July 23, 2026
Mumbai News Kannada
ಮುಂಬಯಿ

ಕರ್ನಿರೆ ಗಂಗಾಧರ್ ಅಮೀನ್ ಅವರ “ಕೊಂಕಣ್ ಸ್ವಾದ್” ಗೆ ಟೈಮ್ಸ್ ಪುಡ್ ಪ್ರಶಸ್ತಿ.







ಮುಂಬೈಯ ಪ್ರಸಿದ್ಧ ಸಮಾಜಸೇವಕ, ಬಿಲ್ಲವ ಚೇಂಬರ್ಸ್ ಆಫ್  ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ನಿರ್ದೇಶಕ ಕರ್ನಿರೆ ಗಂಗಾಧರ್ ಅಮೀನ್ ಅವರು 25 ವರ್ಷಗಳ ಹಿಂದೆ ಪ್ರಾರಂಭಿಸಿದ ಕೊಂಕಣ್ ಸ್ವಾದ್  (ಗೋಮಂತಕ್ ಸೀ ಫುಡ್, (Gomantak sea food )ಹೊಟೇಲಿಗೆ 2025 ರ ಟೈಮ್ಸ್ ಫುಡ್ & ನೈಟ್‌ಲೈಫ್ ಪ್ರಶಸ್ತಿ ದೊರಕಿದೆ. 

ಮಾ 29 ರಂದು ಅಂದೇರಿ ಪೂರ್ವದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಐಟಿಸಿ ಮರಾಠ ಹೋಟೆಲ್  ಸಭಾಂಗಣದಲ್ಲಿ ಟೈಮ್ಸ್ ಸಮೂಹದವರು ಕೊಡಮಾಡಿದ ಈ ಪ್ರಶಸ್ತಿಯನ್ನು ಕೊಂಕಣ್ ಸ್ವಾದ್ ಸಮೂಹ ಹೋಟೇಲಿನ ಕರ್ನಿರೆ  ಗಂಗಾಧರ್ ಎನ್ ಅಮೀನ್, ಕರಣ್ ಶೆಟ್ಟಿ, ಮತ್ತು ಐಶ್ವರ್ಯ ಗಂಗಾಧರ್ ಅಮೀನ್ ಸ್ವೀಕರಿಸಿದರು. 

ಕೊಂಕಣ್ ಸ್ವಾದ್ ಹೋಟೇಲು ಮುಂಬಯಿಯ ಅತ್ಯುತ್ತಮ ಸಮುದ್ರಾಹಾರ (ಸೀ ಫುಡ್) ಕ್ಯಾಶುಯಲ್ ಡೈನಿಂಗ್ ಮತ್ತು  ಅತ್ಯುತ್ತಮ ಕರಾವಳಿ ಕ್ಯಾಶುಯಲ್ ಡೈನಿಂಗ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಹೆಮ್ಮೆ ತಂದಿದ್ದಾರೆ.

ಅತ್ಯುತ್ತಮ ಸಮುದ್ರಾಹಾರವನ್ನು ಪೂರೈಸಲು ಮತ್ತು ಕರಾವಳಿ ಪಾಕಪದ್ಧತಿಯನ್ನು ಉತ್ತೇಜಿಸಲು ಅವರ  25 ವರ್ಷಗಳ ಕಠಿಣ ಪರಿಶ್ರಮ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಂದುಕೊಟ್ಟಿದೆ.

  ಗೊರೆಗಾಂವ್ ಪಶ್ಚಿಮದ ಲಿಂಕ್ ರೋಡ್ ನಲ್ಲಿ ಪ್ರಾರಂಭಗೊಂಡ ಹೋಟೆಲ್ ಇದೀಗ ಅಂಧೇರಿ ಪೂರ್ವದ ಜೋಗೇಶ್ವರಿ ಪಶ್ಚಿಮದ ಲಿಂಕ್ ರೋಡಿನಲ್ಲಿಯೂ ಆರಂಭವಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.



Related posts

ಮುಂಬಯಿ : ಹೋಟೆಲ್ ಉದ್ಯಮಿಗೆ ಕೊಲೆ ಬೆದರಿಕೆ ಗ್ಯಾಂಗ್ ಸ್ಟರ್ ಡಿ. ಕೆ ರಾವ್ ಬಂಧನ

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ – 170 ನೇ ಗುರು ಜಯಂತಿ ಆಚರಣೆ – 2024

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ ರಾತ್ರಿ ಕಾಲೇಜಿನ ದಶಮಾನೋತ್ಸವ ಸಂಭ್ರಮ

Mumbai News Desk

ಮದರ್ ಇಂಡಿಯಾ ದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ನಿರಂತರವಾಗಿರಲಿ -ಸುರೇಂದ್ರ ಪೂಜಾರಿ ಮುಂಬೈ :

Mumbai News Desk

ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರುಇವರ ಸಹಯೋಗದಲ್ಲಿ” ಆಟಿದ ಪೊರ್ಲ ಪೊಲಬು”

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬಯಿ ವತಿಯಿಂದ ಡಾ. ಹರಿಶ್ಚಂದ್ರ ಸಾಲ್ಯಾನರಿಗೆ ಗೌರವಾರ್ಪಣೆ.

Mumbai News Desk