27.1 C
Mumbai
July 23, 2026
Mumbai News Kannada
ಪ್ರಕಟಣೆ

ಬಿಲ್ಲವ ಸೇವಾ ಸಂಘ ಕುಂದಾಪುರ(ರಿ) ಮುಂಬಯಿ : ಫೆ. 16 ರಂದು “ಅರಸಿನ ಕುಂಕುಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ”







ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಉಪ ಸಮಿತಿಗಳಲ್ಲಿ ಒಂದಾದ ಮಹಿಳಾ ಸಂಪದದ ಆಯೋಜನೆಯಲ್ಲಿ ದಿನಾಂಕ 16.02.2025 ರ ಅಪರಾಹ್ನ 3.30ಕ್ಕೆ ಸರಿಯಾಗಿ ವಸಂತ್ ರಾವ್ ನಾಯಕ್ ಹಾಲ್, ಶಿವಕ್ರಪಾ ಪ್ರಿಮೈಸೈಸ್, ವಾಮನ ಹರಿಪೇಟೆ ಸನ್ಸ್ ಮೇಲ್ಗಡೆ, ದಾದಾ ಪಾಟೀಲ ವಾಡಿ, ಥಾಣೆ(ಪಶ್ಚಿಮ) (ರೈಲ್ವೆ ನಿಲ್ದಾಣದ ಸಮೀಪ) ಇಲ್ಲಿ ʻಅರಸಿನ ಕುಂಕುಮ ಹಾಗೂ ಸಾಂಸ್ಕೃತಿಕʼ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂಬಯಿ ಮಹಾನಗರದಲ್ಲಿ ಹಲವಾರು ವರ್ಷಗಳಿಂದ ಎಲೆಯ ಮರೆಯ ಕಾಯಿಯಂತೆ ತನ್ನ ಸದಸ್ಯ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸಮಾಜ ಸೇವೆ ಮಾಡುತ್ತ ಬಂದಿರುವ ಧೀಮಂತ ಸಂಸ್ಥೆ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ.
ಸಂಘದ ಅಧ್ಯಕ್ಷರಾದ ಮಾನ್ಯ ಸಿ ಎ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಥಾಣೆಯ ಮಾಜಿ ಮಹಾಪೌರೆ ಶ್ರೀಮತಿ ಮೀನಾಕ್ಷಿ ರಾಜೇಂದ್ರ ಶಿಂಧೆ(ಪೂಜಾರಿ), ಕಾರ್ಯಕ್ರಮದ ಉದ್ಘಾಟಕರಾಗಿ ಲೇಖಕಿ, ಸಮಾಜ ಸೇವಕಿ ಶ್ರೀಮತಿ ಗುಲಾಬಿ ಬಾಬು ಪೂಜಾರಿಯವರು ಹಾಗೂ ಗೌರವ ಅತಿಥಿಗಳಾಗಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ, ಮುಂಬಯಿ ಮಹಿಳಾ ವಿಭಾಗ ಇದರ ಕಾರ್ಯಾಧ್ಯಕ್ಷೆ ಡಾ. ಸುದೀಪಾ ಮಹಾಬಲ ಕುಂದರ್ ಮತ್ತು ಸಮಾಜ ಸೇವಕಿಯರಾದ ಶ್ರೀಮತಿ ಕಂಚನ ಕಿಶೋರ್ ಶಾ, ಶ್ರೀಮತಿ ಸುಜಾತಾ ವಿಶ್ವನಾಥ ಪೂಜಾರಿ, ಶ್ರೀಮತಿ ಕವಿತಾ ಅಶೋಕ ಪೂಜಾರಿ ಉಪಸ್ಥಿತರಿರುವರು.

ಕಾರ್ಯಕ್ರಮದ ಮಧ್ಯಂತರದಲ್ಲಿ ಸಮಾಜದ ಯುವ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನ ನೀಡಿ ಗೌರವಿಸಲಾಗುವುದು. ಮನೋರಂಜನೆಯ ಅಂಗವಾಗಿ ಸದಸ್ಯರು ಮತ್ತು ಮಕ್ಕಳಿಂದ ಗಾನ, ನ್ರತ್ಯ ವೈಭವ ಜರಗಲಿದೆ. ಹಾಗೂ ನಗರದ ಖ್ಯಾತ ರಂಗ ಕಲಾವಿದೆಯರಾದ ಕುಮಾರಿ ಅಂಕಿತಾ ನಾಯಕ್ ಮತ್ತು ಕುಮಾರಿ ಸೌಜನ್ಯ ಬಿಲ್ಲವ ತಂಡದವರಿಂದ ಪೌರಾಣಿಕ ಯಕ್ಷಗಾನ ಆಖ್ಯಾನ “ಜಾಂಬವತಿ ಕಲ್ಯಾಣ” ಎಂಬ ತುಣುಕು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಮಾಜ ಬಾಂಧವರಾದ ತಾವೆಲ್ಲರೂ ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಬೇಕೆಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಸಿ ಪೂಜಾರಿಯವರು ಪ್ರಕಟಣೆಯಲ್ಲಿ ತಿಳಿಸಿದರು. ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.



Related posts

ಜ.24 ; ಬಂಟ್ಸ್ ಫೋರಮ್ ಸದಸ್ಯರಿಂದ ‘ಪನರೆ ಪೋವೊಡ್ಚಿ’ ಮತ್ತು ‘ಸಂಸಾರದ SOME ಸಾರ’ ತುಳು ನಾಟಕ ಪ್ರದರ್ಶನ.

Mumbai News Desk

  ಜ 20.   ಬೋಂಬೆ ಬಂಟ್ಸ್  ಎಸೋಸಿಯೇಶನ್  ವತಿಯಿಂದ ಮಾಜಿ  ಅಧ್ಯಕ್ಷರಾದ ಜಯ ಎನ್ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ

Mumbai News Desk

   ನ. 19 ;   ಕುಲಾಲ ಸಂಘ ಮುಂಬಯಿ  93ನೇ ವಾರ್ಷಿಕ ಮಹಾಸಭೆ.

Mumbai News Desk

ಬೊರಿವಿಲಿ ಶ್ರೀ ಮಹೀಷಮರ್ದಿನಿ ದೇವಸ್ಥಾನ ದಲ್ಲಿ ಶ್ರೀ ರಾಮ ಪ್ರತಿಷ್ಠಾ ಮಹೋತ್ಸವ

Mumbai News Desk

ಮೇ 12 :ರವಿನಾಥ್ ಶೆಟ್ಟಿ ತೋನ್ಸೆ ನೇತೃತ್ವದಲ್ಲಿ ಗುಜರಾತ್ ಭರೂಚ್ ಶ್ರೀ ಗುಮನ್ ದೇವ್ ಮಂದಿರದಲ್ಲಿ ಶ್ರೀ ಬಾಲಾಜಿ ವೆಂಕಟೇಶ್ವರ ಸ್ವಾಮಿ ಪ್ರಾಣಪ್ರತಿಷ್ಠೆ , ಬ್ರಹ್ಮಕಲಶೋತ್ಸವ , ಶ್ರೀನಿವಾಸ ಕಲ್ಯಾಣ. 

Mumbai News Desk

ಶ್ರೀ ರಜಕ ಸಂಘ ಮುಂಬಯಿ, ಜ.6 ರಂದು ಸಾಮೂಹಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ

Mumbai News Desk