September 6, 2026
Mumbai News Kannada
ಸುದ್ದಿ

ಮುಂಬಯಿ : ಕರ್ನಾಟಕ ಬ್ಯಾಂಕ್ ನ ಹಿರಿಯ ಸಿಬ್ಬಂದಿ ನಾರಾಯಣ ಮೊಗವೀರ ಅವರ ಬೀಳ್ಕೊಡುವ ಸಮಾರಂಭ





ಮುಂಬಯಿ : ಕರ್ನಾಟಕ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಕಳೆದ 40 ವರ್ಷಗಳಿಂದ ಸೇವೆ ಮಾಡುತ್ತಿದ್ದ ಬ್ಯಾಂಕಿನ ಹಿರಿಯ ಸಿಬ್ಬಂದಿ ನಾರಾಯಣ ಮೊಗವೀರ ಅವರು ಮೇ 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ಬ್ಯಾಂಕಿನ ಕಾಂದಿವಲಿ ಪಶ್ಚಿಮ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರಿಗೆ ಭ್ಯಾಂಕಿನ ಸಿಬ್ಬಂದಿಗಳು ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಿದ್ದು ಇದಕ್ಕೆ ಮೊದಲು ಬೊರಿವಲಿ ಪಶ್ಚಿಮ ಶಾಖೆಯಲ್ಲಿ ದೀರ್ಘ ಕಾಲ ಸೇವೆ ಮಾಡಿದ ನಾರಾಯಣ ಮೊಗವೀರ ತನ್ನ ಸೇವಾ ಅವಧಿಯಲ್ಲಿ ಸಹಕರಿಸಿದ ಹಾಗೂ ಪ್ರೋತ್ಸಾಹ ನೀಡಿದ ಎಲ್ಲಾ ಹಿರಿ ಹಿರಿಯ ಸಿಬ್ಬಂದಿ ಹಾಗೂ ಗ್ರಾಹಕರಿಗೆ ಅಬಾರ ವ್ಯಕ್ತಪಡಿಸಿದರು.

ಕರ್ನಾಟಕ ಬ್ಯಾಂಕಿನ ರೀಜನಲ್ ಕಚೇರಿಯ ಮುಖ್ಯ ಪ್ರಬಂಧಕ ಸರಿನ್ ಹರಿ, ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಗೌರವ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಶಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದು ನಿವೃತ್ತಿ ಜೀವನ ನಡೆಸಲಿರುವ ನಾರಾಯಣ ಮೊಗವೀರ ಅವರಿಗೆ ಈ ಸಂದರ್ಭದಲ್ಲಿ ಶುಭ ಹಾರೈಸಿದರು.



Related posts

ಅಂಕ್ಲೇಶ್ವರದಲ್ಲಿ ಭಾರತ್ ಬ್ಯಾಂಕ್‌ನ 47ನೇ ಸಂಸ್ಥಾಪನಾ ದಿನಾಚರಣೆ: ಯಶಸ್ಸಿನ ಮೈಲಿಗಲ್ಲು

Mumbai News Desk

ದಿಶಾ ಸಾಲ್ಯಾನ್ ಅವರ ತಂದೆಯ ಅರ್ಜಿಯನ್ನು ಸೂಕ್ತ ಪೀಠದ ಮುಂದೆ ಇಡಲು ಬಾಂಬೆ ಹೈಕೋರ್ಟ್ ನಿರ್ದೇಶನ

Mumbai News Desk

ಮಹಾರಾಷ್ಟ್ರ ರಾಜ್ಯಪಾಲರು ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ

Mumbai News Desk

ಆಂಧ್ರಪ್ರದೇಶ : ಶ್ರೀಕಾಕುಲಂ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಮಹಿಳೆಯರು ಮಕ್ಕಳು ಸೇರಿ 9 ಸಾವು

Mumbai News Desk

ಕೋಡಿಕಲ್ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್ ಆರೋಗ್ಯ ತಪಾಸಣಾ ರಕ್ತದಾನ ಶಿಬಿರ 

Mumbai News Desk

ಶ್ರೀ ಶಂಕರಪುರ ಕ್ಷೇತ್ರದಲ್ಲಿ ಭಕ್ತರ ದುಃಖ ,ನೋವು ಕಷ್ಟಗಳನ್ನು ಸ್ವೀಕರಿಸುವ ಪಾನ ಪ್ರಿಯ ಕಾಲಭೈರವ ಸ್ವಾಮಿ.(ಮೇ 19ರಂದು ನಡೆದ ಘಟನೆಯಾದರೂ ಏನು )

Mumbai News Desk