September 6, 2026
Mumbai News Kannada
ಪ್ರಕಟಣೆ

ಬೊಯಿಸರ್ : ಜುಲೈ ತಾ.10 ರಂದು ಸ್ವಾಮಿ ನಿತ್ಯನಂದ ಮಂದಿರದಲ್ಲಿ ಗುರುಪೂರ್ಣಿಮೆ ಆಚರಣೆ





ಸುದ್ದಿ ವಿವರ : ಪಿ.ಆರ್.ರವಿಶಂಕರ್

ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲೆಯ ಬೊಯಿಸರ್ ಪಶ್ಚಿಮದಲ್ಲಿನ ಸುಪ್ರಸಿದ್ಧ ಶ್ರೀ ಸ್ವಾಮಿ  ನಿತ್ಯಾನಂದ ಮಂದಿರದಲ್ಲಿ  ಇದೇ ಬರುವ 

 ತಾ.10 ಜುಲೈ 2025 ರ ಗುರುವಾರ  ಆಷಾಢ ಪೂರ್ಣಿಮೆಯಂದು ಗುರುಪೂರ್ಣಿಮೆ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.

ಪ್ರಾತಃಕಾಲ 6.30 ಕ್ಕೆ ಕಳಶ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಬೆಳಿಗ್ಗೆ  7 ಕ್ಕೆ  ಪಂಚಾಮೃತ ಅಭಿಷೇಕ ಹಾಗೂ ಗುರುದೇವರಿಗೆ ಸರ್ವಭಕ್ತಾದಿಗಳಿಂದ ಸೀಯಾಳ ಅಭಿಷೇಕ ಜರಗಲಿದೆ.

8. ಕ್ಕೆ ಪ್ರಾತಃ ಆರತಿಯ ಬಳಿಕ 9.30  ಕ್ಕೆ ವಿವಿಧ ಭಜನಾ ವೃಂದದವರಿಂದ ಭಕ್ತಿ ಗೀತೆ ಭಜನಾ ಕಾರ್ಯಕ್ರಮವಿದೆ. ಮದ್ಯಾಹ್ನ

 12.00 ಕ್ಕೆ ವಿಶೇಷ ಗುರುಪೂಜೆ ಜರಗಲಿದ್ದು  ಮಂಗಳ ಆರತಿಯ ಬಳಿಕ ಪ್ರಸಾದ ವಿತರಣೆ  (ಅನ್ನ ಸಂತರ್ಪಣೆ) ಜರಗಲಿದೆ.

           ಭಕ್ತಾಭಿಮಾನಿಗಳೆಲ್ಲರೂ ಸಹಕುಟುಂಬ ಬಂಧುಮಿತ್ರರೊಡಗೂಡಿ ಕಾರ್ಯಕ್ರಮಕ್ಕೆ

   ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದ್ಗುರುವಿನ ಸೇವಾ ಕಾರ್ಯಗಳಲ್ಲಿ ಭಾಗವಹಿಸಿ ಸದ್ಗುರು ಭಗವಾನ್ ಶ್ರೀ ಸ್ವಾಮಿ ನಿತ್ಯಾನಂದ ಗುರುದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ  ಮಂದಿರದ ವಿಶ್ವಸ್ಥ ಮಂಡಳಿ  ಹಾಗೂ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಭಕ್ತವೃಂದದ ಸರ್ವ ಸದಸ್ಯರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

   ಸುದ್ದಿ ವಿವರ : ಪಿ.ಆರ್.ರವಿಶಂಕರ್

               8483980035



Related posts

ಜ. 22 ರಂದು ಡೊಂಬಿವಲಿಯ ಶ್ರೀ ಜಗದಂಬ ಮಂದಿರದಲ್ಲಿ ಅಯೋಧ್ಯ ಮೂರ್ತಿ ಪ್ರತಿಷ್ಠೆಯ ಅಂಗವಾಗಿ ವಿಶೇಷ ಪೂಜೆ

Mumbai News Desk

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ -ಜೂನ್ 8 ರಂದು ಉಡುಪಿಯಲ್ಲಿ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರಿಗೆ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ – 2025 ಪ್ರದಾನ

Mumbai News Desk

ಡಿ.10 ರಂದು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಇದರ 10ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ.

Mumbai News Desk

ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರಿಂದ ಎ. 25ರಂದು ಭಜನಾ ಮಂಡಳಿ ಉದ್ಘಾಟನೆ

Mumbai News Desk

ದೊಡ್ಡಣ್ಣ ಗುಡ್ಡೆ  ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ , ಮೇ 2 :: ಶ್ರೀ ಕುಬೇರ ಲಕ್ಷ್ಮಿ ಪ್ರತಿಷ್ಠಾವರ್ಧಂತಿ 

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಶಹಾಡ್ : ಫೆ. 26ಕ್ಕೆ ಅಖಂಡ ಭಜನೆ

Mumbai News Desk