July 23, 2026
Mumbai News Kannada
ಮಹಾರಾಷ್ಟ್ರ

ಶ್ರೀ ರಾಮಚಂದ್ರಾಪುರ ಮಠದ ಭಾರತ ಮಂಡಲ, ಕೊಲಾಡಿನ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ವನಮಹೋತ್ಸವ







ಶ್ರೀ ರಾಮಚಂದ್ರಾಪುರ ಮಠದ ಭಾರತ ಮಂಡಲ – ಮುಂಬಯಿ ವಲಯದ ರಾಯಗಡ ಜಿಲ್ಲೆಯ ಕೊಲಾಡಿನಲ್ಲಿರುವ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವನಮಹೋತ್ಸವವನ್ನು ದಿನಾಂಕ 20/07/2025, ರವಿವಾರದಂದು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಡೊ೦ಬಿವಲಿ ವಲಯದ ಸದಸ್ಯರು, ಮುಂಬಯಿ ವಲಯದ ಅಧ್ಯಕ್ಷರು  ಈಶ್ವರಿ ಪ್ರಕಾಶ ಭಟ್ ಹಾಗೂ ಉಪಾಧ್ಯಕ್ಷರು  ರಮಣ ಭಟ್ಟ್ ಮತ್ತು ಮುಂಬಯಿ – ಡೊಂಬಿವಲಿ ವಲಯಗಳ ಸಮಿತಿಯ ಹಲವಾರು ಸದಸ್ಯರು ಮತ್ತು ಕೊಲಾಡ ಅರಣ್ಯ ವಿಭಾಗದ ಅಧಿಕಾರಿಗಳು ಪಾಲ್ಗೊಂಡು ಬಿಲ್ವ, ಶಮೀ, ಮಾವು, ನೆಲ್ಲಿ ಮುಂತಾದ ಅನೇಕ ಜಾತಿಯ ಸಸ್ಯಗಳನ್ನು  ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ನೆಡುವ ಮೂಲಕ ವನಮಹೋತ್ಸವವನ್ನು ಬಹಳ ಉತ್ಸಾಹದಿಂದ ಆಚರಿಸಿದರು. 


 ಕೃಷ್ಣ ಭಟ್ ಗುಡ್ಡೇಬಾಳ ಹಾಗೂ ಪರಿವಾರದವರು ಈ ಕಾರ್ಯಕ್ರಮದ ವ್ಯವಸ್ಥೆಯನ್ನು ಚೆನ್ನಾಗಿ ನಿರ್ವಹಿಸಿದರು. ಮುಂಬಯಿಯ ಎಲ್ಲ ಹವ್ಯಕ ಬಾಂಧವರ ಕೂಡುವಿಕೆಯಲ್ಲಿ ಈ ಪರಿಸರ ಬೆಳೆಸಿ ಉಳಿಸುವ ಕಾರ್ಯಕ್ರಮ ಈ ವರ್ಷ ಶ್ರೀಸಂಸ್ಥಾನದವರ ಐವತ್ತನೇ ವರ್ಧಂತಿಯಾಗಿರುವುದರಿಂದ ವಿಶೇಷವಾಗಿ ಬಹಳ ಸಂತೋಷದಿಂದ ನೆರವೇರಿತು.

B. Dinesh Kulal

Mob.: 9821868674

B. Dinesh Kulal

Mob.: 9821868674



Related posts

ಮಹಾರಾಷ್ಟ್ರ: ಸಚಿವ ಸ್ಥಾನಕ್ಕೆ ಮಾಣಿಕ್ರಾವ್ ಕೊಕಾಟೆ ರಾಜೀನಾಮೆ!

Mumbai News Desk

ಮಾಹಾರಾಷ್ಟ್ರ ವಿಧಾನ ಸಭಾ ಚುನಾವಣೆ : “ಎಣ್ಣೆ” ಪ್ರಿಯರಿಗೆ ವಿಶೇಷ ಮಾಹಿತಿ.

Mumbai News Desk

ಬೊಯಿಸರ್ ಸಾರ್ವಜನಿಕ ಗಣೇಶೋತ್ಸವ ಮಂಡಲದ 100 ನೆಯ ವರ್ಷದ ಸಂಭ್ರಮಾಚರಣೆ.

Mumbai News Desk

ಮಹಾರಾಷ್ಟ್ರ: ಫಡ್ನವಿಸ್ ಮಹಾರಾಷ್ಟ್ರದ ನೂತನ ಸಿಎಂ, ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ.

Mumbai News Desk

ಮಹಾರಾಷ್ಟ್ರ ಎಸ್‌ಎಸ್‌ಸಿ ಫಲಿತಾಂಶ 2026: ಮೇ 8 ರಂದು 10ನೇ ತರಗತಿ ಫಲಿತಾಂಶ ಪ್ರಕಟ

Mumbai News Desk

ಮಹಾರಾಷ್ಟ್ರ ಮಂಡಳಿಯ ಎಚ್ಎಸ್ ಸಿ(HSC), ಎಸ್ ಎಸ್ ಸಿ (SSC),2026ರ ಪರೀಕ್ಷೆಯ ವೇಳಾ ಪಟ್ಟಿ ಬಿಡುಗಡೆ

Mumbai News Desk