32 C
Mumbai
March 7, 2026
Mumbai News Kannada
ಸುದ್ದಿ

ನವಿ ಮುಂಬೈ – ಪ್ರಮುಖ ಪೈಪ್ ಲೈನ್ ಕಾಮಗಾರಿಗಾಗಿ ಜುಲೈ 18 – 19ರಂದು 18 ಗಂಟೆಗಳ ಕಾಲ ನೀರು ಸರಬರಾಜು ಕಡಿತ






ನವಿ ಮುಂಬೈ ಮನ್ಸಿಪಲ್ ಕಾರ್ಪೊರೇಷನ್ (NMMC) ಪ್ರದೇಶಕ್ಕೆ ನೀರು ಸರಬರಾಜು ಮಾಡುವ 1700 ಮಿಮೀ ವ್ಯಾಸದ ಮೋಬ್ರೆ ಮುಖ್ಯ ನೀರಿನ ಪೈಪ್ ಲೈನ್, ಪಾಮ್ ಬೀಚ್ ರಸ್ತೆಯಲಿದೆ. ನೆರೂಲ್ ನ ಸೆಕ್ಟರ್ 46ರ ಅಕ್ಷರ್ ಕಟ್ಟಡದ ಬಳಿ ಆಗಾಗ್ಗೆ ಸೋರಿಕೆಯನ್ನು ಎದುರಿಸುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಪೀಡಿತ ಪ್ರದೇಶದಲ್ಲಿ ಹೊಸ ಪೈಪ್ ಲೈನ್ ಅನ್ನು ಹಾಕಲಾಗಿದೆ. ಹೊಸ ಪೈಪ್ ಲೈನ್ ಅನ್ನು ಹಳೆಯ ಪೈಪ್ ಲೈನ್ ಗೆ ಎರಡು ತುದಿಗಳಲ್ಲಿ ಸಂಪರ್ಕಿಸುವ ಕೆಲಸವನ್ನು ಶುಕ್ರವಾರ ಜುಲೈ 18ರಂದು ಮಾಡಲಾಗುವುದು.
ಪರಿಣಾಮವಾಗಿ ಜುಲೈ 18, 2025ರ ಶುಕ್ರವಾರ ಬೆಳಿಗ್ಗೆ 10 ರಿಂದ ಜುಲೈ 19, 2025ರ ಶನಿವಾರ ಬೆಳಿಗ್ಗೆ 4:00ರ ವರೆಗೆ 18 ಗಂಟೆಗಳ ಕಾಲ ಮುಖ್ಯ ಪೈಪಲೈನ್ ನಿಂದ ನೀರು ಸರಬರಾಜು ಸ್ಥಗಿತಗೊಳ್ಳುತ್ತದೆ. ಈ ಅವಧಿಯಲ್ಲಿ ಬೇಲಾಪುರ, ನೆರೂಲ್, ವಾಶಿ, ತುರ್ಬೆ, ಸಾನ್ಪಾಡ, ಕೊಪರ್ಖರ್ನೆ, ಘಂನ್ಸೋಲಿ, ಐರೋಲಿಯಲ್ಲಿ ನೀರು ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಅಲ್ಲದೆ ಮುಖ್ಯ ಪೈಪಲೈನ್ ನಿಂದ ನೇರ ನೀರಿನ ಸಂಪರ್ಕ ಹೊಂದಿರುವ ಪ್ರದೇಶಗಳು ಮತ್ತು ಖಾರ್ಗರ್, ಕಾಮೋಥೆ ಯಂತಹ ಸಿಡ್ಕೋ ವಲಯಗಳು ಸಹ ಪರಿಣಾಮ ಬೀರುತ್ತವೆ.
ಜುಲೈ 18 ಶುಕ್ರವಾರ ಸಂಜೆ ಮತ್ತು ಜುಲೈ 19 ಶನಿವಾರ ಬೆಳಗ್ಗೆ ನೀರು ಸರಬರಾಜು ಇರುವುದಿಲ್ಲ, ಜುಲೈ 19 ಶನಿವಾರ ಸಂಜೆ ನಿವಾಸಿಗಳು ಕಡಿಮೆ ಒತ್ತಡ ಅಥವಾ ಅಸಮರ್ಪಕ ನೀರು ಸರಬರಾಜನ್ನು ಎದುರಿಸಬಹುದು. ಈ ಅವಧಿಯಲ್ಲಿ ನಾಗರಿಕರು ನೀರನ್ನು ವಿವೇಚನೆಯಿಂದ ಬಳಸಬೇಕು ಎಂದು ನವಿ ಮುಂಬೈ ಮನ್ಸಿಪಲ್ ಕಾರ್ಪೊರೇಷನ್ ವಿನಂತಿಸಿದೆ.



Related posts

ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮುಂಬಯಿ ನಗರಕ್ಕೆ – ಭಕ್ತಿ ಪೂರ್ವಕ ಸ್ವಾಗತ

Mumbai News Desk

ಮಂಗಳೂರಿನ ರೈಲು ಬಳಕೆದಾರರ ದೀರ್ಘ ಕಾಲದ ಬೇಡಿಕೆಗಳ ಈಡೇರಿಕೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ರೈಲ್ವೆ ಪ್ರಯಾಣಿಕರ ಸಮಿತಿ ಒತ್ತಾಯ.

Mumbai News Desk

ತೊಕ್ಕೊಟ್ಟು ಸಾಯಿ ಪರಿವಾರ್ ನ ಆಹಾರ ಸಾಮಗ್ರಿ‌ ಕಿಟ್ ಸ್ವೀಕರಿಸಿದ ನಿಜವಾದ ಅಶಕ್ತ ಬಂದುಗಳು, ಧನ್ಯತಾ ಭಾವ, ಸಾಯಿ ಸೇವೆಗೆ ಕೃತಜ್ಞತೆ. ತೆನೆಗೆ ಹಾಲೆರೆದು ಉದ್ಘಾಟಿಸಿದ ಜೀವ ರಕ್ಷಕ ಈಶ್ವರ್ ಮಲ್ಪೆ

Mumbai News Desk

ರಂಗಚಾವಡಿ” ವರ್ಷದ ಹಬ್ಬ, ಹಿರಿಯ ರಂಗಕರ್ಮಿ ಲಯನ್ ಕಿಶೋರ್ ಡಿ.ಶೆಟ್ಟಿ ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ* 

Mumbai News Desk

ಬೊಯಿಸರ್  ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಗುರುಪೂರ್ಣಿಮೆ

Mumbai News Desk

ತೀಯಾ ಫ್ಯಾಮಿಲಿ ಯು.ಎ.ಇ.ಯ  ವತಿಯಿಂದ ಭಕ್ತಿ ಸಡಗರದ ದುರ್ಗಾ ಪೂಜೆ 

Mumbai News Desk