30.9 C
Mumbai
June 8, 2026
Mumbai News Kannada
ತುಳುನಾಡು

ಮುಲ್ಕಿ ಸುರಭಿ ಎಲೆಕ್ಟ್ರಾನಿಕ್ಸ್ 153 ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಸಮವಸ್ತ್ರ ಹೊಲಿಗೆಯ ಮೊತ್ತ ವಿತರಣೆ





ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ : ಡಾ| ಪುನರೂರು


ಮೂಲ್ಕಿ ಸಮಾಜ ಸೇವೆಯ ಜತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವ ಕೆಲಸ ನಡೆದರೆ ಒಂದು ಕುಟುಂಬದ ಆಂತರಿಕ ಶಕ್ತಿ ಬದಲಾಗುವ ಮೂಲಕ ದೇಶವೇ ಅಭಿವೃದ್ಧಿ ಹೊಂದುವುದು. ಒಂದು ಮನೆಯ ಮೂಲಕ ನಡೆಯುತ್ತದೆ. ಸಮಾಜದಿಂದ ಪಡೆದುದನ್ನು ಮತ್ತೆ ಸಮಾಜಕ್ಕೆ ಕೊಡುವ ಪ್ರಯತ್ನ ಎಲ್ಲ ಸಂಸ್ಥೆಗಳ ಮೂಲಕ ನಡೆಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕರ್ಮಯೋಗಿ ಡಾ | ಹರಿಕೃಷ್ಣ ಪುನರೂರು ಹೇಳಿದರು.
ಅವರು ಮೂಲ್ಕಿಯ ಸುರಭಿ ಇಲೆಕ್ಟ್ರಾನಿಕ್ಸ್‌ ಆ್ಯಂಡ್ ಫರ್ನಿಚರ್ ಸಂಸ್ಥೆಯ ಮೂಲಕ ಮೂಲ್ಕಿ ಹಾಗೂ ಹೆಜಮಾಡಿ ಪರಿಸರದ ವಿವಿಧ ಕನ್ನಡ ಮಾಧ್ಯಮ ಶಾಲೆಗಳ 153 ವಿದ್ಯಾರ್ಥಿಗಳಿಗೆ ಅವರ ಶಾಲಾ ಶುಲ್ಕ ಮತ್ತು ಅವರ ಸಮವಸ್ತ್ರ ಹೊಲಿಗೆಯ ಮೊತ್ತವನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ವಿದ್ಯಾರ್ಥಿಗಳು ಮೊಬೈಲ್ ಮೂಲಕ ಆಗಬಹುದಾದ ಆವಾಂತರಗಳನ್ನು ಮನದಲ್ಲಿಟ್ಟುಕೊಂಡು ಮಿತವಾಗಿ ಬಳಕೆ ಮಾಡುವುದು ಕಲಿಯಬೇಕು ಹಾಗೂ ಶಿಕ್ಷಣದ ಸೇವೆಗೆ ಮುಂದಾಗುವ ಕಾರ್ಯಕ್ರಮಗಳಿಗೆ ದೇವರ ಆಶೀರ್ವಾದ ಸದಾ ಇದೆ ಎಂದು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಮೂಲ್ಕಿ ಚರ್ಚ್‌ ಧರ್ಮಗುರು ಧಾ | ಅಂತೋನಿ ಶೆರಾ
ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮಾಲಕ ಜಾನ್ ಕಾಡ್ರಸ್ ಅವರು ಪ್ರಾಸ್ತಾವಿಸಿ ವಿದ್ಯಾರ್ಥಿಗಳು ಆರ್ಥಿಕ ಕಷ್ಟದಿಂದ ಶಿಕ್ಷಣ ಮೊಟಕುಗೊಳಿದಂತೆ ನಮ್ಮ ಕಿಂಚಿತ್ ಸೇವೆ ಎಂದು ಹೇಳಿದರು.
ಮೂಲ್ಕಿ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಿ.ಎಸ್. ನ್ಯಾಯವಾದಿ, ನಾಯವಾದಿ ಹಂಝತ್ ಹೆಜಮಾಡಿ, ಜ್ಯೋತಿಷಿ ವಾದಿರಾಜ ಉಪಾಧ್ಯಾಯ, ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ನಾಯಕ್‌ ಮಾತನಾಡಿದರು. ರೋಶನ್ ಪುರ್ಟಾಡೋ ಸ್ವಾಗತಿಸಿ ನಿರೂಪಿಸಿದರು. ಸುಧಾಕರ್ ಹೆಜಮಾಡಿ ವಂದಿಸಿದರು.



Related posts

ಮುಲ್ಕಿ ವಿಜಯ ರೈತ ಸಂಘದ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಕಿಲ್ಪಾಡಿ ಬಂಡಸಲೆ ಆಯ್ಕೆ,

Mumbai News Desk

ಮೂಳೂರು : ಸಂಜೀವಿ ಸುಂದರ ವಿದ್ಯಾನಿಧಿ ಟ್ರಸ್ಟ್ ಉದ್ಘಾಟನೆ, ವಿದ್ಯಾನಿಧಿ ವಿತರಣೆ

Mumbai News Desk

ವಿಷಮುಕ್ತ ಆಹಾರಕ್ಕಾಗಿ ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳೋಣ – ಕೊಂಡೆವೂರು ಶ್ರೀಗಳು.

Mumbai News Desk

ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ 16ನೇ ವರ್ಷದ ವಾರ್ಷಿಕೋತ್ಸವ

Mumbai News Desk

ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನ – ವಾರ್ಷಿಕ ಬಂಡಿ ನೇಮೋತ್ಸವ ಸಂಪನ್ನ

Mumbai News Desk

ಮುಲ್ಕಿ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ರಾಜ್ಯ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ಮನೆಗೆ ಭೇಟಿ: ಗೌರವ ಸಮರ್ಪಣೆ

Mumbai News Desk