಕಚೇರಿಯಲ್ಲಿ ಗುರುದೇವರಿಗೆ ಅರ್ಚನೆ, ಅಭಿಷೇಕ ನಡೆಯಿತು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ಮೋಹನ್ ಸಿ.ಕೋಟ್ಯಾನ್, ಸ್ಥಳೀಯ ಕಚೇರಿಯ ಗೌರವಕಾರ್ಯಾಧ್ಯಕ್ಷ ಕೆ.ಬಿ.ಪೂಜಾರಿ, ಕಾರ್ಯಾಧ್ಯಕ್ಷ ಕರುಣಾಕರ ಜಿ.ಅಮೀನ್, ಉಪ ಕಾರ್ಯಾಧ್ಯಕ್ಷರುಗಳಾದ ದಯಾನಂದ ಪೂಜಾರಿ ಮತ್ತು ರವೀಂದ್ರ .ಪಿ , ಕಾರ್ಯದರ್ಶಿ ಚಂದ್ರಶೇಖರ ಎನ್.ಸಾಲ್ಯಾನ್, ಕೋಶಾಧಿಕಾರಿ ನಳಿನಿ ಪೂಜಾರಿ, ಜೊತೆ ಕಾರ್ಯದರ್ಶಿ ಜಗನ್ನಾಥ್ ಅಂಚನ್ , ಜೊತೆ ಕೋಶಾಧಿಕಾರಿ ಅಂಬರೀಷ್ ಪೂಜಾರಿ ಹಾಗೂ ಸಾರ್ವಜನಿಕ ಶನೀಶ್ವರ ಸೇವಾ ಸಮಿತಿ ವಸಯಿಯ ಅಧ್ಯಕ್ಷ ಕೆ.ಟಿ.ಬಂಗೇರ ಮೊದಲಾದವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಓಂ ನಮೋ ನಾರಾಯಣಾಯ ಶಿವಾಯ ಜಪ ಯಜ್ಞ, ಭಜನೆ, ಮಹಿಳಾ ವಿಭಾಗದ ಸದಸ್ಯೆಯರಿಂದ ಕುಣಿತ ಭಜನೆ, ಮಂಗಳಾರತಿ ನಡೆದು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಭದ್ರಗಿರಿ ಅಚ್ಯುತದಾಸರ ‘ನಾರಾಯಣ ಗುರು’ ಹರಿಕಥೆಯ ಧ್ವನಿಸುರುಳಿಯನ್ನು ನೆರೆದ ಜನಸ್ತೋಮದೆದುರು ಬಿತ್ತರಿಸಲಾಯಿತು. ನಾರಾಯಣ ಗುರುಗಳ ಭಾವಚಿತ್ರ ಹಾಗೂ ಸಂದೇಶಗಳನ್ನೊಳಗೊಂಡ ಬ್ಯಾನರುಗಳನ್ನು ಪ್ರದರ್ಶಿಸಲಾಗಿತ್ತು.

ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಕಚೇರಿಯ ಜೊತೆ ಕಾರ್ಯದರ್ಶಿ ಕೇಶವ್ ಕೋಟ್ಯಾನ್, ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಅಂಚನ್, ಡಾ.ಶೋಭಾ ಕೋಟ್ಯಾನ್, ವಿನೀತ್ ಕೆಮಿಕಲ್ಸ್ ನ ಮಾಲೀಕರಾದ ವಿಶ್ವನಾಥ ಶೆಟ್ಟಿ ಮಟ್ಟು, ವಸಯಿ ಕರ್ನಾಟಕ ಸಂಘದ ಅಧ್ಯಕ್ಷ ಶಂಕರ್ ಆಳ್ವ ಹಾಗೂ ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸ್ಥಳೀಯ ಕಚೇರಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಗುರು ಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಕಚೇರಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.




