September 6, 2026
Mumbai News Kannada
ಸುದ್ದಿ

ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ : ಮೂವರು ದರೋಡೆಕೋರರ ಬಂಧನ






ಮಂಗಳೂರಿನ ಕೋಟೆಕಾರ್ ಬ್ಯಾಂಕಿನಲ್ಲಿ ಸುಮಾರು 12 ಕೋಟಿಗೂ ಅಧಿಕ ಮೌಲ್ಯದ ಹಣ ಹಾಗೂ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಮಧುರೈ ನಲ್ಲಿ ಮೂವರು ದರೋಡೆಕೋರರನ್ನು ಬಂಧಿಸಿದ್ದು ಬಂದಿತರಿಂದ ಪಿಎಟ್ ಕಾರು ಸಹಿತ ಎರಡು ಚೀಲದಲ್ಲಿದ್ದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಮುರುಗಂಡಿ ದೇವರ್, ಪ್ರಕಾಶ್ ಆಲಿಯಾಸ್ ಜೋಶ್ವ, ಮನಿವಣ್ಣನ್ ಬಂಧಿತ ಆರೋಪಿಗಳಾಗಿದ್ದಾರೆ.
ಇದೆ ವೇಳೆ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಅವರು ಮುಂಬೈ ಹಾಗೂ ತಮಿಳುನಾಡು ಮೂಲಕ ಬಂಧನ ಮಾಡಲಾಗಿದೆ. ಆರೋಪಿಗಳು ದರೋಡೆಗೆಂದೇ ಮಂಗಳೂರಿಗೆ ಬಂದಿದ್ದರು. ಮುಂಬೈಯಿಂದ ಮಾಹಿತಿ ಕಲೆಹಾಕಿ ತಮಿಳುನಾಡಿಗೆ ತೆರಳಿ ಬಂಧನ ಮಾಡಿದ್ದೇವೆ. ರಾಜ್ಯದ ಗುಪ್ತಚರ ಇಲಾಖೆಯ ಸಹಾಯದಿಂದ ಡಕಾಯಿತರ ಚಲನ ವಲನಗಳ ಮಾಹಿತಿ ಲಭ್ಯವಾಯಿತು. ಮೂವರು ಆರೋಪಿಗಳು ತಮಿಳುನಾಡು ಮೂಲದವರಾದರೂ, ಮುಂಬೈ ಮೂಲದ ಗ್ಯಾಂಗಿಗೆ ಸೇರಿಕೊಂಡಿದ್ದರು. ನಾವು ಮುಂಬೈಗೆ ತನಿಖಾ ತಂಡ ಕಳಿಸಿ ಮಾಹಿತಿ ಕಲೆಹಾಕಿದ್ದೆವು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.



Related posts

ಹೆಜಮಾಡಿ : ಸಾವಿತ್ರಿ ಡಿ ಸಾಲ್ಯಾನ್ ನಿಧನ

Mumbai News Desk

ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ ಕುಮಾರಿ ಶ್ರೇಯಾ ಪಿ ಕುಲಾಲ್ ರವರಿಗೆ 90%_ಅಂಕ.

Mumbai News Desk

ರೈ ಸಮಿತಿ ಎಜುಕೇಷನಲ್ ಟ್ರಸ್ಟ್‌ನ ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲ್‌ಗೆ ಕಟೀಲು ಅನಂತ ಅಸ್ರಣ್ಣರ ಭೇಟಿ

Mumbai News Desk

ರಾಜ್ಯವ್ಯಾಪಿ ಕಂಬಳಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ :ಯಾವ ಮೂಲೆಯಲ್ಲಾದ್ರೂ ಕಂಬಳ ನಡೆಸಲು ಆದೇಶ

Mumbai News Desk

ದಿಶಾ ಸಾಲಿಯನ್ ಪ್ರಕರಣ: ಎಫ್‌ಐಆರ್ ದಾಖಲಿಸದ ಮುಂಬೈ ಪೊಲೀಸರನ್ನು ತೀವ್ರವಾಗಿ ಪ್ರಶ್ನಿಸಿದ ಬಾಂಬೆ ಹೈಕೋರ್ಟ್

Mumbai News Desk

ಕರ್ನಾಟಕ ಸಂಘ ಪನ್ವೆಲ್ ರಾಜ್ಯೋತ್ಸವ ದಿನಾಚರಣೆ .

Mumbai News Desk