32 C
Mumbai
March 7, 2026
Mumbai News Kannada
ಮುಂಬಯಿ

ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ , ವರ್ಲಿ : ಮಹಿಳಾ ವಿಭಾಗದ ವತಿಯಿಂದ ಆಟಿದ ಕೂಟ.ಆಟಿದ ಕೂಟದ  ಮೂಲಕ ಸಂಬಂಧಗಳು ಗಟ್ಟಿಯಾಗುತ್ತದೆ – ರಮೇಶ್ ಗುರುಸ್ವಾಮಿ





ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ಅಪ್ಪಾಜಿ ಬೀಡು, ವರ್ಲಿಯ, ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ವತಿಯಿಂದ
ತುಳುನಾಡ ಸಂಸ್ಕೃತಿದ ಆಟಿದ ಕೂಟ ಕಾರ್ಯಕ್ರಮ ಜು28 ರಂದು ನಡೆಯಿತು.
   ಸಮಿತಿಯ  ಸದಸ್ಯರಿಂದ ಸಂಜೆ  ಭಜನೆ, ಬಳಿಕ ಆರತಿ ನಡೆಯಿತು.  ಪೂಜಾ ವಿಧಿಗಳು ನಡೆದ ಬಳಿಕಆಟಿದ ಕೂಟ  ಬಗ್ಗೆ ಫೌಂಡೇಶನ್ ನ  ಟ್ರಸ್ಟಿ ರಘುನಾಥ್ ಎನ್ ಶೆಟ್ಟಿ ಮಾತನಾಡಿ ಹಿಂದೆ  ತುಳುನಾಡಿನಲ್ಲಿ ನಮ್ಮವರು ಆಚರಿಸಿಕೊಂಡು ಬರುತ್ತಿದ್ದ ಆಚರಣೆಗಳು, ವಿಚಾರಗಳು, ಅಂದಿನ ತಿಂಡಿ ತಿನಿಸುಗಳು ತಿಳಿಸುತ್ತಾ ಯುವ ಸಮುದಾಯ ಇದನ್ನೆಲ್ಲ ತಿಳಿಸುವುದಕ್ಕೆ ಸಂಘ ಸಂಸ್ಥೆಗಳು ಇಂಥ ಕಾರ್ಯಕ್ರಮಗಳನ್ನು ಆಚರಿಸ್ಕೊಂಡು ಬರುತ್ತಿದೆ ಎಂದು ತಿಳಿಸಿದರು, 

ಫೌಂಡೇಶನ್ ನ ಸಂಸ್ಥಾಪಕ ರಮೇಶ್ ಗುರುಸ್ವಾಮಿ ಪಡುಬಿದ್ರಿ  ಮಾತನಾಡುತ್ತಾ ಮಹಿಳೆಯರು ಧಾರ್ಮಿಕತೆಯೊಂದಿಗೆ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ವರ್ಷಕ್ಕೆ ಒಂದು ಸರಿಯಾದರೂ ತಮ್ಮ ಮನೆಯಲ್ಲಿ ಮಾಡಿದ ಸವಿಯಾದ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ಎಲ್ಲರಿಗೂ ನೀಡುವ ಉದ್ದೇಶದಿಂದ ಈ ಕೂಟ ಆಯೋಜಿಸಿದರೆ, ಬಹಳ ಅರ್ಥಪೂರ್ಣವಾಗಿದೆ. ಮುಂದಿನ ಯುವ ಪೀಳಿಗೆಗೆ ಆದರ್ಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ, ಆಡಳಿತ ಮಂಡಳಿ ಪದಾಧಿಕಾರಿಗಳು ಸದಸ್ಯರು ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ  ಕಾರ್ಯಾಧ್ಯಕ್ಷೆ ಕವಿತಾ ಶೆಟ್ಟಿ ಸ್ವಾಗತಿಸಿದರು. ಉಪಕಾರ್ಯಧ್ಯಕ್ಷೆ ದಿವ್ಯ  ಪಿ. ಶೆಟ್ಟಿ ತಿಂಡಿ ತಿನಿಸುಗಳನ್ನು ಮಾಡಿ ತಂದಿರುವ ಮಹಿಳಾ ಸದಸ್ಯರ ಹೆಸರನ್ನು ವಾಚಿಸಿದರು. ಮಹಿಳಾ ಸದಸ್ಯರು ಮತ್ತು ರಮೇಶ್ ಗುರುಸ್ವಾಮಿ ಎಲ್ಲರಿಗೂ ಉಡುಗೊರೆಯನ್ನು ನೀಡಿ ಗೌರವಿಸಿದರು.



Related posts

ಡೊಂಬಿವಲಿ: ಶ್ರೀ ಜೈ ಭವಾನಿ ಶನೀಶ್ವರ ಮಂದಿರದಲ್ಲಿ ಶನಿ ಮಹಾಪೂಜಾ ಮಹೋತ್ಸವ

Mumbai News Desk

ಬಿಲ್ಲವರ ಅಸೋಸಿಯೇಶನಿನ ಭಾಂಡುಪ್ ಸ್ಥಳೀಯ ಕಚೇರಿಯಲ್ಲಿ ಆಟಿದ ನೆನಪು ಕಾರ್ಯಕ್ರಮ.

Mumbai News Desk

ಬಂಟರ ಭವನದಲ್ಲಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 25ನೇ ಸಂಸ್ಮರಣೆ.

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಕೋಪರಖೈರನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ 46ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ : 79ನೇ ವಾರ್ಷಿಕ ಮಹಾಸಭೆ,

Mumbai News Desk

ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮುಂಬಯಿ ಇದರ 137 ನೇ ವಾರ್ಷಿಕ ಮಹಾಸಭೆ

Mumbai News Desk