32 C
Mumbai
April 24, 2026
Mumbai News Kannada
ಮುಂಬಯಿ

ಕರ್ನಿರೆ ಗಂಗಾಧರ್ ಅಮೀನ್ ಅವರ “ಕೊಂಕಣ್ ಸ್ವಾದ್” ಗೆ ಟೈಮ್ಸ್ ಪುಡ್ ಪ್ರಶಸ್ತಿ.





ಮುಂಬೈಯ ಪ್ರಸಿದ್ಧ ಸಮಾಜಸೇವಕ, ಬಿಲ್ಲವ ಚೇಂಬರ್ಸ್ ಆಫ್  ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ನಿರ್ದೇಶಕ ಕರ್ನಿರೆ ಗಂಗಾಧರ್ ಅಮೀನ್ ಅವರು 25 ವರ್ಷಗಳ ಹಿಂದೆ ಪ್ರಾರಂಭಿಸಿದ ಕೊಂಕಣ್ ಸ್ವಾದ್  (ಗೋಮಂತಕ್ ಸೀ ಫುಡ್, (Gomantak sea food )ಹೊಟೇಲಿಗೆ 2025 ರ ಟೈಮ್ಸ್ ಫುಡ್ & ನೈಟ್‌ಲೈಫ್ ಪ್ರಶಸ್ತಿ ದೊರಕಿದೆ. 

ಮಾ 29 ರಂದು ಅಂದೇರಿ ಪೂರ್ವದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಐಟಿಸಿ ಮರಾಠ ಹೋಟೆಲ್  ಸಭಾಂಗಣದಲ್ಲಿ ಟೈಮ್ಸ್ ಸಮೂಹದವರು ಕೊಡಮಾಡಿದ ಈ ಪ್ರಶಸ್ತಿಯನ್ನು ಕೊಂಕಣ್ ಸ್ವಾದ್ ಸಮೂಹ ಹೋಟೇಲಿನ ಕರ್ನಿರೆ  ಗಂಗಾಧರ್ ಎನ್ ಅಮೀನ್, ಕರಣ್ ಶೆಟ್ಟಿ, ಮತ್ತು ಐಶ್ವರ್ಯ ಗಂಗಾಧರ್ ಅಮೀನ್ ಸ್ವೀಕರಿಸಿದರು. 

ಕೊಂಕಣ್ ಸ್ವಾದ್ ಹೋಟೇಲು ಮುಂಬಯಿಯ ಅತ್ಯುತ್ತಮ ಸಮುದ್ರಾಹಾರ (ಸೀ ಫುಡ್) ಕ್ಯಾಶುಯಲ್ ಡೈನಿಂಗ್ ಮತ್ತು  ಅತ್ಯುತ್ತಮ ಕರಾವಳಿ ಕ್ಯಾಶುಯಲ್ ಡೈನಿಂಗ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಹೆಮ್ಮೆ ತಂದಿದ್ದಾರೆ.

ಅತ್ಯುತ್ತಮ ಸಮುದ್ರಾಹಾರವನ್ನು ಪೂರೈಸಲು ಮತ್ತು ಕರಾವಳಿ ಪಾಕಪದ್ಧತಿಯನ್ನು ಉತ್ತೇಜಿಸಲು ಅವರ  25 ವರ್ಷಗಳ ಕಠಿಣ ಪರಿಶ್ರಮ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಂದುಕೊಟ್ಟಿದೆ.

  ಗೊರೆಗಾಂವ್ ಪಶ್ಚಿಮದ ಲಿಂಕ್ ರೋಡ್ ನಲ್ಲಿ ಪ್ರಾರಂಭಗೊಂಡ ಹೋಟೆಲ್ ಇದೀಗ ಅಂಧೇರಿ ಪೂರ್ವದ ಜೋಗೇಶ್ವರಿ ಪಶ್ಚಿಮದ ಲಿಂಕ್ ರೋಡಿನಲ್ಲಿಯೂ ಆರಂಭವಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.



Related posts

ಕನ್ನಡ ಸಂಘ ಸಯನ್ : ಯಶಸ್ವಿಯಾಗಿ ಜರಗಿದ ಅಟಿಡೊಂಜಿ ದಿನ, ಸಂಘವನ್ನು ಒಗ್ಗಟ್ಟಿನಿಂದ ಮುನ್ನಡೆಸೋಣ – ಎಂ ಜೆ ಪ್ರವೀಣ್ ಭಟ್

Mumbai News Desk

ಬಂಟರ ಸಂಘ ಮುಂಬಯಿ ವಸಾಯಿ ದಹಾಣ ಪ್ರಾದೇಶಿಕ ಸಮಿತಿ ಯಿಂದ.ಸಮಾಜದ ಅರ್ಥಿಕವಾಗಿ ಹಿಂದುಳಿದ ಪರಿವಾರ ಮತ್ತು ವಿದ್ಯಾರ್ಥಿಗಳೀಗೆ 2025-26 ಸಾಲಿನ ಆರ್ಥಿಕ ಸಹಾಯ ವಿತರಣೆ.

Mumbai News Desk

ಚಿಣ್ಣರಬಿಂಬ ವಿಕ್ರೋಲಿ ಶಿಬಿರದ ಮಕ್ಕಳ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಖುಷಿ ರವಿ ಶೆಟ್ಟಿ ಗೆ ಶೇ 83 ಅಂಕ.

Mumbai News Desk

ಡೊಂಬಿವಲಿ ಹೋಟೆಲ್ ಅಸೋಸಿಯೇಷನ್ ನ ಮುಂದಾಳುತ್ವದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಶೋಭಾಯಾತ್ರೆಗೆ ಅದ್ದೂರಿ ಚಾಲನೆ

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಯಕ್ಷಗಾನ ತಾಳಮದ್ದಳೆ ಸುಧನ್ವ ಮೋಕ್ಷ

Mumbai News Desk